ಪಂಚಬಳ್ಳಿಯ ಕತೆಗಳು

Author : ಸವಿತಾ ಶ್ರೀನಿವಾಸ್

Pages 160

₹ 50.00




Published by: ದಿವ್ಯಚಂದ್ರ ಪ್ರಕಾಶನ
Address: # 6/7, ಕಾಳಿಕಾ ಸೌಧ, ಪೂರ್ಣಿಮಾ ಛತ್ರಂ ರಸ್ತೆ, ಕಾರ್ಪೋರೇಟ್ ವಾರ್ಡ್ ಕಚೇರಿ, ಬೆಂಗಳೂರು-560053

Synopsys

‘ಪಂಚಬಳ್ಳಿಯ ಕಥೆಗಳು’ ಕೃತಿಯು ಸವಿತಾ ಶ್ರೀನಿವಾಸ್ ಅವರ ಕತಾಸಂಕಲನವಾಗಿದೆ. ಲೇಖಕಿಯೇ ಹೇಳುವಂತೆ ಇಲ್ಲಿನ ಕಥೆಗಳು `ಅಸಾಮಾಜಿಕವೇ‘. ಅವರು ಇಲ್ಲಿ ಫ್ಯಾಂಟಸಿ, ವಿಜ್ಞಾನ, ಮನಃಶಾಸ್ತ್ರ, ಪೌರಾಣಿಕ ವಿಷಯಗಳನ್ನು ಬಳಸಿದ್ದಾರೆ. ಹಾಗೆ ನೋಡಿದರೆ, ಇಲ್ಲಿನ ಕಥೆಗಳು ಬಳಸುವ ಭಾಷೆ ನಾವು ಕೇಳುವ ನಿತ್ಯದ ಕನ್ನಡದಂತಿಲ್ಲ. ಒಂದು ಉದಾಹರಣೆಯನ್ನು ನೋಡಬಹುದು. `ಏನು ಪ್ರಿಯವರ, ಸರಿಯಾದ ಸಮಯಕ್ಕೆ ನನ್ನನ್ನು ಸಂಪರ್ಕಿಸಿದಿರಿ‘ `ಯಾಕೆ … ಏನಾದರೂ ಬೆಳವಣಿಗೆ ಕಂಡು ಬಂತೇ?’ `ಹೂಂ… ಪ್ರಕೃತಿಯಲ್ಲಿ ಕೆಲವೊಂದು ವೈಚಿತ್ರ್ಯಗಳು ಜರುಗಿದವು. ಮಹಾಭಾರತದ ವಸ್ತುವನ್ನು ಆಧರಿಸಿದ `ಸುಗಂಧವಲ್ಲರಿಯ ಜಾಡು ಹಿಡಿದು. . .‘, ವೇಶ್ಯೆಯೊಬ್ಬಳ ಅಂತರಂಗವನ್ನು ಬಿಚ್ಚಿಡುವ `ಕೆಂಪು ನಗರಿಯ ಕಪ್ಪು ಜನರು‘ ತಮ್ಮ ಸೀಮಿತ ವಸ್ತುವಿನ ನಡುವೆಯೇ ಓದಲು ಅರ್ಹವಾದ ಕಥೆಗಳು ಇವುಗಳಾಗಿವೆ.

About the Author

ಸವಿತಾ ಶ್ರೀನಿವಾಸ್

ಸವಿತಾ ಶ್ರೀನಿವಾಸ ಅವರು ಮೂಲತಃ ಬೆಂಗಳೂರಿನವರು.  ಸ್ನಾತಕೋತ್ತರ ಡಿಪ್ಲೊಮಾ (ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ) ಎಂ.ಎ.(ಯೋಗ) ಪದವಿ ಪಡೆದಿದ್ದಾರೆ. ತಂದೆ ಎಂ.ಸಿ. ಶ್ರೀನಿವಾಸ, ತಾಯಿ ರತ್ನಮ್ಮ. ಕೃತಿಗಳು : ಮಧುಮಾಸ (ಕಾದಂಬರಿ) ೧೯೯೩, ಈ ಮನದ ಆಕಾಶಗಂಗೆ (ಕಥಾ ಸಂಕಲನ) ೧೯೯೩, ಹಿಮಗಿರಿಯ ಹೇಮಲತೆ (ಕಾದಂಬರಿ) ೧೯೯೪, ರ‍್ಮನಿಯ ಒಡಲಲ್ಲಿ (ಪ್ರವಾಸ ಕಥನ) ೧೯೯೮, ಕನ್ನಡ ವೈಜ್ಞಾನಿಕ ಕತೆಗಳು (ಸಂಪಾದಿತ) ೨೦೦೦, ಶತಮಾನದಂಚಿನ ಮಿಂಚು (ಕಥಾ ಸಂಕಲನ) ೨೦೦೧, ಹೂಗುಚ್ಛ (ಪ್ರೌಢಮಕ್ಕಳ ಕತೆಗಳು) ೨೦೦೧, ಸಂಗೀತ ಚಿಕಿತ್ಸೆ (ವೈಜ್ಞಾನಿಕ) ೨೦೦೨, ಕಾಮನಬಿಲ್ಲ ಅರಸುವವರು (ದಶಕದ ಆಯ್ದಕತೆಗಳು) ೨೦೦೫, ...

READ MORE

Related Books