ಬಾಂಗ್ಲಾದ ಹಕ್ಕಿಗಳು

Author : ಅಮರೇಶ ಗಿಣಿವಾರ

₹ 90.00




Year of Publication: 2022
Published by: ಅರವಿಂದ್ ಪ್ರಕಾಶನ

Synopsys

ಅಮರೇಶ ಗಿಣಿವಾರ ಅವರ ಎರಡನೆಯ ಕತಾಸಂಕಲನ ಬಾಂಗ್ಲಾದ ಹಕ್ಕಿಗಳು. ಈ ‘ಬಾಂಗ್ಲಾದ ಹಕ್ಕಿಗಳು’ ಕೃತಿಯಲ್ಲಿ ಒಟ್ಟು ಎಂಟು ಕಥೆಗಳಿವೆ. ವಸ್ತುವಿನಿಂದ ದೃಶ್ಟಿಯಿಂದ ಒಂದೊಂದು ಭಿನ್ನವಾಗಿವೆ. ಅವುಗಳ ನಿರೂಪಣೆಯ ಭಾಶೆಯೂ ಒಂದಕ್ಕಿಂತ ಒಂದು ಭಿನ್ನವಾಗಿವೆ. ಕನ್ನಡದ ವಿವಿಧ ಒಳನುಡಿಗಳನ್ನು ನಿರೂಪಣೆಯಲ್ಲಿ ಹದವಾಗಿ ಬಳಸಿಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕತೆಗಳು ಬಹಳ ಸರಾಗವಾಗಿ ಓದಿಸಿಕೊಳ್ಳುತ್ತವೆ. ವಸ್ತುವಿನ ತೆಳುವಾದ ನೆಲೆಯಲ್ಲಿ ಬಹಳ ಅಚ್ಚುಕಟ್ಟಾಗಿ ಕತೆಗಳನ್ನು ಹೇಳುವ ಕ್ರಮ ಬಹಳ ಮುಖ್ಯವಾದುದು. ‘ಬಾಂಗ್ಲಾದ ಹಕ್ಕಿಗಳು’ ಎಂಬ ಕತೆ ಬಾಂಗ್ಲಾದ ವಲಸಿಗರ ಸಮಸ್ಯೆ ಮತ್ತು ಪೌರತ್ವ ಕಾಯ್ದೆಯ ಅಪಾಯಗಳನ್ನು ಚಿತ್ರಿಸುವ ಕತೆ. ‘ಹಸಿಬೆ’ಯು ಬಂಡವಾಳಶಾಹಿಯ ಕ್ರೌರ್ಯ ಮತ್ತು ಹಸಿವಿನ ಕರಾಳ ರೂಪವನ್ನು ಮುಖಮುಖಿಯಾಗಿಸಿರುವ ಕತೆ. ‘ಸಣ್ಣಜಾಗ’ ಎಂಬುದು ಊರಗೌಡಿಕೆಯನ್ನು ನಡೆಸುವ ಭೂಮಾಲಿಕರ ಹಿಂಸೆಯ ಮುಖವನ್ನು ವರ್ಣಿಸುವ ಕತೆ. ‘ಸುರುಳಿ’ ಎಂಬ ಕತೆ ಸತ್ಯವನ್ನು ಪ್ರಮಾಣಿಸಲಾಗದ ಕಾನೂನು ಮತ್ತು ಪೋಲಿಸು ವ್ಯವಸ್ಥೆಯ ಕ್ರೌರ್ಯವನ್ನು ಚಿತ್ರಿಸುತ್ತದೆ. ಹೀಗೆ ಒಂದೊಂದು ಕತೆಯೂ ಇಂದಿನ ಸಮಾಜ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಚಿತ್ರಿಸುತ್ತವೆ. ಈ ದೃಶ್ಟಿಯಿಂದ ನೋಡಿದಾಗ ಕತೆಗಳ ನಿರೂಪಕ ಮನಸ್ಸು ಲೋಕದ ಹಿಂಸೆಯನ್ನು ಕಂಡು ತಲ್ಲಣಿಸಿ ಅದನ್ನು ಕಥನವಾಗಿಸುವ ಮೂಲಕ ಲೋಕಸಂವಾದ ಮಾಡುತ್ತದೆ. ಓದುಗರನ್ನೂ ಲೋಕದ ಜೊತೆಗೆ ಸಂವಾದಿಸುವಂತೆ ಪ್ರೇರೇಪಿಸುತ್ತವೆ. ಅಲ್ಲದೆ ಕನ್ನಡ ಸಾಹಿತ್ಯದಲ್ಲಿ ಹೊಸಬೆಳೆ ಬರುತ್ತಿರುವುದನ್ನು ನಿಚ್ಚಳವಾಗಿ ಎತ್ತಿತೋರಿಸುತ್ತವೆ.

About the Author

ಅಮರೇಶ ಗಿಣಿವಾರ
(01 June 1989)

ಸ್ಪಂದನೀಯ ಕಥೆಗಾರ, ಕವಿ ಅಮರೇಶ ಗಿಣಿವಾರ ಅವರು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗಿಣಿವಾರ ಎಂಬ ಗ್ರಾಮದಲ್ಲಿ 1989 ಜೂನ್ 01 ರಂದು ಜನಿಸಿದರು. ಅವರ ಮೊದಲ ಕವನ ಸಂಕಲನ "ಬಯಲು" 2009 ರಲ್ಲಿ ಪ್ರಕಟಣೆ ಕಂಡಿದ್ದು ಮೊಟ್ಟಮೊದಲ ರಾಜ್ಯ ಮಟ್ಟದ ಯುವ ಕಥಾ ಸ್ಪರ್ಧೆಯಲ್ಲಿ ಬಹುಮಾನ ಹಾಗೂ "ಹಿಂಡೆಕುಳ್ಳು" ಕಥೆಗೆ ಸಂಗಾತ ಬಹುಮಾನಗಳು ಲಭಿಸಿದೆ.   ಕರ್ನಾಟಕ ವಿಶ್ವವಿದ್ಯಾಲಯದಿಂದ ಬಾಹ್ಯ ಶಿಕ್ಷಣ ಪದವಿ ಪಡೆದಿದ್ದಾರೆ. 2008ರಲ್ಲಿ ಅಂಚೆ ಇಲಾಖೆಯಲ್ಲಿ ಅಂಚೆ ಸಹಾಯಕನಾಗಿ ನೇಮಕಗೊಂಡು ಪ್ರಸ್ತುತ ತುರುವಿಹಾಳ ಅಂಚೆ ಕಛೇರಿಯಲಿ ಉಪ ಅಂಚೆ ಪಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮ್ತತಿತರ ಕತೆ ...

READ MORE

Related Books