ಹಗಲುಗಳ್ಳರು

Author : ಮಚ್ಚೇಂದ್ರ ಪಿ.ಅಣಕಲ್.

Pages 104

₹ 120.00




Year of Publication: 2019
Published by: ಲಕ್ಷ್ಮೀಕಾಂತ ಪ್ರಕಾಶನ
Address: ಶರಣನಗರ  (ಕಿಣ್ಣಿ) -585437, ತಾ.ಬಸವಕಲ್ಯಾಣ. ಜಿ.ಬೀದರ
Phone: 9945129331

Synopsys

ಲೇಖಕ ಮಚ್ಛೇಂದ್ರ ಪಿ. ಅಣಕಲ್ ಅವರ ಕಥಾ ಸಂಕಲನ-ಹಗಲುಗಳ್ಳರು. ಒಟ್ಟು 12 ಕತೆಗಳಿವೆ *ಹಗಲುಗಳ್ಳರು* ಈ ಕತೆಯಲ್ಲಿ ಮುಗ್ದ ಜನರಿಗೆ ಮಠಾಧೀಶರು ಹೇಗೆ ಭಕ್ತಿ ಭಾವದಿಂದ ವಂಚಿಸುತ್ತಾರೆ ಎಂಬುದು ಕಥಾ ವಸ್ಅತು. ಇದರಂತೆ ಬರ,  ಒಂದು ಎರಡು ಮೂರು, ಹೆಸರಿಗಾಗಿ ಸತ್ತವರು ಕೋಟಿ,  ಲಕ್ಕಜ್ಜ ,ಸ್ವಾಭಿಮಾನಿ, ಮೊದಲಾದ ಕತೆಗಳಲ್ಲಿ ದಲಿತ ಜನಾಂಗದ ನೋವಿದೆ. ಈ ಕೃತಿಗೆ ಮುನ್ನುಡಿ ಬರೆದ *ಡಾ.ಸೂರ್ಯಕಾಂತ ಸುಜ್ಯಾತ್* ಅವರು  *"ವಾಸ್ತವ ಬದುಕನ್ನು ಕಣ್ಮುಂದಿಟ್ಟುಕೊಂಡು ಅದರ ಓರೆ-ಕೋರೆಗಳನ್ನು ಓದುಗ ಪ್ರಪಂಚಕ್ಕೆ ಪರಿಚಯಿಸುವ, ಸಾಧ್ಯವಾದರೆ ಒಂದಿಷ್ಟು ಬದಲಾವಣೆ ಚಿಂತಿಸುವ ನಿಟ್ಟಿನಲ್ಲಿ ಇಲ್ಲಿಯ ಕತೆಗಳು ಮೂಡಿಬಂದಿವೆ’ ಎಂದು ಶ್ಲಾಘಿಸಿದ್ದಾರೆ. ಡಾ.ಸತೀಶಕುಮಾರ ಹೊಸಮನಿ ಅವರು ಬೆನ್ನುಡಿ ಬರೆದಿದ್ದಾರೆ.

About the Author

ಮಚ್ಚೇಂದ್ರ ಪಿ.ಅಣಕಲ್.
(12 June 1979)

ಮಚ್ಚೇಂದ್ರ ಪಿ ಅಣಕಲ್ ಮೂಲತ: ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದಲ್ಲಿ 12-06-1979 ರಂದು ಜನಿಸಿದರು. ಸದ್ಯ ಕಲಬುರಗಿ ನಿವಾಸಿ. ಯಾದಗಿರಿ ಜಿಲ್ಲೆಯ ಮಾವಿನಹಳ್ಳಿ ಪ್ರಾಥಮಿಕ ಶಾಲಾ ಶಿಕ್ಷಕರು. ಪತ್ರಿಕೋದ್ಯಮ ಹಾಗೂ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ಎಂ.ಇಡಿ ಪದವೀಧರರು.  ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ಹಾಗೂ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ ಅನುಭವವಿದೆ. 2002 ರಲ್ಲಿ ಸಂಯುಕ್ತ ಕರ್ನಾಟಕ ಸಾಪ್ತಾಹಿಕ ಸೌರಭದ ತಿಂಗಳ ಕಥಾ ಸ್ಪರ್ಧೆಯಲ್ಲಿ ಇವರ 'ಲಾಟರಿ'ಕತೆ  ಬಹುಮಾನ ಪಡೆದಿದೆ . 2010 ರಲ್ಲಿ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಡೆದ 6ನೇ ಅಕ್ಕ ವಿಶ್ವ ಕಥಾ ಸ್ಪರ್ಧೆಯಲ್ಲಿ  ...

READ MORE

Related Books