ಚಿನ್ನದ ದೋಸೆ

Author : ಜಿ.ಪಿ. ರಾಜರತ್ನಂ

Pages 74




Year of Publication: 1953
Published by: ಕರ್ನಾಟಕ ಸಂಘ
Address: ಸೆಂಟ್ರಲ್ ಕಾಲೇಜು, ಬೆಂಗಳೂರು

Synopsys

ಬೆಂಗಳೂರಿನ ಸೆಂಟ್ರಲ್ ಕಾಲೇಜು ಪ್ರತಿ ವರ್ಷ ಹೊರಡಿಸುತ್ತಿದ್ದ ವಿದ್ಯಾರ್ಥಿಗಳ ಕೃತಿಗಳ ಪೈಕಿ ಬಾಲಸರಸ್ವತಿಯೂ (1953)ಒಂದು. ಅಲ್ಲಿಯ ಎಂಟು ಕಥೆಗಳನ್ನು ಆಯ್ದು ಸಂಗ್ರಹಿಸಿ ಪ್ರತ್ಯೇಕ ಕಥೆಗಳ ಕೃತಿಯೇ -ಚಿನ್ನದ ದೋಸೆ. ಈ ಕಥೆಗಳು ನಿರೂಪಣಾ ಶೈಲಿಯಿಂದ ಮಕ್ಕಳಿಗೆ ಪ್ರಿಯವಾಗಬಹುದು ಎಂದು ಆಶಿಸಿ ಕೃತಿ ರಚನೆ ಆಗಿದೆ. ಚಿನ್ನದ ದೋಸೆ, ಮರಗೋಪಿ, ಗಾಜಿನ ಕಂಭ, ಚಂದ್ರಮತಿ, ಗಳ-ಗಂಟೆ, ತಕ್ಕಣ್ಣನ ಮಗ, ವೀರಣ್ಣ ಹಾಗೂ ಚಂದ್ರಕುಮಾರಿ ಶೀರ್ಷಿಕೆಯ ಕಥೆಗಳಿವೆ. ಕಥೆಗಳನ್ನು ಹೇಗೆ ಬರೆಯಬೇಕು ಎಂಬುದರ ಮಾದರಿಯಾಗಿ ಮಕ್ಕಳಿಗೆ ಪ್ರೇರಣೆಯಾಗಲಿ ಎಂಬ ಸದುದ್ದೇಶವೂ ಈ ಕೃತಿ ರಚನೆಯ ಭಾಗವಾಗಿದೆ.

About the Author

ಜಿ.ಪಿ. ರಾಜರತ್ನಂ
(05 December 1904 - 13 March 1979)

ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...

READ MORE

Related Books