‘ಕುಚೋದ್ಯದದ ಕಥೆಗಳು’ ಲೇಖಕ ಶ್ರೀನಿವಾಸ ಹಾವನೂರರ ಸಣ್ಣಕಥೆಗಳ ಸಂಕಲನ. ಈ ಕೃತಿಗೆ ನಾಗೇಶ ಹಾವನೂರರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ತಿಳಿಸುತ್ತಾ ಪ್ರಸ್ತುತ ಸಂಕಲನದಲ್ಲಿ ಏಳು ಕಥೆಗಳನ್ನು ನೋಡಬಹುದಾಗಿದೆ. ಇವುಗಳ ಮೂಲ ವಿದೇಶಿಯಾದರೂ ನಿರೂಪಣೆ ಅಪ್ಪಟ ಸ್ವದೇಶಿಯಾಗಿದೆ. ಲೇಖಕರೇ ಉಲ್ಲೇಖಿಸಿರದಿದ್ದಲ್ಲಿ ಇವು ರೂಪಾಂತರದ ಕತೆಗಳೆಂದು ಅನಿಸುವ ಹಾಗೆಯೇ ಇಲ್ಲ ಎಂದಿದ್ದಾರೆ ನಾಗೇಶ ಹಾವನೂರ. ಜೊತೆಗೆ ಇಲ್ಲಿಯ ಕತೆಗಳಲ್ಲಿ ಕಾಣುವ ಸಮಾನ ಗುಣಧರ್ಮವೆಂದರೆ ಅವುಗಳಲ್ಲಿಯ ವ್ಯಂಗ್ಯ ಅಥವಾ ಕುಚೋದ್ಯ. ಇದು ಆಯಾ ಪಾತ್ರದ ಸ್ವಭಾವದಿಂದಲೋ ಮೂಡಿ ಬಂದುದು. ಮನಸ್ಸೆಂಬುದೇ ಮಾಯೆ. ಅದನ್ನು ಬಲ್ಲವರಾರು? ಹಾಗೆಯೇ ವಿಧಿಯೆಂಬುದೂ ಮಾಯೆ. ಅದನ್ನು ಕಂಡವರಾರು, ಅಂತೂ ಇವೆರಡರ ವ್ಯಂಗ್ಯ ನಾಟಕವನ್ನು ಈ ಕೃತಿಯಲ್ಲಿ ನೋಡಬಹುದು ಎಂದಿದ್ದಾರೆ. ಇಲ್ಲಿ ಪ್ರತಿಬಿಂಬ, ಆತ್ಮನಸ್ತು ಕಾಮಾಯ, ಪ್ರತಿಭಾಶಾಲಿ, ನಿಃಸಂತಾನ, ಇರುವೆ ಮತ್ತು ಚಿಟ್ಟೆ, ಜೊತೆಗಾರ್ತಿ, ವಿಷಾರಿ, ತನಿಖೆಯ ನಾಯಿ ಹಾಗೂ ಕಾಮದಹನ ಕತೆಗಳು ಸಂಕಲನಗೊಂಡಿವೆ.
ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...
READ MORE