ಕಾಗೆ

Author : ಅಮರೇಶ ನುಗಡೋಣಿ

Pages 104

₹ 100.00




Year of Publication: 2019
Published by: ಪಲ್ಲವ ಪ್ರಕಾಶನ
Address: ಚೆನ್ನಪಟ್ಟಣ ವಯಾ: ಎಮ್ಮಿಗನೂರು, ಬಳ್ಳಾರಿ-583113
Phone: 9480353507

Synopsys

ಕಾಗೆಯನ್ನು ರೂಪಕವಾಗಿ ಬಳಸಿದ ಮೂವರು ಲೇಖಕರಾದ ಅಮರೇಶ ನುಗಡೋಣಿ, ಮಹಾಂತೇಶ ನವಲಕಲ್ ಹಾಗೂ ಚಿದಾನಂದ ಸಾಲಿ, ಹಿಂಸೆಯನ್ನೇ ಸ್ಥಾಯಿಭಾವವಾಗಿಸಿ ಹೆಣೆದ ಪ್ರತ್ಯೇಕ ಕಥೆಗಳು ಇಲ್ಲಿ ಸಂಕಲನದ ರೂಪ ತಳೆದಿದೆ. ಒಂದೇ ರೂಪಕವನ್ನು ಬಳಸಿ ಒಂದೇ ಸಂಕಲನದ ಮೂಲಕ ಕಟ್ವಿಕೊಟ್ಟಿದ್ದು ಸಹ ಕೃತಿಯ ವಿಶೇಷ. ಪತ್ರಕರ್ತ ರಘುನಾಥ ಚ.ಹ. ಕೃತಿಯ ಬೆನ್ನುಡಿಯಲ್ಲಿ ; ’ಕಾಕಸ್ಪರ್ಶದ ಮೂಲಕ ಈ ಕಾಲದ ಕೇಡುಗಳನ್ನು ತೊಳೆಯವ ಹಂಬಲವನ್ನುಸೂಚ್ಯವಾಗಿ ವ್ಯಕ್ತಪಡಿಸಿತ್ತವೆ’ ಎಂದಿದ್ದರೆ, ಆರ್. ತಾರಿಣಿ ಶುಭದಾಯಿನಿ ’ಸೃಜನಶೀಲತೆಯನ್ನು ಪಣಕ್ಕೊಡ್ಡಿಕೊಂಡು ಕಟ್ಟಿರುವ ಇಲ್ಲಿನ ಕಥೆಗಳೆಲ್ಲವೂ ವರ್ತಮಾನದ ಬೆಂಕಿಯ ಕಾವಿನಲ್ಲಿ ಹುಟ್ಟಿಕೊಂಡಿವೆ’ ಎಂದು ಪ್ರಶಂಸಿಸಿದ್ದಾರೆ. ಕಥೆ, ಕಥೆಗಾರ ಹಾಗೂ ಓದುಗರ ದೃಷ್ಟಿಯಿಂದಲೂ ಈ ರೀತಿಯ ಪ್ರಯೋಗ ವಿಶಿಷ್ಟ ಎಂದು ಕೆ. ಸತ್ಯನಾರಾಯಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

About the Author

ಅಮರೇಶ ನುಗಡೋಣಿ
(02 June 1969)

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನುಗಡೋಣಿಯಲ್ಲಿ 1960 ರಲ್ಲಿ ಜನಿಸಿದ ಅಮರೇಶ ನುಗಡೋಣಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೇವನೂರು ಮಹಾದೇವರ ನಂತರದ ಲೇಖಕರಲ್ಲಿ ಶೋಷಣಾವ್ಯವಸ್ಥೆಯ ವಿವಿಧ ಮುಖಗಳನ್ನು ನುಗಡೋಣಿಯವರಷ್ಟು ಸಮರ್ಥವಾಗಿ ಚಿತ್ರಿಸಿದ ಲೇಖಕರು ಇನ್ನೊಬ್ಬರಿಲ್ಲ ಎಂದು ಹೇಳಬಹುದು. ಸಾಹಿತ್ಯದ ಹಲವು ಮಜಲುಗಳಲ್ಲಿ ಕೆಲಸ ಮಾಡಿರುವ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರ ಕವನ ಸಂಕಲನಗಳು- ನೀನು, ಅವನು, ಪರಿಸರ. ಕಥಾ ಸಂಕಲನ- ಮಣ್ಣು ಸೇರಿತು ಬೀಜ, ಅರಿವು (ನವಸಾಕ್ಷರರಿಗಾಗಿ), ತಮಂಧದ ಕೇಡು, ಮುಸ್ಸಂಜೆಯ ಕಥಾನಕಗಳು, ಸವಾರಿ, ಹಾಗೂ ವ್ಯಕ್ತಿ ಪರಿಚಯ ಕೃತಿಯಲ್ಲಿ ಶ್ರೀಕೃಷ್ಣ ಆಲನಹಳ್ಳಿ (ಬದುಕು ...

READ MORE

Related Books