ಭಾವಗುಚ್ಛ

Author : ಸಿರಿಮೂರ್ತಿ ಕಾಸರವಳ್ಳಿ

Pages 92

₹ 80.00




Year of Publication: 2017
Published by: ನಿವೇದಿತ ಪ್ರಕಾಶನ
Address: #3437, 1ನೇ ಮಹಡಿ, 4ನೇ ಮುಖ್ಯ ರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀನಗರ ಬನಶಂಕರಿ, 2ನೇ ಹಂತ ಬೆಂಗಳೂರು-
Phone: 9480430115

Synopsys

‘ಭಾವಗುಚ್ಛ’ ಸಿರಿಮೂರ್ತಿ ಕಾಸರವಳ್ಳಿ ಅವರ ಕತಾ ಸಂಕಲನವಾಗಿದೆ. ಇಲ್ಲಿನ ಕೆಲವು ಕತೆಗಳು ನಾಡಿನ ಹಲವು ಮಾಸ ಪತ್ರಿಕೆ, ವಾರಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕತೆ ಹೇಗೆ ಕಟ್ಟುವುದು, ಕತೆ ಹೇಗೆ ಹುಟ್ಟುತ್ತದೆ, ಯಾವ ಒತ್ತಡ ಬರವಣಿಗೆ ಮೂಲಕ ಅವನ್ನು ಹೊರಹಾಕುತ್ತದೆ ಎಂದರೆ ಉತ್ತರವಿಲ್ಲ. ಕೆಲವೊಮ್ಮೆ ಬುದ್ದಿಗೆ ಮಂಕು ಬಡಿದಾಗ ಉತ್ತರವಿಲ್ಲ. ಒಂದು ಚಿಕ್ಕ ಸನ್ನಿವೇಶವೋ, ನೈಜ ಘಟನೆಯೋ, ಸಿಕ್ಕಿದಾಗೆಲ್ಲ ಕಲ್ಪನೆಗಳು ಗರಿಗೆದರಿ ಕತೆಯಾಗಿದ್ದೂ ಇದೆ. ಕೆಲವೊಮ್ಮೆ ಬುದ್ದಿಗೆ ಮಂಕು ಕವಿದಾಗ ಕಣ್ಣೆದುರು ಏನಿದ್ದರೂ ಗ್ರಹಿಸಲಾದ ಮನಸ್ಥಿತಿಯಲ್ಲಿ ಒಳ್ಳೆಯ ಕಥಾಹಂದರವಿದ್ದರೂ, ಒಂದಕ್ಷರ ಬರೆಯಲಾಗದೆ ತಟಸ್ಥವಾಗಿದ್ದು ಇದೆ. ಬರೆದ ಎಷ್ಟೋ ಕತೆಗಳು ಪೂರ್ಣವಾಗದೆ ತೃಪ್ತಿ ಸಿಗದೆ ಉಂಡೆಯಾಗಿ ಕಸದ ಬುಟ್ಟಿ ಸೇರುವಾಗಿನ ನೋವು ಕಾಡಿದ್ದಿದೆ ಎಂದು ಲೇಖಕಿಯು ತಮ್ಮ ಕಥೆ ಬರಹ ಕುರಿತು ಅಭಿಪ್ರಾಯ ಪಟ್ಟಿದ್ದಾರೆ. .

About the Author

ಸಿರಿಮೂರ್ತಿ ಕಾಸರವಳ್ಳಿ

ಲೇಖಕಿ ಸಿರಿಮೂರ್ತಿ ಕಾಸರವಳ್ಳಿ ಅವರು ಮೂಲತಃ ಹೊಸನಗರದ ಹುಲಿಕಲ್ ನವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಅವರ ಅನೇಕ ಕತೆಗಳು ನಾಡಿವ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಚಿತ್ರಕಲೆ ಹಾಗೂ ಬರಹ ಅವರ  ಆಸಕ್ತಿದಾಯಕ ಕ್ಷೇತ್ರ. ಮೈಸೂರು ಚಿತ್ರಕಲೆ, ತಂಜಾವೂರ್ ಚಿತ್ರಕಲೆ, ಬೌಟಿಕ್ ಚಿತ್ರಕಲೆ, ಕಲಾಕೃತಿ, ದೂರದರ್ಶನದಲ್ಲಿ ಕಸೂತಿ ಕಲೆ ಪ್ರದರ್ಶನ, ಮತ್ತು ಪರಿಕಲ್ಪನೆಯ ಹಲವು ನಾಟಕಗಳ ಪ್ರದರ್ಶನಗಳನ್ನು ನೀಡಿರುತ್ತಾರೆ. ಚಂದನ ವಾಹಿನಿಯಲ್ಲಿ ಸಾಹಿತ್ಯ ಕುರಿತು ಸಂದರ್ಶನ ನೀಡಿದ್ದು, ಆಕಾಶವಾಣಿ ವನಿತಾ ವಿಭಾಗದಲ್ಲಿ ಕತೆ ಪ್ರಸ್ತುತಿಯನ್ನು ಮಾಡಿರುತ್ತಾರೆ. ಕೃತಿಗಳು : ಭಕ್ತಿ ಭಾವ ಸಿರಿ (ಭಕ್ತಿ ಗೀತೆಗಳ ಸಂಕಲನ), ನಡೆದು ಬಂದ ...

READ MORE

Related Books