ಶಾಲಭಂಜಿಕೆ

Author : ಕೆ.ಎನ್. ಗಣೇಶಯ್ಯ

Pages 144

₹ 120.00




Year of Publication: 2007
Published by: ಛಂದ ಪುಸ್ತಕ
Address: ಐ- 004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು – 76
Phone: 9844422782

Synopsys

ವೃತ್ತಿಯಿಂದ ಕೃಷಿ ವಿಜ್ಞಾನಿಯಾಗಿ ಪ್ರವೃತ್ತಿಯಿಂದ ಬರಹಗಾರ, ಕಾದಂಬರಿಗಾರ, ಲೇಖಕರಾದ ಡಾ. ಕೆ.ಎನ್. ಗಣೇಶಯ್ಯ ಅವರ ಸಣ್ಣ ಕತೆಗಳ ಸಂಗ್ರಹ ’ಶಾಲ ಭಂಜಿಕೆ’.

ಇಲ್ಲಿರುವ ಅನೇಕ ಕತೆಗಳು ನೈಜ ಘಟನೆಗಳಿಂದ ಮತ್ತು ವಸ್ತುಗಳಿಂದ ಹೆಣೆಯಲಾಗಿದೆ. ಸತ್ಯ ಮತ್ತು ಕಲ್ಪನೆಗಳು ಸ್ವಾಭಾವಿಕವಾಗಿ ಕತೆಗಳಲ್ಲಿ ಬೆರೆತು ಹೋಗಿರುವುದನ್ನು ಗಮನಿಸಬಹುದು. ವಿಜ್ಞಾನಿಯೊಬ್ಬ ತನ್ನ ಸಂಶೋಧನಾ ಕ್ಷೇತ್ರದ ಮಾಹಿತಿಗಳನ್ನೇ ರೋಚಕವೆನಿಸುವಷ್ಟು ಕಥಾ ರೂಪಕ ನಿರಂತರವಾಗಿ ಈ ಕೃತಿಯಲ್ಲಿ ಸಾಗುತ್ತವೆ. ಇತಿಹಾಸದಲ್ಲಿ ಅಡಗಿದ ಸಂಗತಿಗಳನ್ನು ಹೊರತೆಗೆದು ವರ್ತಮಾನದೊಂದಿಗೆ ಬೆರೆಸಿ ಕಲಾತ್ಮಕವಾಗಿ ಈ ಕೃತಿಯನ್ನು ಹೆಣೆಯಲಾಗಿದೆ.

About the Author

ಕೆ.ಎನ್. ಗಣೇಶಯ್ಯ

ವೃತ್ತಿಯಿಂದ ಕೃಷಿ ವಿಜ್ಞಾನಿ ಆಗಿರುವ ಕೆ.ಎನ್. ಗಣೇಶಯ್ಯ ಅವರು ಮೂಲತಃ ಕೋಲಾರ ಜಿಲ್ಲೆಯವರು. ಕಳೆದ ೩೦ ವರ್ಷಗಳಿಂದ ತಳಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಅವರು  ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು. ಪ್ರಾಣಿ ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ಭಾರತದ ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವ ಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿಯ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧ ಬರೆದಿರುವ ಅವರು ಆರು ವೈಜ್ಞಾನಿಕ ಕೃತಿಗಳನ್ನು ...

READ MORE

Related Books