ನೇಣು

Author : ಗಿರೀಶ ಜಕಾಪುರೆ

Pages 140

₹ 110.00




Year of Publication: 2011
Published by: ಶ್ರೀ ವೀರಸಂಗ ಶಿವಾಚಾರ್ಯ ಸಂಸ್ಥಾನ ಹಿರೇಮಠ
Address: 1765, ಎಚ್. ಪಿ. ಗ್ಯಾಸ್. ಏಜೆನ್ಸಿ ಸಮೀಪ, ಮೈಂದರ್ಗಿ
Phone: 8999906965

Synopsys

  ಸಣ್ಣಕಥೆಗಳ ಸಂಕಲನದಲ್ಲಿ 10 ಕಥೆಗಳಿವೆ. ಕಲಬುರಗಿ-ಸೊಲ್ಲಾಪುರ ಪ್ರದೇಶದ ನುಡಿಗಟ್ಟು ಇಲ್ಲಿ ಎದ್ದು ಕಾಣುತ್ತದೆ. ಈ ಕಥೆಗಳಲ್ಲಿನ ಪಾತ್ರಗಳು ನಮ್ಮ ನಡುವಿನಂದಲೇ ಎದ್ದುಬಂದಂತೆ ಕಾಣುತ್ತವೆ. ಪ್ರತಿಯೊಂದು ಕಥೆಯ ವಿನ್ಯಾಸ, ದೇಶ, ಕಾಲ, ವಾತಾವರಣಗಳು ಕಥೆಗಳನ್ನು ಸಮಕಾಲೀನ ಸನ್ನಿವೇಶದೊಂದಿಗೆ ತಳಕುಹಾಕುತ್ತವೆ. ಇಲ್ಲಿನ ಮೊದಲ ಕಥೆ ನೇಣು ಕಥೆಯಲ್ಲಿ ದೇಶಪ್ರೇಮ, ಗವಿ ಕಥೆ ಮಕ್ಕಳ ಕಥೆ, ಮರಳಿ ಮನೆಗೆ ಕಥೆಯು ಹಾಸ್ಟೆಲ್‌ನಲ್ಲಿ ಇರುವ ಯುವಕರ ಕಥೆ, ಇಂಡಿಯನ್ ಫ್ಯಾಮಿಲಿ ಎಂಬ ಕಥೆ ಭಾರತೀಯ ಏಕತ್ರ ಕುಟುಂಬ ಮೌಲ್ಯದ ಸುತ್ತ ಹೆಣೆಯಲಾಗಿದೆ. ಇಲ್ಲಿನ ರಾಜುನ ಸೈಕಲ್ ಕಥೆ ಬಡಕಾರ್ಮಿಕನೊಬ್ಬನ ಬದುಕಿನ ಕಥೆ, ಈ ಗುಲಾಬಿ ನಿನಗಾಗಿ ಎಂಬುದು ಪ್ರೇಮಪ್ರಸಂಗದ ವಸ್ತುವುಳ್ಳ ಕಥೆ, ನಿರಾಶ್ರಿತರು ಮಹಿಳಾಸಂವೇದನೆಯ ಕಥೆ, ಭೈರವನ ಸೀರೆಗಳು ಎಂಬ ಕಥೆ ಪಾರಧೀ ಜನಾಂಗದ ಸಾಮಾಜಿಕ ಸ್ಥಿತಿಗತಿಯ ಕುರಿತ ವಸ್ತುವನ್ನೊಳಗೊಂಡಿದೆ, ಸಾಲದ ಸಾಲ ಎಂಬ ಕಥೆಯು ಮಹಿಳಾ ಸಬಲೀಕರಣದ ವಿಷಯವನ್ನು ಆಧರಸಿದೆ, ನೂರೊಂದು ನೆನೆಪು ಎದೆಯಾಳದಿಂದ ಕಥೆಯು ದೀರ್ಘಕಥಾ ಪ್ರಕಾರದ್ದು. ಹೀಗೆ ವಿಭಿನ್ನ ವಿಷಯಗಳನ್ನೊಳಗೊಂಡ ಈ ಕೃತಿಗೆ ಡಾ. ಗುರುಲಿಂಗಪ್ಪ ಧಬಾಲೆಯವರ ಮುನ್ನುಡಿಯಿದೆ. 

About the Author

ಗಿರೀಶ ಜಕಾಪುರೆ
(09 September 1981)

ಗಿರೀಶ್ ಚಂದ್ರಕಾಂತ ಜಕಾಪುರೆ ಅವರು ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿಯಲ್ಲಿ ಶಿಕ್ಷಕರಾಗಿದ್ದಾರೆ. ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವೀಧರರು. ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್, ಮತ್ತು ಉರ್ದು ಭಾಷೆಯನ್ನು ಬಲ್ಲವರು. ಕಾವ್ಯ, ಕಥಾ ಸಂಕಲನ, ವ್ಯಕ್ತಿಚಿತ್ರ, ಮಕ್ಕಳ ಕಥೆ, ಕಾದಂಬರಿ, ಮಕ್ಕಳ ಪದ್ಯ, ಹಿಂದಿ ಅನುವಾದಗಳು, ಮರಾಠಿ ಕಥೆಗಳ, ಕಾದಂಬರಿಗಳ ಅನುವಾದ, ಪ್ರವಾಸ ಕಥನಗಳು, ಬಿಡಿ ಲೇಖನಗಳು, ಅನುವಾದಿತ ಕಾವ್ಯ ಹೀಗೆ ತಮ್ಮ ಸಾಹಿತ್ಯ ಕೃಷಿಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಪ್ರಮುಖ ಕೃತಿಗಳು: ನನ್ನ ದನಿಗೆ ನಿನ್ನ‌ ದನಿಯು, ಮನದ ಮುಂದಣ ಮಾಯೆ (ಗಜಲ್ ಗಳ ಸಂಕಲನ), ಖಾಮೋಶಿ, ಸಾಗರ್ ...

READ MORE

Awards & Recognitions

Related Books