ಅನ್ನದ ಕಥೆಗಳು

Author : ಪೂರೀಗಾಲಿ ಮರಡೇಶಮೂರ್ತಿ

Pages 224

₹ 220.00




Year of Publication: 2018
Published by: ಲಿಖಿತ ಸ್ವರೂಪ್ ಪಬ್ಲಿಕೇಷನ್
Address: ನಂ. 06, 2ನೇ ಮಹಡಿ, ಅಲ್ಲಮಪ್ರಭು ಕಾಂಪ್ಲೆಕ್ಸ್ , ವೀರಶೈವ ಅನಾಥಾಲಯ, 5ನೇ ಕ್ರಾಸ್, ರಾಮಾನುಜ ರಸ್ತೆ, ಮೈಸೂರು -570004
Phone: 9449526390

Synopsys

ಅನ್ನದ ಅಗುಳುಗಳ ನೆನೆದು........ ಜಗತ್ತು ನಿಂತಿರುವುದೇ ಸತ್ಯದ ಮೇಲೆ ಎನ್ನುತ್ತಾರೆ. ಲೇಖಕರು. ಜಗತ್ತಿನ ಇಡೀ ಜೀವಸಂಕುಲ 'ತುತ್ತು ' ಅನ್ನದ ಮೇಲೆ ನಿಂತಿದೆ ಅನ್ನ ಬ್ರಹ್ಮ ಎನ್ನುವುದು, ಅನ್ನದಾತನಿಗಿಂತ ಇನ್ನಿಲ್ಲ ಎನ್ನುವುದು, ಅನ್ನವೇ ಸರ್ವಶ್ರೇಷ್ಠ ಎನ್ನುವುದು.  ಈ ಎಲ್ಲ ಅಗಮ್ಯವಾದ ಕಾರಣದಿಂದಲೇ. ಒಟ್ಟು ಬಾಳ ಬುತ್ತಿ ಯಲ್ಲಿ ಅನ್ನದ ಅಗುಳುಗಳ ಮಹತ್ವ ನೆನೆಯುವುದೇ ದೊಡ್ಡ ಮಾತು. ಈ ಹಿನ್ನೆಲೆಯಲ್ಲಿ ಸಾಹಿತಿ ಪೂರೀಗಾಲಿ ಮರಡೇಶ ಮೂರ್ತಿ ಅವರ "ಅನ್ನದ ಕಥೆಗಳು "  ಕೃತಿಯ ಆಶಯವಿದೆ.

ಈ ಸಂಕಲನದಲ್ಲಿ 19 ಕಥೆಗಳಿವೆ. ಇಲ್ಲಿಯ 'ಕಾಸು', 'ಅನ್ನದ ಋಣ', 'ಋಣಭಾರ' , 'ಸಂಧ್ಯಾರಾಗ', 'ಹುಣ್ಣಿಮೆಯ ನಗು', 'ಸಾಹುಕಾರ', 'ಕುರುಡು ಕಾಂಚಾಣ' ಕಥೆಗಳು ಮಾನವೀಯ ಸಂಬಂಧಗಳನ್ನು ಥಳುಕು ಹಾಕಿಕೊಂಡೇ ಸಾಗುತ್ತವೆ. ಇಲ್ಲಿಯ ಪ್ರತಿ ಕಥೆಯೂ ಮೌನದ ಆಕ್ರಂದನಗಳು ಅನ್ನದ ಮುಂದೆ ಇನ್ನಿಲ್ಲ ಎನ್ನುವ ಸತ್ಯವನ್ನು ಪ್ರತಿಪಾದಿಸುತ್ತವೆ. 

About the Author

ಪೂರೀಗಾಲಿ ಮರಡೇಶಮೂರ್ತಿ
(06 June 1966)

ಕವಿ, ಕಾದಂಬರಿಕಾರ ಪೂರೀಗಾಲಿ ಮರಡೇಶಮೂರ್ತಿ ಅವರು ಮೂಲತಃ ಮಂಡ್ಯದವರು. ವಚನ ಸಾಹಿತ್ಯದಲ್ಲಿ ತಮ್ಮೊಳಗಿನ ಅರಿವನ್ನು ಅಭಿವ್ಯಕ್ತಿಸಿದ್ದಾರೆ. ಕನ್ನಡ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ’ಸಿಂಧೂರ ಬಿಂದು’ ಅವರ ಮೊದಲ ಕಾದಂಬರಿ. ಸುಮಾರು  3 ದಶಕಗಳ ಕಾಲ ಸಾಹಿತ್ಯ ಕೈಂಕರ್ಯ ನಡೆಸಿರುವ ಇವರು 50 ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದಾರೆ. ಮೈಸೂರು ರತ್ನ ಸಾಂಸ್ಕೃತಿಕ ಪ್ರತಿಷ್ಠಾನದಡಿ 25 ವರ್ಷಗಳಿಂದ ಯುವಪೀಳಿಗೆಗೆ ಸಾಹಿತ್ಯ ಕಾರ್ಯಕ್ರಮಗಳನ್ನು ವೈಚಾರಿಕ ನೆಲೆಗಟ್ಟಿನಲ್ಲಿ ನಡೆಸುತ್ತಾ ಬಂದಿದ್ದಾರೆ. ’ನೀಲಿಬಾನಿನ ತಾರೆಗಳು, ಹನಿಗಳು, ಕಾವ್ಯಕನ್ನಿಕೆ’ ಅವರ ಪ್ರಮುಖ ಕವನ ಸಂಕಲನಗಳು. ’ಒಲವಿನ ಕನಸು, ಅವಳು ಭೂಮಿಕೆ, ಸುಳಿ, ಸೂರ್ಯ ...

READ MORE

Related Books