ಕೃಷ್ಣಾಯಿ ಜೋಗುಳ

Author : ಬಂಡು ಕೋಳಿ

Pages 158

₹ 150.00




Year of Publication: 2021
Published by: ವಿನಿಮಯ ಪುಸ್ತಕ ಮನೆ
Address: ತಾಳಿಕೋಟಿ- 586 214

Synopsys

ಲೇಖಕ ಬಂಡು ಕೋಳಿ ಅವರ ಕೃಷ್ಣಾಯಿ ಜೋಗುಳ ಕಥೆಗಳ ಸಂಕಲನವಾಗಿದೆ. ಬಾಳಾಸಾಹೇಬ ಲೋಕಾಪುರ ಅವರು ಈ ಕಥಾಸಂಕಲನಕ್ಕೆ ಮುನ್ನುಡಿ ಬರೆದಿದ್ದಾರೆ.

ಅವರು ಹೇಳುವಂತೆ, ‘ಅಪ್ಪಟ ಗ್ರಾಮೀಣ ಸಂಗತಿಗಳನ್ನು, ಸೊಗಡನ್ನು ಬಿತ್ತರಿಸುವ ವಿಭಿನ್ನ ಕಥಾ ಸಂಕಲನ ಇದಾಗಿದೆ. ಇಲ್ಲಿನ ಕಥೆಗಳು ಮರಾಠಿ ಮಿಶ್ರಿತ ಕನ್ನಡ ಭಾಷೆಯೊಂದಿಗೆ ಒಡನಾಡುತ್ತವೆ. ಆ ಭಾಷೆಯ ದನಿ ಈ ಕತೆಗಳಲ್ಲಿ ಕತೆಗಾರ ಅಚ್ಚುಕಟ್ಟಾಗಿ ಹಿಡಿದಿಟ್ಟಿದ್ದಾರೆ. ಬದುಕಿನ ಅನಂತ ಗೋಜಲುಗಳು, ಬವಣೆಗಳು, ಜೀವಿಗಳ ಒದ್ದಾಟಗಳು, ಶ್ರೀಮಂತರ ಹುನ್ನಾರಗಳು ಇಲ್ಲಿ ಕತೆಗಳಾಗಿ ಮೈದಾಳಿವೆ. ನೋಡುವ ಕಣ್ ದೃಷ್ಟಿಯನ್ನು ಮೀರಿ, ಕಾಣುವ ಕಕ್ಕುಲಾತಿ ಇಲ್ಲಿಯ ಕತೆಗಳ ವಸ್ತುವನ್ನು ಮುನ್ನಡೆಸಿವೆ. ಈ ಕತೆಗಳು ಕಥನ ಶಿಲ್ಪದ ಸಿದ್ದಮಾದರಿಯನ್ನು ಮುರಿದು ಇವು ಹೀಗೆ ನೋಡಿ, ಇವು ನನ್ನ ಮಾದರಿ ಎಂಬಂತೆ ರೂಪತಳೆದಿವೆ’ ಎಂದಿದ್ದಾರೆ.

About the Author

ಬಂಡು ಕೋಳಿ
(15 May 1980)

ಬೆಳಗಾವಿ ಜಿಲ್ಲೆಯ ಉಗಾರ ಬುದ್ರುಕ ಮೂಲದವರಾದ ಬಂಡು ಧನಪಾಲ ಕೋಳಿ ಅವರು ಬಂಡು ಕೋಳಿ ಎಂಬ ಕಾವ್ಯ ನಾಮವನ್ನು ಹೊಂದಿದ್ದಾರೆ. ಧನಪಾಲ ಹಾಗೂ ಲಕ್ಷ್ಮೀ ಬಾಯಿಯವರ ಮಗನಾಗಿ 15-05-1980ರಂದು ಜನಿಸಿದರು. ಎಮ್.ಎ. ಬಿ.ಇಡಿ ಶಿಕ್ಷಣವನ್ನು ಪೂರ್ತಿಗೊಳಿಸಿ, ಅಥಣಿಯ ವಿದ್ಯಾವರ್ಧಕ ಸಂಸ್ಥೆಯಲ್ಲಿ ಶಿಕ್ಷಣ ವೃತ್ತಿ ಪ್ರಾರಂಭಿಸಿದರು. ಪದವಿ ಕಾಲೇಜಿನ ಬೋಧಕರಾದ ಎಂ.ಬಿ.ಹೂಗಾರ ಅವರ ಪ್ರೋತ್ಸಾಹದಿಮದ ಸಾಹಿತ್ಯ ಓದು ಹಾಗೂ ಸಾಹಿತ್ಯ ಕ್ಷೇತ್ರದತ್ತ ಬರಲು ಕಾರಣವಾಯಿತು. ಗಾಯನ ಹಾಗೂ ಅಭಿನಯ ಇವರ ಇತರೇ ಹವ್ಯಾಸಗಳು. ಇವರ ಪ್ರಕಟಿತ ಕೃತಿಗಳು ; ಹುಡುಕಾಟ(2011) ಕಾದಂಬರಿ, ಹೃದಯಧಾರೆ(2018) ಕವನ ಸಂಕಲನ, ಕೃಷ್ಣಾಯಿ ಜೋಗುಳ(2021) ...

READ MORE

Related Books