ಕುಂವೀ ಕಥೆ

Author : ಕುಂ. ವೀರಭದ್ರಪ್ಪ

₹ 600.00




Year of Publication: 2022
Published by: ಸುವ್ವಿ ಪಬ್ಲಿಕೇಶನ್ಸ್‌
Address: ಡಾ.ಬಿ.ಅಂಬೇಡ್ಕರ್‌ ರಸ್ತೆ ,ಶಿಕಾರಿಪುರ , ಶಿವಮೊಗ್ಗ
Phone: 9620083614

Synopsys

ಕುಂವೀ ಅವರು 70ಕ್ಕೆ ಕಾಲಿಡುತ್ತಿರುವ ಹೊತ್ತಲ್ಲಿ ಹೊರಬರುತ್ತಿರುವ ಅವರ ಅತ್ಯುತ್ತಮ 50 ಕಥೆಗಳ ಸಂಗ್ರಹ. ಕುಂವೀಯವರ ಒಟ್ಟು ಕಥಾ ಸಾಹಿತ್ಯದ ಮೆರುಗನ್ನು ಒಟ್ಟಿಗೆ ಕಾಣಿಸುವ ಹಾಗೆ ಈ ಕೃತಿ ಇದೆ. ಅವರ ಕಥೆಗಾರಿಕೆಯ ಸೊಗಸಿಗೂ ಶಕ್ತಿಗೂ ಕನ್ನಡಿಯಾಗಬಲ್ಲ ಕೃತಿಯಿದು. ಈ ಪುಸ್ತಕಕ್ಕೆ ಬೆನ್ನುಡಿಯಾಗಿ ಡಾ. ಎಚ್.ಎಸ್. ರಾಘವೇಂದ್ರರಾವ್, ಡಾ. ಸಿ.ಎನ್. ರಾಮಚಂದ್ರನ್, ಡಾ. ರಾಜೇಂದ್ರ ಚೆನ್ನಿ, ಪ್ರೊ. ಓ.ಎಲ್. ನಾಗಭೂಷಣಸ್ವಾಮಿ, ಟಿ.ಪಿ. ಅಶೋಕ, ಪ್ರೊ. ಬಸವರಾಜ ಕಲ್ಗುಡಿ ಅವರ ಮಾತುಗಳನ್ನು ಬಳಸಿಕೊಳ್ಳಲಾಗಿದೆ. 

About the Author

ಕುಂ. ವೀರಭದ್ರಪ್ಪ
(01 October 1953)

ಕುಂ.ವೀ. ಎಂದೇ ಜನಪ್ರಿಯರಾಗಿರುವ ಕಾದಂಬರಿಕಾರ, ಕತೆಗಾರ ಕುಂ. ವೀರಭದ್ರಪ್ಪ ಅವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನವರು. 1953ರ ಅಕ್ಟೋಬರ್ 1ರಂದು ಜನಿಸಿದರು. ‘ಬೇಲಿ ಮತ್ತು ಹೊಲ’ ಕಿರುಕಾದಂಬರಿಯ ಮೂಲಕ ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯ ಬೇಲಿಗಳನ್ನು ಜಿಗಿದ ಕುಂ. ವೀರಭದ್ರಪ್ಪ, ಓದುಗರನ್ನು ಆಕರ್ಷಿಸಿದ್ದು ತಮ್ಮ ವಿಶಿಷ್ಟ ಭಾಷಾ ಪ್ರಯೋಗ ಮತ್ತು ನುಡಿಗಟ್ಟುಗಳಿಂದ. ಅವರ ಕತೆಗಳಲ್ಲಿ ಕಾದಂಬರಿಗಳಲ್ಲಿ ಕಾಣಿಸಿಕೊಂಡ ಭಾಷೆ ಅವರಿಗೆ ಸಾಹಿತ್ಯದಲ್ಲೊಂದು ಪ್ರತ್ಯೇಕ ಸ್ಥಾನ ಕಲ್ಪಿಸಿಕೊಟ್ಟಿತು. ’ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ’, ’ಕತ್ತಲಿಗೆ ತ್ರಿಶೂಲ ಹಿಡಿದ ಕತೆ’ಗಳ ಮೂಲಕ ಸಣ್ಣ ಕತೆಯ ದಿಕ್ಕನ್ನು ಬದಲಾಯಿಸಿದರು. ಶಿವರಾಜ್ ...

READ MORE

Related Books