ಧರಣಿ ಮಂಡಲ ಮಧ್ಯದೊಳಗೆ-ವಿಶ್ವಕಥಾಕೋಶ-೧

Author : ನಿರಂಜನ

Pages 200

₹ 75.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್ 11, ಕ್ರೆಸೆಂಟ್ ರಸ್ತೆ, ಕುಮಾರಕೃಪ ಪೂರ್ವ, ಬೆಂಗಳೂರು-560001
Phone: 08022161900

Synopsys

ವಿಶ್ವಕಥಾಕೋಶದ ಮೊದಲ ಸಂಪುಟದಲ್ಲಿ ಕನ್ನಡದ ಪ್ರಾತಿನಿಧಿಕ ಕತೆಗಳಿವೆ. ಟಾಲ್‌ಸ್ಟಾಯ್‌ ಮಹರ್ಷಿಯ ಭೂರ್ಜ ವೃಕ್ಷಗಳು -ಶ್ರೀನಿವಾಸ, ನಾನು ಕೊ೦ದ ಹುಡುಗಿ -ಆನಂದ, ಮಣ್ಣಿನ ಮಗ- ಅ.ನ. ಕೃಷ್ಣರಾಯ, ಮೋಚಿ- ಭಾರತೀಪ್ರಿಯ, ಪ್ರಾಯಶ್ಚಿತ್ತ -ಗೊರೂರು ರಾಮಸ್ವಾಮಿ ಅಯ್ಯಂಗಾರ್‌, ತುಚೀಪ್‌, ತುದಾಂಡ್‌, ತುಬದ್‌-ರೆಡೀ -ಚದುರಂಗ, 0-0=0 -ತ.ರಾ.ಸು., ಬೂಟ್‌ ಪಾಲಿಶ್‌ -ಬಸವರಾಜ ಕಟ್ಟೀಮನಿ, ಮುಕ್ಕಣ್ಣನ ಮುಕ್ತಿ -ಕೋ. ಚೆನ್ನಬಸಪ್ಪ, ಕೋಡೀಹಳ್ಳಿಯ ಜಮೀನುದಾರರು -ಪಾಟೀಲ ಪುಟ್ಟಪ್ಪ, ಕಾಡು ಮಲ್ಲಿಗೆ-ವ್ಯಾಸರಾಯ ಬಲ್ಲಾಳ, ಸಮಸ್ಯೆಯ ಮಗು -ತ್ರಿವೇಣಿ, ಮಣ್ಣುದಿಬ್ಬದ ಮೇಲೆ -ಅನುಪಮಾ ನಿರಂಜನ, ಹನುಮಾಪುರದಲ್ಲಿ ಹನುಮಜಯಂತಿ -ವೀಣಾ ಶಾಂತೇಶ್ವರ, ನಲ್ಲಿಯಲ್ಲಿ ನೀರು ಬಂದಿತು !! -ಕೆ. ಸದಾಶಿವ, ಕುರುಡು ಕಾಂಚಾಣ -ಪಿ. ಲಂಕೇಶ್‌, ಪ್ರಕೃತಿ -ಯು.ಆರ್‌. ಅನಂತಮೂರ್ತಿ, ಹೊಲತಿಯ ಹಾಳು -ಕ. ವೆಂ. ರಾಜಗೋಪಾಲ, ಮಾರಿಕೊಂಡವರು -ದೇವನೂರ ಮಹಾದೇವ, ರಾಜಮಾ -ಶಿವೇಶ್ವರ ದೊಡ್ಡಮನಿ, ಮುನಿಸಾಮಿಯ ವಾಲಗ-ಅ. ಸೋಗಾಲ, “ಎಣ್ಣೆ ! ಚಿಮಿಣಿ ಎಣ್ಣೆ ...” -ನಿರಂಜನ.

About the Author

ನಿರಂಜನ
(15 June 1924 - 12 March 1992)

ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು.    ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...

READ MORE

Related Books