‘ ಮಂಜು ಕವಿದ ಸಂಜೆ ಮತ್ತು ಇತರೆ ಕತೆಗಳು ’ ಪತ್ರಕರ್ತ, ಲೇಖಕ ಪಿ. ಲಂಕೇಶ್ ಅವರ ಕತಾಸಂಕಲನ. ಇಲ್ಲಿ ‘ಮಂಜು ಕವಿದ ಸಂಜೆ’, ‘ಡಿಸೋಜಾನ ಹೂವಿನ ವೃತ್ತಿ’, ‘ಎ ಸ್ಯೂಸೈಡ್ ನೋಟ್’, ‘ಒಂದು ಸಂಬಂಧದ ದಾಖಲೆ’, ‘ಶಾರದೆಯ ಪುಟ್ಟ ಸಾಹಸ’, ‘ಮನುಷ್ಯ ಎಂಬ ಮಾಯಾದರ್ಪಣ’, ‘ಅಂಚಿನ ಚಿತ್ರಗಳು’, ‘ಒಬ್ಬ ದಿಟ್ಟ ಮನುಷ್ಯ’, ‘ಗಡಿ’, ‘ಕ್ವೀಜುವಿನ ಹಠ’, ‘ದಯೆ ಮತ್ತು ದಾಕ್ಷಿಣ್ಯ’, ‘ಪ್ರೇಮ ಎಂಬ ವಿಸ್ಮಯ’ ಹಾಗೂ ‘ಮೃತ’ ಸೇರಿದಂತೆ ಹನ್ನೆರೆಡು ಕತೆಗಳು ಸಂಕಲನಗೊಂಡಿವೆ.
ಪಿ. ಲಂಕೇಶ್ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ಪತ್ರಕರ್ತ-ಸಾಹಿತಿಯಾಗಿ ಜನಪ್ರಿಯರಾಗಿರುವ ಪಾಳ್ಯದ ಲಂಕೇಶ್ ಅವರ ಬದುಕು-ಬರಹ ವೈವಿಧ್ಯದಿಂದ ಕೂಡಿವೆ. ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ನಾಟಕಕಾರ, ನಟ, ಚಲನಚಿತ್ರ ನಿರ್ದೇಶಕ, ಸಂಪಾದಕ, ಕೃಷಿಕ ಹೀಗೆ ಅವರ ಪ್ರತಿಭೆಗೆ ಹಲವು ಮುಖ. ಕೆಲಸ ಮಾಡಿದ ಕ್ಷೇತ್ರದಲ್ಲೆಲ್ಲ ತನ್ನದೇ ಛಾಪು ಮೂಡಿಸಿದವರು ಲಂಕೇಶ್. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ 1935ರ ಮಾರ್ಚ್ 8ರಂದು ಜನಿಸಿದರು., ತಂದೆ ನಂದಿ ಬಸಪ್ಪ, ತಾಯಿ ದೇವೀರಮ್ಮ. ಕೊನಗವಳ್ಳಿ ಮತ್ತು ಹಾರನಹಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ ಅವರು ಪ್ರೌಢಶಾಲೆ ಮತ್ತು ಇಂಟರ್ ...
READ MORE