ನಕ್ಸಲ್ ವರಸೆ

Author : ಕೆ. ಸತ್ಯನಾರಾಯಣ

Pages 160

₹ 115.00




Year of Publication: 2010
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಕಥೆಗಾರ ಕೆ. ಸತ್ಯನಾರಾಯಣ ಅವರ ಇಲ್ಲಿಯ ಕತೆಗಳು ಪ್ರಗತಿಯ ಧಾವಂತದಲ್ಲಿರುವ ನಮ್ಮ ಕಾಲದ, ಸಮಾಜದ ಬಿಕ್ಕಟ್ಟುಗಳನ್ನು ಸೂಕ್ಷ್ಮವಾಗಿ ಗಮನಿಸಿ ವ್ಯಾಖ್ಯಾನಿಸುತ್ತವೆ. ಮಲೆನಾಡಿನ ಹಳ್ಳಿಗಳ ಪರಿಸ್ಥಿತಿಗಳೇನು ಎಂಬುದನ್ನು ಕಥೆಗಳ ಮೂಲಕ ಲೇಖಕರ ಓದುಗರಿಗೆ ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ. 

ಈ ಪುಸ್ತಕಕ್ಕೆ ಮುನ್ನುಡಿ ಬರೆದಿರುವ ಮುರಳೀಧರ ಉಪಾಧ್ಯ ಹಿರಿಯಡಕ ಅವರು ’ಸತ್ಯನಾರಾಯಣರ ಕಣ್ಣ ಕನ್ನಡಿಯಲ್ಲಿ ಹೊಳೆದ ಬಿಂಬಗಳು ಹಲವಾರು. ವರ್ತಮಾನದ ಬದುಕಿನ ಕಟು ವಾಸ್ತವತೆಯ‌ ಅರಿವಿನಿಂದ ಹುಟ್ಟಿಕೊಂಡ ಗಾಢವಾದ ವಿಷಾದ ಹಾಗೂ ಅದರ ಮಧ್ಯೆಯೂ ಮೊಳಕೆಯೊಡೆಯುತ್ತಿರುವ ಜೈವಿಕ ಚಲನಶೀಲ ಸಂಬಂಧಗಳ ಬಗೆಗಿನ ಆಶಾವಾದ ಇವರ ಕತೆಗಳ ಪ್ರಧಾನ ಸಾಧನೆಯಾಗಿದೆ’ ಎಂದಿದ್ದಾರೆ. ಇದು ಕೃತಿಯ ಆಳ ಹಾಗೂ ಅಗತ್ಯವನ್ನು ವಿವರಿಸುವಂತಿದೆ. 

About the Author

ಕೆ. ಸತ್ಯನಾರಾಯಣ
(21 April 1954)

ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.  1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ.  ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...

READ MORE

Related Books