ಹೂ, ಒಡಕಲು ಬಿಂಬ, ಮಾನಿಷಾದ: ಮೂರು ನಾಟಕಗಳು

Author : ಗಿರೀಶ ಕಾರ್ನಾಡ

Pages 84

₹ 70.00




Year of Publication: 2017
Published by: ಮನೋಹರ ಗ್ರಂಥ ಮಾಲಾ
Address: ಲಕ್ಷ್ಮಿ ಭವನ, ಸುಭಾಸ ರಸ್ತೆ, ಧಾರವಾಡ-1
Phone: 98454 47002

Synopsys

ಗಿರೀಶ ಕಾರ್ನಾಡ ಅವರ ಮೂರು ಏಕಾಂಕದ ಮಾದರಿಯ ನಾಟಕಗಳ ಸಂಗ್ರಹ ಇದು. ’ಹೂವು’ ಆಕಾಶವಾಣಿಗಾಗಿ ರಚಿಸಿದ ರೂಪಕ. ’ಮಾನಿಷಾದ’ ಮೊದಲು ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು. ನಂತರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ಏಕಾಂಕ ಸಂಗ್ರಹದಲ್ಲಿ ಸೇರಿತ್ತು.’ಮಾನಿಷಾದ’ವು ವಾಲ್ಮಿಕಿಯ ಕ್ರೌಂಚವಧೆಯನ್ನು ಆಧರಿಸಿದ ಕತೆಯುಳ್ಳದ್ದು. ’ಒಡಕಲು ಬಿಂಬ’ ತಂತ್ರಜ್ಞಾನ-ಆಧುನಿಕತೆಯನ್ನು ಬಳಸಿಕೊಂಡ ಅಪರೂಪದ ನಾಟಕ. ಟೆಲಿವಿಷನ್‌ ಕಾರ್ಯನಿರ್ವಹಿಸುವ ನಿರೂಪಕಿಯ ಬಿಂಬ ಎದುರಾಗಿ ಚರ್ಚಿಸುವ-ಹರಟುವ ಕತೆಯನ್ನು ಒಡಕಲು ಬಿಂಬ ಒಳಗೊಂಡಿದೆ.

 

About the Author

ಗಿರೀಶ ಕಾರ್ನಾಡ
(19 May 1934 - 10 June 2019)

ನಾಟಕಕಾರ ಗಿರೀಶ್ ಕಾರ್ನಾಡ್ ಅವರು  ರಂಗಭೂಮಿ- ಚಲನಚಿತ್ರ ನಟರಾಗಿ, ನಿರ್ದೇಶಕರಾಗಿ,  ಸಂಗೀತ- ನಾಟಕ ಅಕಾಡೆಮಿಗಳ ಅಧ್ಯಕ್ಷರಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾಗಿದ್ದಾರೆ. ಕತೆ, ವಿಮರ್ಶೆ ಮತ್ತು ತಮ್ಮ ಆತ್ಮಕತೆ ‘ಆಡಾಡತ ಆಯುಷ್ಯ’ಗಳನ್ನು ಬರೆದಿದ್ದರೂ ನಾಟಕಕಾರ ಎಂದೇ ಚಿರಪರಿಚಿತರು. ಗಿರೀಶ್ 1934ರ ಮೇ 19ರಂದು ಮಹಾರಾಷ್ಟ್ರದ ಮಾಥೇರದಲ್ಲಿ ಜನಿಸಿದರು. ಉತ್ತರಕನ್ನಡದ ಶಿರಸಿಯಲ್ಲಿ ಪ್ರಾಥಮಿ ಶಿಕ್ಷಣ ಧಾರವಾಡದ  ಬಾಸೆಲ್ ಮಿಶನ್ ಪ್ರೌಢಶಿಕ್ಷಣ, ಹಾಗೂ ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣ  ಪಡೆದ ಬಳಿಕ ಪ್ರತಿಷ್ಠಿತ ರೋಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್ ಫರ್ಡಿನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದರು.  ಆಕ್ಸ್ ಫರ್ಡಿನ ಡಿಬೇಟ್ ಕ್ಲಬ್ಬಿಗೆ ಅಧ್ಯಕ್ಷರಾಗಿ ಆಯ್ಕೆಯಾದ ...

READ MORE

Related Books