ವಸುಂಧರ

Author : ಡಿ ಎನ್. ಕೃಷ್ಣಮೂರ್ತಿ

Pages 360

₹ 0.00




Year of Publication: 2017
Published by: ಪುನಶ್ಚೇತನ ಪ್ರಕಾಶನ
Address: ದೊಡ್ಡಮಾರಗೌಡನಹಳ್ಳಿ, ಮೈಸೂರು ತಾಲ್ಲೂಕು, ಮೈಸೂರು -570026
Phone: 9008149968

Synopsys

ಇದೊಂದು ಮಹಿಳಾ ಪ್ರಧಾನ ಕಾದಂಬರಿ. ಈ ಕಾದಂಬರಿಯ ಕಥಾನಾಯಕಿ ವಸುಂಧರ ಭೂಮಿ ತೂಕದ ಹೆಣ್ಣು. ತನ್ನ ಜೀವನದಲ್ಲಿ ಏನೆಲ್ಲ ಕಷ್ಟಗಳು, ಸಮಸ್ಯೆಗಳು ಎದುರಾದರೂ ಶೀಲವನ್ನು ಕಳೆದುಕೊಳ್ಳದ ಮಹಾಪತಿವ್ರತೆ. ತನ್ನ ತಂಗಿಯರಿಗಾಗಿ, ತನ್ನ ಮಕ್ಕಳಿಗಾಗಿ ತನ್ನ ಜೀವನವನ್ನೇ ಕರ್ಪೂರದ ಗೊಂಬೆಯಂತೆ ಕರಗಿಸಿದ ಮಹಾ ಸಾಧ್ವಿ. ಆಕೆ ತನ್ನ ಜೀವನದಲ್ಲಿ ಸುಖವನ್ನೇ ಕಾಣದ ನತದೃಷ್ಟೆ. ಆಕೆ ತ್ಯಾಗದ ಪ್ರತಿರೂಪ, ಸಹನೆಯ ಸಂಕೇತ, ಶಾಂತಿಯ ಪ್ರತೀಕ. ತನ್ನ ಜೀವನವನ್ನೇ ತನ್ನವರಿಗಾಗಿ ಗಂಧದ ಕೊರಡಿನಂತೆ ತೇದು ಸವೆದುಹೋದ ಆದರ್ಶ ವನಿತೆ. ಅವಳ ಜೀವನವೇ ಒಂದು ಮಹಾಯಜ್ಞ. ಆ ಯಜ್ಞಕುಂಡದಲ್ಲಿ ಬೆಂದು ಬಸವಳಿದ ಶೀಲವಂತೆಯ ಈ ಕಥೆಯನ್ನು ಓದುಗರಿಗೆ ಇಷ್ಟವಾಗುವಂತೆ ಕಟ್ಟಿಕೊಡಲಾಗಿದೆ.

About the Author

ಡಿ ಎನ್. ಕೃಷ್ಣಮೂರ್ತಿ
(04 June 1963)

ಡಿ. ಎನ್. ಕೃಷ್ಣಮೂರ್ತಿಯವರು ಮೈಸೂರು ತಾಲ್ಲೂಕಿನ ದೊಡ್ಡಮಾರಗೌಡನಹಳ್ಳಿ ಯವರು. ತಂದೆ ಎಸ್. ನಂಜುಂಡಯ್ಯ, ತಾಯಿ ಶಾರದಮ್ಮ. ಸಾಹಿತ್ಯ ವಲಯದಲ್ಲಿ  ಇವರು  ಡಿಎನ್ಕೆ ಎಂದೇ ಪರಿಚಿತರು.  ಕೃತಿಗಳು: ದತ್ತೂರಿಗಿಡ, ಮರೀಚಿಕೆ, ಪರಿವರ್ತನೆ, ಕರ್ಪೂರದ ಗೊಂಬೆ, ಮುಳುಗಿದ ದೋಣಿ,(ಕಿರು ಕಾದಂಬರಿಗಳು), ಜನಮನ (ಪ್ರಬಂಧ ಸಂಕಲನ-ಸಂಪಾದಿತ), ಓಕುಳಿ, ಬೆಳಕು (ಕವನ ಸಂಕಲನ), ಚೈತ್ಯ ಚೈತ್ರ(ಕವನ ಸಂಕಲನ-ಸಂಪಾದಿತ), ರಾಜಯೋಗಿ (ವಚನ ಸಂಕಲನ), ಶಾಂತಿಭೂಮಿ, ತಪಸಹನ, ಸೂರ್ಯಾಸ್ತಮ, ವಸುಂಧರ, ಮಣ್ಣಿನ ಋಣ, ಹೃದಯವಂತ, ಆಕ್ರಂದನ, ಚೈತ್ರಯಾತ್ರೆ, ಗ್ರಾಮಾಂತರ, ಕರ್ಮಭೂಮಿ (ಕಾದಂಬರಿಗಳು), ನೇಸರ (ಕವನ ಸಂಕಲನ), ಕಾವ್ಯ ಕುಸುಮಾಂಜಲಿ-(ಕವನ ಸಂಕಲನ - ಸಂಪಾದಿತ), ಸಂಘರ್ಷಣೆ (ಕಥಾ ಸಂಕಲನ), ಜೀವನದಿ, (ಲೇಖನಗಳು), ಮಹಾಸಾಗರದ ಮುತ್ತುಗಳು (ವ್ಯಕ್ತಿ ಚಿತ್ರಗಳು -ಸಂಪುಟ 1), ಭಾರತದ ಅನರ್ಘ್ಯ ರತ್ನಗಳು- (ವ್ಯಕ್ತಿ ಚಿತ್ರಗಳು - ಸಂಪುಟ 2), ಮಾತೃಭೂಮಿಯ ಮಾಣಿಕ್ಯಗಳು (ವ್ಯಕ್ತಿ ಚಿತ್ರಗಳು - ಸಂಪುಟ 3), ಕನ್ನಡ ಸಾಹಿತ್ಯದ ಸೀಮಾಪುರುಷ (ಮಾಸ್ತಿ ...

READ MORE

Related Books