ಒಂದು+ಮತ್ತು ನೂರು ಕಥೆಗಳು

Author : ಕೆ.ಈ. ರಾಧಾಕೃಷ್ಣ

Pages 348

₹ 350.00




Year of Publication: 2021
Published by: ಆಶಾ ನಾಗೇಶ್
Address: ದೇಸಿ ಪುಸ್ತಕ ಪ್ರಕಾಶನ, #121,13ನೇ ಮುಖ್ಯರಸ್ತೆ, ಎಂ.ಸಿ.ಲೇಔಟ್, ವಿಜಯನಗರ, ಬೆಂಗಳೂರು-560040
Phone: 9845096668

Synopsys

ಪ್ರೊ. ಕೆ.ಈ. ರಾಧಾಕೃಷ್ಣ ಅವರ ‘ಒಂದು+ಮತ್ತು ನೂರು ಕಥೆಗಳು‘ ಕಥಾಸಂಕಲನವಾಗಿದೆ. ಸಾಹಿತಿ ಮಲ್ಲೇಪುರಂ ಜಿ ವೆಂಕಟೇಶ್ ಅವರು ಈ ಕಥಾಸಂಕಲನಕ್ಕೆ ಹಿನ್ನುಡಿ ಬರೆದು  ‘ರಾಧಾಕೃಷ್ಣ ಅವರು ಸುಖಾಸುಮ್ಮನೆ ಇಲ್ಲಿಯ ಕತೆಗಳನ್ನು ಬರೆಯುತ್ತಿಲ್ಲ. ಅವರು ನಮ್ಮ ಸಮಕಾಲೀನ ವಸ್ತು ವಿಷಯಗಳನ್ನು ವ್ಯಂಗ್ಯ, ಟೀಕೆ, ಚಾಟೂಕ್ತಿ ಇವುಗಳಿಂದ ನಮ್ಮನ್ನು ತಿವಿಯುತ್ತಲೇ ಇರುತ್ತಾರೆ. ಈ ‘ತಿವಿತ’ ನಮ್ಮ ಸಾಮಾಜಿಕ, ಸಾಂಸ್ಕೃತಿಕ ಎಚ್ಚರಕ್ಕೆ ಕಾರಣವಾದೀತೆಂದು ನಾನು ಬಲವಾಗಿ ನಂಬಿದ್ದೇನೆ ಎಂದು ಹೇಳಿದ್ದಾರೆ

ಲೇಖಕ ಕೆ.ಸತ್ಯನಾರಾಯಣ ಅವರು, ‘ಮನುಷ್ಯನಾದವನು ಎಲ್ಲ ಕಾಲದಲ್ಲೂ ಮೌನವನ್ನು ಹುಡುಕುತ್ತಾನೆ. ಹುಡುಕಬಲ್ಲ. ಬದುಕಿನ ಸಾರ್ಥಕ ನೆಲೆಗಳು ಯಾವುವು ಎಂಬುದರ ಶೋಧ, ಜಿಜ್ಞಾಸೆ ಇಲ್ಲಿಯ ಬೇರೆ ಬೇರೆ ಕಾಲದ ಕತೆಗಳ ಒಬ್ಬರೇ ಲೇಖಕರಾದ ರಾಧಾಕೃಷ್ಣರ ಬರವಣಿಗೆಯ ಸ್ಥಾಯೀಭಾವ. ಈ ಸಂಪುಟದಲ್ಲಿ ಪುರಾಣದ, ಇತಿಹಾಸದ ಕತೆಗಳಿವೆ. ಇವುಗಳ ಮರುನಿರೂಪಣೆಯಲ್ಲಿ ರಾಧಾಕೃಷ್ಣರು ಈ ಕತೆ ಸಮಕಾಲೀನ ಚಾಚುಗಳನ್ನು, ಪ್ರಸ್ತುತತೆಯನ್ನು ಕುರಿತು ಹೇಳುತ್ತಾರೆ’ ಎಂದು ಪ್ರಶಂಸಿಸಿದ್ದಾರೆ.

ಸಾಹಿತಿಗಳಾದ ಬೊಳುವಾರು ಮೊಹಮ್ಮದ್ ಕುಂಞ್,  ಎಸ್ ದಿವಾಕರ್ ಅವರು ಈ ಕೃತಿಗೆ ಹಿನ್ನುಡಿ ಬರೆದು ಕೃತಿಯ ರಚನೆಯನ್ನು ಶ್ಲಾಘಿಸಿದ್ದಾರೆ. 

About the Author

ಕೆ.ಈ. ರಾಧಾಕೃಷ್ಣ
(22 December 1946)

ಪ್ರೊ. ಕೆ.ಈ. ರಾಧಾಕೃಷ್ಣ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪೆರಾಜೆ (ಜನನ: 22-12-1946) ಮೂಲದವರು. ತಂದೆ ಈಶ್ವರಪ್ಪ, ತಾಯಿ ಕಾವೇರಮ್ಮ. ಬೆಂಗಳೂರು ವಿ.ವಿ.ಯಿಂದ ಇಂಗ್ಲಿಷ್ ನಲ್ಲಿ ಎಂ.ಎ. ಹಾಗೂ ಎಲ್.ಎಲ್. ಬಿ.ಪದವೀಧರರು. 1972 ರಲ್ಲಿ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ 1988 ರಲ್ಲಿ ಪ್ರಾಂಶುಪಾಲರಾಗಿ, 2002 ರಲ್ಲಿ ಸ್ವಯಂ ನಿವೃತ್ತಿ ಪಡೆದರು. ಯುಜಿಸಿ ಯಲ್ಲಿ ವಿಷಯ ಪರಿಣಿತರ ಸಮಿತಿ ಸದಸ್ಯರಾಗಿದ್ದರು. ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ನೀತಿ ರಚನೆಯ ಸಮಿತಿ ಸದಸ್ಯರಾಗಿದ್ದರು. ಬೆಂಗಳೂರು ವಿ.ವಿ.ಯಲ್ಲಿ ಅಭ್ಯಾಸ ಮಂಡಳಿ, ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಹೀಗೆ ವಿವಿಧ ವಿಭಾಗಗಳಲ್ಲಿ ...

READ MORE

Related Books