ಉತ್ತರ ಕರ್ನಾಟಕದ ಜನಪದ ಕಥೆಗಳು

Author : ಸಿಂಪಿ ಲಿಂಗಣ್ಣ

Pages 229

₹ 55.00




Year of Publication: 2011
Published by: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-560002

Synopsys

ಖ್ಯಾತ ಜಾನಪದ ಸಾಹಿತಿ ಸಿಂಪಿ ಲಿಂಗಣ್ಣ ಅವರ ಕೃತಿ-ಉತ್ತರ ಕರ್ನಾಟಕದ ಜನಪದ ಕತೆಗಳು. ಮೈನಾವತಿ, ಜಾಣಸೊಸೆ, ಹೆಂಡತಿಗೆ ಹೊಡೆಯಬೇಕೆನ್ನುವ ರಾಜ, ನಾಲ್ಲು ಮಂದಿ ಹೆಣ್ಣು ಮಕ್ಕಳು, ಕೊರವಂಜಿಯ ಕಲೆ, ಪಾಫಾತ್ಮ ರಾಜ, ಒಂದು ಹಾಡು ಒಂದು ಕಥೆ-ಇವೆಲ್ಲ ರಮ್ಯ ಕಥೆಗಳು, ನಾಲ್ವರು ಅಣ್ಣತಮ್ಮಂದಿರು, ಗಂಗಮ್ಮ-ತಂಗಿ, ತಿರುಮಂತ್ರ, ಎಲ್ಲಮ್ಮನ ಮುನಿಸು-ಇತ್ಯಾದಿ ಅತಿಮಾನುಷ ಕಥೆಗಳು, ಲೆಕ್ಕಾಚಾರದ ಅತ್ತೆ, ಬಾರದ ಬರ, ಸೊಸೆಗೇನು ಅಧಿಕಾರ, ಮಾಡಿದ್ದೊಂದು ಆಡಿದ್ದೊಂದು ಇತ್ಯಾದಿ-ವಾಸ್ತವತೆಯ ಕಥೆಗಳು, ಸೇವಕನ ಸಂಬಳವೇಕೆ ಕಡಿಮೆ, ಬಟ್ಟಲ್ಯಾತಕ ಕೆನಿ ತಿನ್ಲಕ ಇತ್ಯಾದಿ ಬುದ್ಧಿವಂತಿಕೆಯ ಕಥೆಗಳು, ಉತ್ತರೀ ಮಳೆ-ಇತ್ಯಾದಿ ವಿವರಣಾತ್ಮಕ ಕಥೆಗಳು, ಕೊಂಡು ತಂದ ಮಾತು-ಇತ್ಯಾದಿ ನೀತಿ ಕಥೆಗಳು, ಮೂರು ಆಕಳ ಕರುಗಳು-ಇತ್ಯಾದಿ ಪ್ರಾಣಿಕಥೆಗಳು, ಒಬ್ಬರಿಗಿಂತ ಒಬ್ಬರು ಮಿಗಿಲು-ಇತ್ಯಾದಿ ವಿನೋದ ಕಥೆಗಳು ಹೀಗೆ ಕಥೆಗಳ ಹಂದರವೇ ಓದುಗರನ್ನು ಸೆಳೆಯುತ್ತದೆ.

About the Author

ಸಿಂಪಿ ಲಿಂಗಣ್ಣ
(11 February 1905 - 05 May 1993)

ಜಾನಪದ ಸಂಶೋಧಕರು, ಕವಿಗಳು, ಪ್ರಬಂಧಕಾರರು, ನಾಟಕಕಾರರೂ ಆದ ಲಿಂಗಣ್ಣನವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಗ್ರಾಮದಲ್ಲಿ. ತಂದೆ ಶಿವಯೋಗಪ್ಪ, ತಾಯಿ ಸಾವಿತ್ರಿ. ಚಿಕ್ಕವಯಸ್ಸಿನಲ್ಲಿಯೆ ತಂದೆ ತಾಯಿಯನ್ನು ಕಳೆದುಕೊಂಡು ಬೆಳದದ್ದು ಅಣ್ಣ ಅತ್ತಿಗೆಯರ ಆರೈಕೆಯಲ್ಲಿ. 1922ರಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ವಿದ್ಯಾಭ್ಯಾಸಕ್ಕೆ ಸೂಕ್ತ ಅವಕಾಶ ದೊರೆಯದೆ ಶಿಕ್ಷಕರ ವೃತ್ತಿಯನ್ನು ಆಯ್ದುಕೊಂಡರು. ಶಿಕ್ಷಕರ ಟ್ರೈನಿಂಗ್‌ ಪರೀಕ್ಷೆಯಲ್ಲಿ ಮುಂಬೈ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಪ್ರಥಮ ಸ್ಥಾನ ಪಡೆದು ಹಲವರು ಬಹುಮಾನಗಳನ್ನು ಗಳಿಸಿದರು. 1925ರಲ್ಲಿ ಉಪಾಧ್ಯಾಯರಾಗಿ ಸೇರಿ ಭತಗುಣಕಿ, ಇಂಗಳೇಶ್ವರ, ಹಲಸಂಗಿ, ಇಂಡಿ, ಚಡಚಣ ಮುಂತಾದೆಡೆಯಲ್ಲೆಲ್ಲಾ ಸೇವೆ ಸಲ್ಲಿಸಿ ...

READ MORE

Related Books