ಪಚ್ಚೆ ರೆಸಾರ್ಟ್

Author : ಯು.ಆರ್. ಅನಂತಮೂರ್ತಿ

Pages 64

₹ 60.00




Year of Publication: 2017
Published by: ಅಭಿನವ ಪ್ರಕಾಶನ
Address: 17/18-2, ಮೊದಲನೆ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು- 560040
Phone: 9448804905

Synopsys

‘ಪಚ್ಚೆ ರೆಸಾರ್ಟ್’ ಯು.ಆರ್. ಅನಂತಮೂರ್ತಿ ಅವರ ಕಥೆ ಮತ್ತು ಕವಿತೆಗಳ ಸಂಕಲನ. ಇಹದ ಹಂಗಿಗೆ ಸಿಕ್ಕಿಬಿದ್ದೂ ಬಿಡಿಸಿಕೊಳ್ಳುವ ಶೋಧವಾಗಿದೆ ಎನ್ನುತ್ತಾರೆ ಅನಂತಮೂರ್ತಿ.

ಜಗದ ಅನುರಾಗಿಯಾದವನಿಗೆ ಕಳೆದು ಹೋಗುವುದು ಯಾವುದೂ ಇಲ್ಲ. ಮನುಷ್ಯ ಬೌದ್ಧಿಕವಾಗಿ ಎಷ್ಟೇ ಎತ್ತರವನ್ನು ಸಾಧಿಸಿದರೂ ಕಳೆದುಹೋಗಲಾರದ ಕೆಲವು ಭಾವನೆಗಳೂ ನಮ್ಮೊಳಗೆ ಅಡಕವಾಗಿದ್ದು ಅವಕಾಶ ಸಿಕ್ಕಾಗಲೆಲ್ಲಾ ದಿಗ್ಗನೆದ್ದು ನಮ್ಮನ್ನು ಸಮ್ಮೋಹನಗೊಳಿಸುತ್ತಿರುತ್ತವೆ. ಈ ಸಮ್ಮೋಹಕ ಅಂಶಗಳೇ ನಮ್ಮಲ್ಲಿ ಮಗುತ್ವವನ್ನು ಜಾಗೃತಗೊಳಿಸಿ ಜಗತ್ತನ್ನು ಹೊಸದಾಗಿ ನೋಡುವಂತೆ ಮಾಡುತ್ತವೆ.

ಇಲ್ಲಿಯ ಕಥೆ-ಕವಿತೆಗಳು ನಮ್ಮೊಳಗಿನ ಯೌವ್ವನಕ್ಕೆ ಹುರುಪು ತುಂಬಿ ಬೆಚ್ಚನೆಯ ಸ್ಪರ್ಶವನ್ನು ನೀಡುತ್ತವೆ. ಈ ಸಂಕಲನದ ಮುಖ್ಯಕಥೆ ‘ಪಚ್ಚೆ ರೆಸಾರ್ಟ್’ ಕನ್ನಡ ಸಾಹಿತ್ಯಲೋಕದ ಅಪರೂಪದ ನೆಲೆಯೊಂದರಲ್ಲಿ ನಿರೂಪಿತವಾಗಿರುವಂಥದ್ದು, ಹೆಣ್ಣಿನ ಅಂತರಂಗಿಕ ಭಾವನೆಗಳಿಗೆ ಹೊಸ ಪರಿಭಾಷೆಯನ್ನು ಕೊಡಬಲ್ಲ ಸೂಕ್ಷ್ಮತ್ವ ಈ ಕಥೆಗಿದೆ. ತನ್ನ ಎಲ್ಲ  ನೆನಪುಗಳನ್ನು, ಕನಸುಗಳನ್ನು ಅದರ ತೀವ್ರತೆಯೊಂದಿಗೆ ಕಾಪಿಟ್ಟುಕೊಳ್ಳುವ ’ಭಾಗೇರತ” ಎನ್ನುವ ಸಂಪ್ರದಾಯದೊಳಗಿನ ರತಿಯ ನಿರೂಪಣೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಈ ಕಥೆಯೊಂದೇ ಪ್ರಯೋಗಶೀಲತೆಗೆ ಎಲ್ಲಿ ಎಲ್ಲೆ, ಆಕಾಶದ ಅನಂತತೆಗೆ ಎಲ್ಲಿ ಕೊನೆ ಎನ್ನುವ ಅಚ್ಚರಿಯ ಭಾವ ಸುಳಿಯುವಂತೆ ಮಾಡುತ್ತವೆ. ಇಂತಹ ಹಲವು ಕಥೆಗಳು, ಕವಿತೆಗಳು ಈ ಸಂಕಲನದಲ್ಲಿವೆ.

About the Author

ಯು.ಆರ್. ಅನಂತಮೂರ್ತಿ
(21 December 1932 - 22 August 2014)

ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...

READ MORE

Related Books