ಮಾತಿನ ಮಲ್ಲಿ

Author : ಜಿ.ಪಿ. ರಾಜರತ್ನಂ

Pages 145

₹ 1.00




Year of Publication: 1951
Published by: ಆನಂದ ಪ್ರಿಂಟರ್ಸ್
Address: ಬೆಂಗಳೂರು-2

Synopsys

ಲೇಖಕ ಜಿ.ಪಿ.ರಾಜರತ್ನಂ ಹೇಳಿರುವಂತೆ ‘ಮಾತಿನ ಮಲ್ಲಿ’ ಕೃತಿಯು ಶೃಂಗಾರದ ಕಥೆಯನ್ನು ಒಳಗೊಂಡಿದೆ. ಶೃಂಗಾರ -ಕೇವಲ ಸ್ತ್ರೀಯ ವರ್ಣನೆ ಮಾತ್ರವಲ್ಲ; ಜೀವನ ಸಹಯೋಗ, ಸಾಮರಸ್ಯವೂ ಆಗಿದೆ. ಇಂತಹ ಪರಿಕಲ್ಪನೆ ಕುರಿತು ಹೇಳಿರುವ ರತ್ನಾಕರ ವರ್ಣಿಯಂತಹ ಕವಿಗಳೂ ಕನ್ನಡ ಸಾಹಿತ್ಯ ಲೋಕದಲ್ಲಿದ್ದಾರೆ. ಪುರಾಣದ ಕೃಷ್ಣನಿದ್ದಂತೆ ಭರತೇಶ ವೈಭವದ ಭರತೇಶನ ಶೃಂಗಾರ ಜೊತೆಗೆ ಯೋಗಶೃಂಗಾರವನ್ನೂ ಕವಿ ವರ್ಣಿಸಿದ್ದಾನೆ. ಭರತೇಶನ ಭೋಗ-ಯೋಗ ಜೀವನ ವ್ಯಕ್ತಿತ್ವವನ್ನು ಕಟ್ಟಿಕೊಡುವ ಕೃತಿ ‘ಮಾತಿನ ಮಲ್ಲಿ’ . ರತ್ನಾಕರ ವರ್ಣಿಯ ಭರವತೇಶ ವೈಭವವನ್ನು ಅತ್ಯಂತ ಸರಳವಾಗಿ ಅಷ್ಟೇ ಶೃಂಗಾರವಾಗಿ ರಾಜರತ್ನಂ ಅವರು ಕನ್ನಡಕ್ಕೆ ತಂದಿರುವುದು ಕೃತಿಯ ವೈಶಿಷ್ಟ್ಯ.

About the Author

ಜಿ.ಪಿ. ರಾಜರತ್ನಂ
(05 December 1904 - 13 March 1979)

ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...

READ MORE

Related Books