ಲೇಖಕ ಸದಾಶಿವ ಸೊರಟೂರ ಅವರ ಮೊದಲ ಕಥಾ ಸಂಕಲನ ಕೃತಿ ʻಅರ್ಧ ಬಿಸಿಲು ಅರ್ಧ ಮಳೆʼ. ವಿವಿಧ ಕಥಾ ವಸ್ತುಗಳಲ್ಲಿ ಇಲ್ಲಿರುವ ಕತೆಗಳನ್ನು ಹೆಣೆಯಲಾಗಿದೆ. ಪುಸ್ತಕದ ಪರಿವಿಡಿಯಲ್ಲಿ ನೀಲಿ, ಬಿಸಿಲು ಕೋಲು, ಮುಗಿಲ ದುಃಖ, ವಿದಾಯ, ಹುಚ್ಚು ಶೀರ್ಷಿಕೆಗಳ ಕಥೆಗಳಿವೆ. ಬೆನ್ನುಡಿಯಲ್ಲಿ ವಿದ್ಯಾರಶ್ಮಿ ಪೆಲತ್ತಡ್ಕ ಅವರು, ತೃತೀಯ ಲಿಂಗಿಗಳ ಒಳತೋಟಿ, ಹೆಣ್ಣಿನ ಬೇಗುದಿ, ಎಳೆಮನದ ತೊಳಲಾಟ, ಮನೋವೈದ್ಯಕೀಯ ಒಳನೋಟ... ಹೀಗೆ ವಿವಿಧ ವಸ್ತುಗಳ ಎಳೆ ಹಿಡಿದು ನಡೆದಿದ್ದಾರೆ ಸದಾಶಿವ ಸೊರಟೂರು. ಇಲ್ಲಿನ ಕಥೆಗಳಲ್ಲಿ ಕಲಾತ್ಮಕತೆ ಇದೆ. ಸುಲಲಿತ ಭಾಷೆ, ಮಾನವೀಯ ಮೌಲ್ಯಗಳ ಬನಿ ಕಥನಗಾರಿಕೆಯ ಅಂದ ಹೆಚ್ಚಿಸಿವೆ. ವಾಸ್ತವ ಲೋಕದ ತಲ್ಲಣಗಳು ಇಲ್ಲಿ ಕಥೆಗಳಾಗಿವೆ. ಬಹುತ್ವದ ಪದರು ಪದರುಗಳು ಕಥೆಗಳಾಗಿ ಅನಾವರಣಗೊಳ್ಳುವ
ಸದಾಶಿವ್ ಸೊರಟೂರು ಅವರು ಜನಿಸಿದ್ದು 1983 ಜೂನ್ 18ರಂದು. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನವರಾದ ಸದಾಶಿವ ಪ್ರಸ್ತುತ ಚಿಂತಾಮಣಿ ತಾಲ್ಲೂಕಿನ ದೊಡ್ಡಬೊಮ್ಮನಹಳ್ಳಿ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಕನಸುಗಳಿವೆ ಕೊಳ್ಳುವವರಿಲ್ಲ, ಹೆಸರಿಲ್ಲದ ಬಯಲು, ಕನಸುಗಳಿವೆ ಕೊಳ್ಳುವವರಿಲ್ಲ, ಹೊಸ್ತಿಲಾಚೆ ಬೆತ್ತಲೆ, ತೂತು ಬಿದ್ದ ಚಂದಿರ ಮುಂತಾದವು. ...
READ MORE