ಶೀರ್ಷಿಕಾ

Author : ನಾಗವೇಣಿ ಹೆಗಡೆ

Pages 100

₹ 120.00




Year of Publication: 2021
Published by: ಹೆಚ್.ಎಸ್.ಆರ್.ಎ.ಪ್ರಕಾಶನ
Address: #2 ಅನ್ನಪೂರ್ಣೇಶ್ವರಿ ನಿಲಯ, 1ನೇ ಮುಖ್ಯ ರಸ್ತೆ, ಭೈರವೇಶ್ವರ ನಗರ,ಲಗ್ಗೆರೆ, ಬೆಂಗಳೂರು 560058.
Phone: 7892793054

Synopsys

ಲೇಖಕಿ ನಾಗವೇಣಿ ಹೆಗಡೆ ಅವರ ಸಾಹಿತಿ ಸುರೇಶ್ ಕೊರಕೊಪ್ಪ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ನಾಗವೇಣಿ ಹೆಗಡೆಯವರ ಈ "ಶೀರ್ಷಿಕಾ" ಕಥಾಸಂಕಲನ ಸಹೃದಯ ಓದುಗ ದೊರೆಗಳನ್ನು ನಿಶ್ಚಿತವಾಗಿ ನಿರಾಸೆ ಮಾಡಲಾರದು. ಒಂದಕ್ಕಿಂತ ಒಂದು ವಿಭಿನ್ನ ವಿಷಯವಸ್ತುಗಳ ಕಥಾಹಂದರ ಕುತೂಹಲ ಮೂಡಿಸುತ್ತಾ ಸಾಗುವುದೇ ಈ ಕೃತಿಯ ವೈಶಿಷ್ಟ್ಯ. ಕಥೆಯ ನಿರೂಪಣೆಗೆ ಇರಬೇಕಾದ ಶೈಲಿ, ಸಂಭವ, ಪರಿಭಾಷೆ, ಪರಿಕರಗಳನ್ನು ಸಂದರ್ಭಕ್ಕೆ ತಕ್ಕಂತೆ ಸಮರ್ಪಕವಾಗಿ ನಿಭಾಯಿಸಿದ್ದಾರೆ. ಸಹಜಸುಂದರ ಸಹ್ಯಾದ್ರಿ ವನಸಿರಿಯ ಮಡಿಲಲ್ಲಿ ಅರಳಿದ ಮನವಿದು. ಆ ಕಾರಣಕ್ಕಾಗಿಯೇ ಆ ಮನೋಹರ ನಿಸರ್ಗವನ್ನು ಕೃತಿಯಲ್ಲಿ ತುಂಬಿ ಕೃತಿಯ ಚೆಲುವನ್ನು ಹೆಚ್ಚಿಸಿದ್ದಾರೆ. ಭಾಷೆಯ ಮೇಲೆ ಹಿಡಿತವಿದೆ. ಹಾಗೆಯೇ ಪ್ರಬುದ್ಧತೆಯೂ ಇದೆ. ಅಲಂಕಾರ ವರ್ಣನೆಗಳಿಗೂ ಕೊರತೆಯೇನಿಲ್ಲ. ಕೆಲವು ಕಥೆಗಳಲ್ಲಿ ಹುಟ್ಟಿ ಬೆಳೆದ ಪ್ರಾದೇಶಿಕ ನೆರಳಚ್ಚು ದಟ್ಟವಾಗಿದೆ. ಅಷ್ಟೇ ಅಲ್ಲ.. ತಮ್ಮ ಪರಿಸರದ ಹವ್ಯಕ ಭಾಷೆಯು ಓದುಗರನ್ನು ಕೂಡ ಕುತೂಹಲದಿಂದ ಕಲಿಯಲು ಪ್ರೇರೇಪಿಸುತ್ತದೆ.

About the Author

ನಾಗವೇಣಿ ಹೆಗಡೆ

ಕವಯತ್ರಿ ನಾಗವೇಣಿ ಹೆಗಡೆ ಅವರು ಮೂಲತಃ ಶಿರಸಿಯ ಹೆಗ್ಗರ್ಸಿಮನೆ ಗ್ರಾಮದವರು. ಜನಿಸಿದ್ದು ಶಿರಸಿಯ ಬೊಮ್ಮನಹಳ್ಳಿಯಲ್ಲಿ. ತಂದೆ ಕಮಲಾಕರ, ತಾಯಿ ಸುನಂದಾ. ಗೃಹಿಣಿಯ ಹೊಣೆಗಾರಿಕೆ ಮಧ್ಯೆಯೂ ಫ್ಯಾಷನ್ ಡಿಸೈನ್ ಸೇರಿದಂತೆ ಸಾಹಿತ್ಯದಲ್ಲೂ ವಿಶೇಷ ಆಸಕ್ತರು. ಮೊದಲಿನಿಂದಲೂ ಕರಕೌಶಲಗಳಲ್ಲಿಆಸಕ್ತರು. ಮಾತ್ರವಲ್ಲ; ಭರ್ಚಿಎಸೆತ, ರೀಲೆ, ವಾಲಿಬಾಲ್ , ಕಬ್ಬಡ್ಡಿಗಳಲ್ಲೂ ಬಹುಮಾನ ವಿಜೇತರು. ನಾಡಿನ ಹಲವಾರು ಪತ್ರಿಕೆಗಳಲ್ಲಿಇವರ ಕಥೆ-ಕವನಗಳು  ಪ್ರಕಟಗೊಳ್ಳುತ್ತಿವೆ. `ಕಣ್ಣು'  ಪತ್ರಿಕೆಯ ಶಿರಸಿ ಉಪಸಂಪಾದಕಿ ಹಾಗೂ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೋನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.  ಕೃತಿಗಳು: ಕಾವ್ಯಮಂಜರಿ (ಕವನ ಸಂಕಲನ-2018), ಅಗ್ನಿದಿವ್ಯ (ಕವನ ಸಂಕಲನ( 2021), ಒಲವ ಹಂಚುವ ಮುದುಕಿ(ಮಕ್ಕಳ ಕಾದಂಬರಿ-2021, ವಿನಯವಾಣಿ ...

READ MORE

Related Books