ಬಹಿಷ್ಕಾರ

Author : ಎಚ್.ಎಸ್. ಬೇನಾಳ

Pages 114

₹ 110.00




Year of Publication: 2018
Published by: ಸಹನಾ ಪ್ರಕಾಶನ
Address: ಪ್ಲಾಟ್‌ ನಂ. 408, ಸಿ.ಐ.ಬಿ ಕಾಲೋನಿ, ಕೇಂದ್ರ ಬಸ್‌ ನಿಲ್ದಾಣದ ಹಿಂದುಗಡೆ, ಎಂಎಸ್.ಕೆ. ಮಿಲ್‌ ರಸ್ತೆ, ಗುಲಬರ್ಗಾ-585103
Phone: 9901177823

Synopsys

ಎಚ್‌. ಎಸ್‌ ಬೇನಾಳ ಅವರ ಮೊದಲ ಕತಾಸಂಕಲನ ಇದಾಗಿದ್ದು ಕರ್ನಾಟಕ ರಾಜ್ಯದ ಶೋಷಿತ ಸಮುದಾಯದ ಬುದುಕು, ಬವಣೆಗಳನ್ನು ಅತ್ಯಂತ ವಿಶಿಷ್ಟವಾಗಿ ಅಭಿವ್ಯಕ್ತಿಸಿದ್ದಾರೆ. ಒಟ್ಟು ಹನ್ನೊಂದು ಕತೆಗಳಲ್ಲಿನ ಕಥಾ ಸಾಹಿತ್ಯದ ಶೈಲಿ, ವಿನ್ಯಾಸ, ತಂತ್ರಗಾರಿಕೆಗಿಂತ ಮುಖ್ಯವಾಗಿ ಇಲ್ಲಿಯ ವಸ್ತುಗಳು ಸಹೃದಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. “ಮಾನವೀತೆಯನ್ನು ಸಾರಬಲ್ಲ ಸಂಸ್ಕಾರಗಳಿವೆ, 'ಬಹಿಷ್ಕಾರ' ವೆಂಬ ಶೀರ್ಷಿಕೆಯು ಒಂದು ನಿರಂತರವಾದ ಚಿಂತನೆಯ ಪಥದೆಡೆಗೆ ನಮ್ಮ ಆಲೋಚನೆಯನ್ನು ತಿರುಗಿಸಿ ನಿಲ್ಲಿಸುತ್ತದೆ” ಎನ್ನುತ್ತಾರೆ ಬಂಡಾಯ ಸಾಹಿತಿ ಡಾ. ಚೆನ್ನಣ್ಣ ವಾಲೀಕರ.

 

About the Author

ಎಚ್.ಎಸ್. ಬೇನಾಳ

ಎಚ್.ಎಸ್.ಬೇನಾಳ ಅವರು ಬಹುಮುಖ ಪ್ರತಿಭಾವಂತ,ಜೊತೆಗೆ ಸಂವೇದನಾ ಶೀಲ ಬರಹಗಾರ, ಕವಿಯಾಗಿ, ಕಥೆಗಾರನಾಗಿ, ವಿಚಾರವಂತ, ಪ್ರಬುದ್ಧ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಕಲಬುರಗಿ ಮೂಲದವರಾದ ಎಚ್. ಎಸ್. ಬೇನಾಳ ಚಿಕ್ಕ ವಯಸ್ಸಿಗೆ ವಿಚಾರಾತ್ಮಕ ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡುಗೆಗಳನ್ನು ನೀಡಿದ್ದಾರೆ. ಅವರ ಪ್ರಕಟಿತ ಕೃತಿಗಳು- ಬುದ್ಧನ ನಿಜವಾದ ವೈರಾಗ್ಯ, ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್, ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು, ಬಹಿಷ್ಕಾರ(ಕಥಾಸಂಕಲನ), ಪ್ರಥಮ ವಚನಕಾರ ಜೇಡರ ದಾಸೀಮಯ್ಯ, ಕಾವ್ಯ ಕಂಬನಿ(ಕವನ ಸಂಕಲನ), ಬಚ್ಚಿಟ್ಟ ಚರಿತ್ರೆಯನ್ನು ಬಿಚ್ಚಿಟ್ಟ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್, ವಿಶ್ವಕಂಡ ಶ್ರೇಷ್ಠ ಆರ್ಥಿಕ ಚಿಂತಕ ಬಾಬಾ ಸಾಹೇಬ ...

READ MORE

Related Books