ನಾಳೆ ಬರೆದ ಕಥೆಗಳು

Author : ಕೆ. ಸತ್ಯನಾರಾಯಣ

Pages 167

₹ 150.00




Year of Publication: 2014
Published by: ಅಭಿನವ ಪ್ರಕಾಶನ
Address: ಅಭಿನವ, 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಕೆ.ಸತ್ಯನಾರಾಯಣ ಅವರ ಕಥೆಗಳ ಸಂಕಲನ. ಬರವಣಿಗೆಯಲ್ಲಿ ಸಮಕಾಲೀನತೆ ಇರಬೇಕು, ಬಾಲ್ಯದ ಅನುಭವಗಳ ಗಾಢ ಶೋಧನೆ ಇರಬೇಕು ಎಂಬುದು ಎಲ್ಲಾ ಬರಹಗಾರರ ಹಂಬಲವಾದರೆ, ಸತ್ಯನಾರಾಯಣ ಅವರು ತಮ್ಮ ಬರವಣಿಗೆಯಲ್ಲಿ ನಾಳೆಯ ಹೆಜ್ಜೆ, ಪಿಸುಮಾತು, ಲಯಗಳು ಕೂಡಾ ಇರಬೇಕು ಎಂಬ ಹಂಬಲವಿಟ್ಟುಕೊಂಡವರು. ಒಂದು ಕಾಲದ ಆಯಾಮವಾದ ನಾಳೆಯೂ ಕೂಡ ನಮ್ಮೆದುರಿಗೆ ಈ ಕ್ಷಣದಲ್ಲೇ ನಡೆಯುತ್ತಿರುತ್ತದೆ, ಈ ರೀತಿಯಲ್ಲಿ ನಾಳೆಯ ಕೆಲವು ಸೂಚನೆಗಳಾದರೂ ಈ ಕಥೆಗಳಲ್ಲಿ ಇರಬಹುದೆಂದು ನಂಬುತ್ತಾರೆ. ಹೀಗಾಗೆ ತಮ್ಮ ಕಥಾ ಸಂಕಲನಕ್ಕೆ ಸತ್ಯನಾರಾಯಣ ಅವರು ನಾಳೆ ಬರೆದ ಕಥೆಗಳು ಎಂಬ ಹೆಸರಿಟ್ಟಿದ್ದಾರೆ. 

About the Author

ಕೆ. ಸತ್ಯನಾರಾಯಣ
(21 April 1954)

ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.  1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ.  ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...

READ MORE

Related Books