ಋಣಭಾರ

Author : ಅನಂತ ಕುಣಿಗಲ್

Pages 110

₹ 100.00




Year of Publication: 2020
Published by: ಅವ್ವ ಪುಸ್ತಕಾಲಯ
Address: #189, ಕೆಂಚನಹಳ್ಳಿ (ಅಂಚೆ), ಹೆಚ್.ದುರ್ಗ (ಹೋ), ಕುಣಿಗಲ್ (ತಾ), ತುಮಕೂರು - 572123
Phone: 9742029908

Synopsys

ಅನಂತ ಅವರ ಚೊಚ್ಚಲ ಕೃತಿ "ಋಣಭಾರ" ಕಥಾಸಂಕಲನದಲ್ಲಿ 15 ಕಥೆಗಳಿದ್ದು, ಸಂಬಂಧಗಳನ್ನು ಹುಡುಕಾಡುವ ಪರಿ, ಹಳ್ಳಿ ಚಿತ್ರಣಗಳು ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಸಂಬಂಧಿತ ಕಥೆಗಳನ್ನು ಹೆಣೆಯಲಾಗಿದೆ. ಈ ಕೃತಿಯು 2019ನೇ ಸಾಲಿನ 'ಕನ್ನಡ ಪುಸ್ತಕ ಪ್ರಾಧಿಕಾರ, ಯುವಬರಹಗಾರರ ಚೊಚ್ಚಲ ಕೃತಿ' ಬಹುಮಾನ ಪಡೆದಿದೆ. ಸಂಕಲನಕ್ಕೆ, ಕಥೆಗಾರ ಹನುಮಂತ ಹಾಲಿಗೇರಿ ಮುನ್ನುಡಿ ಬರೆದಿದ್ದಾರೆ. ಕಥಾ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ. 


 

About the Author

ಅನಂತ ಕುಣಿಗಲ್
(20 December 1997)

ಅನಂತ (20-ಡಿಸೆಂಬರ್-1997) ಅವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆಂಚನಹಳ್ಳಿ ಗ್ರಾಮದವರು. ತಾಯಿ ಗೌರಮ್ಮ ಮತ್ತು ತಂದೆ ಶ್ರೀಮಾನ್ ಲೇ. ನರಸಯ್ಯ. ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದ ನಂತರ ಚಿತ್ರದುರ್ಗ ಜಿಲ್ಲೆಯ ಸಾಣೆಹಳ್ಳಿಯಲ್ಲಿ ಥಿಯೇಟರ್ ಡಿಪ್ಲೊಮಾ ತರಬೇತಿ ಮುಗಿಸಿ, ಶಿವಸಂಚಾರ ರೆಪರೇಟರಿಯಲ್ಲಿ ನಟ ಹಾಗೂ ತಂತ್ರಜ್ಞನಾಗಿ ಕಾರ್ಯನಿರ್ವಹಿಸಿದ್ದಾರೆ. ಹಲವಾರು ಕನ್ನಡ ಕಿರುಚಿತ್ರಗಳನ್ನು ನಿರ್ಮಿಸಿ, ಶಾಲಾ ಕಾಲೇಜು ಮಕ್ಕಳಿಗೆ ಕಿರು ನಾಟಕಗಳನ್ನು ನಿರ್ದೇಶನ ಮಾಡಿರುತ್ತಾರೆ. ಅವ್ವ ಪುಸ್ತಕಾಲಯ ಎಂಬ ಸಾಹಿತ್ಯ ಬಳಗವನ್ನು ಕಟ್ಟಿಕೊಂಡು ಸಾಹಿತ್ಯ ಸೇವೆಯಲ್ಲಿ ನಿರಂತರಾಗಿರುವ ಇವರು ಸದ್ಯ ಬೆಂಗಳೂರಿನಲ್ಲಿದ್ದುಕೊಂಡು ಕನ್ನಡ ಚಲನಚಿತ್ರಗಳಲ್ಲಿ ...

