ಮತಾಂತರ ಕಲಿಗಣನಾಥ ಗುಡದೂರು ಅವರ ಕಥಾ ಸಂಕಲನ. ಸಮಕಾಲೀನ ವಿಷಯಗಳನ್ನು ಕಥಾ ವಸ್ತುವಾಗಿಸಿಕೊಂಡಿರುವ ಲೇಖಕರ ಕತೆಗಳು ಇಂದಿನ ಸಮಾಜದ ಪ್ರತಿರೂಪದಂತಿವೆ. ಈ ಕೃತಿಯಲ್ಲಿರುವ ಕತೆಗಳು ಓದುಗನ ಆಲೋಚನಾ ಕ್ರಮವನ್ನೇ ಬದಲಾಯಿಸುವಂತಿವೆ. ಸುತ್ತ ಮುತ್ತಲ ಸಮಾಜದಲ್ಲಿ ತಾನು ಕಂಡುಂಡ ಅಂಶಗಳನ್ನು ಕತೆ ರೂಪದಲ್ಲಿ ಕಟ್ಟಿಕೊಟ್ಟಿರುವ ಲೇಖಕರ ಬರವಣಿಗೆ ಶೈಲಿ ಸರಳವಾಗಿದ್ದು, ಓದುಗನನ್ನು ಹಿಡಿದಿಡುತ್ತದೆ.
ಈ ಕಥಾ ಸಂಕಲನದಲ್ಲಿರುವ ಕತೆಗಳೆಂದರೆ; ಈ ದಾಹ ದೊಡ್ಡದು, ಉರಿವ ಕೆಂಡದ ಮೇಲೆ, ಮತಾಂತರ, ಕಾಗದದ ದೋಣಿ, ಕೆರೆ, ಆಗಸ್ಟ್ 15, ಫಲಶೃತಿ ಹಾಗೂ ಅವ್ವ.