READ MORE

Reviews

ಇಕ್ಕಟ್ಟಿನಲ್ಲಿ ಬದುಕಿದರೂ, ನೆಮ್ಮದಿಯಿಂದ ದಿನ ಕಳೆಯುವವರಲ್ಲಿ ಮಿಡಲ್ ಕ್ಲಾಸ್ ಫ್ಯಾಮಿಲಿಯರದ್ದೇ ಎತ್ತಿದ ಕೈ. ಬೆರಳೆಣಿಕೆಯಷ್ಟೇ ಮನೆ ಜನ. ಎಲ್ಲರಿಗೂ ಒಂದೇ ಟಿ.ವಿ, ಒಂದೇ ಬಾತ್ರೂಮ್, ಹಾಗೂ ಒಂದೇ ಕಿಚನ್. ಇವರು ಆಚಾರ-ವಿಚಾರ, ಸಂಸ್ಕೃತಿ-ಸಂಪ್ರದಾಯ, ಗೌರವ-ಮರ್ಯಾದೆಗಳಿಗಾಗಿಯೇ ಉಸಿರಾಡುತ್ತಾರೆ. ದೊಡ್ಡ ದೊಡ್ಡ ಕನಸುಗಳು ಈಡೇರದಿದ್ದರೂ ಚಿಕ್ಕ ಪುಟ್ಟ ಆಸೆಗಳಲ್ಲಿಯೇ ತೃಪ್ತಿಪಡುತ್ತಾರೆ. "ಹಾಸಿಗೆ ಇದ್ದಷ್ಟು ಕಾಲು ಚಾಚು, ಆಸೆಯೇ ದುಃಖಕ್ಕೆ ಮೂಲ, ಅತಿ ಆಸೆ ಗತಿ ಕೇಡು, ನಿಧಾನವೇ ಪ್ರದಾನ" ಇವುಗಳು ಗಾದೆಗಳಾಗಿರದೆ, ಮಿಡಲ್ ಕ್ಲಾಸ್ ಫ್ಯಾಮಿಲಿಯ ಧ್ಯೇಯೋದ್ಧೇಶಗಳಾಗಿರಬೇಕಾಗಿತ್ತು. ಯಾಕೆಂದರೆ ಅವುಗಳಂತೆ ನಡೆಯುವವರು ಇವರು ಮಾತ್ರವೇ.. ಸಣ್ಣ ಸೂಜಿಯಿಂದ ಸಾವಿನವರೆಗೂ ಅಚ್ಚುಕಟ್ಟಿನ ಬದುಕಿಗಾಗಿ ಹೋರಾಡುವ ಹಲವಾರು ವೈವಿಧ್ಯಮಯ ಪಾತ್ರಗಳನ್ನು ಅನಂತ ಅವರು ಈ ಸಂಕಲನದಲ್ಲಿ ಪರಿಚಯಿಸಿದ್ದಾರೆ. ಕಥೆಗಳಲ್ಲಿ ಒಂದೊಂದು ಪಾತ್ರಗಳು ತಮ್ಮನ್ನು ತಾವೇ ಸುತ್ತಿಕೊಂಡಿರುವ ರೀತಿಯಲ್ಲಿ ಕಂಡುಬಂದಿವೆ. ಸುಖ-ದುಃಖ, ನೋವು-ನಲಿವು, ಆಸೆ-ಆಯಾಸಗಳನ್ನು ಸಮಾನವಾಗಿ ಸ್ವೀಕರಿಸುವ ಎಲ್ಲರಿಗೂ ಈ ಕಥೆಗಳು ಊಟದೆಲೆಯ ಮೇಲಿನ ಪಾಯಸ ಹಾಗೂ ಲಡ್ಡುವಿನಂತೆ ರುಚಿಸುತ್ತವೆ. ನಮ್ಮ ಪ್ರಕಾಶನದ ಪ್ರಕಟಣೆಯ ಮೊದಲ ಕೃತಿಯಾಗಿ ಅನಂತ ಅವರ "ಋಣಭಾರ" ಕಥಾ ಸಂಕಲನ ಸಿಕ್ಕಿದ್ದು ನಮಗೆ ಖುಷಿ ತಂದಿದೆ.
-ನಾರಾಯಣ್ ಕೆ ಎನ್
ಪ್ರಕಾಶಕರು, ಅವ್ವ ಪುಸ್ತಕಾಲಯ

Related Books