ಆರದಿರಲಿ ಬೆಳಕು

Author : ವಸುಮತಿ ಉಡುಪ

Pages 200

₹ 100.00




Published by: ವೈಷ್ಣವಿ ಎಂಟರ್ ಪ್ರೈಸೆಸ್
Address: ಬೆಂಗಳೂರು

Synopsys

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಿರಣಕೆರೆಯಲ್ಲಿ ಜನಿಸಿದ ವಸುಮತಿ ಉಡುಪ ಅವರು ಹಲವಾರು ಕಾದಂಬರಿ, ನೀಳ್ಗತೆ,ಕಿರುಕಥೆಗಳನ್ನ ಬರೆದಿದ್ದಾರೆ. ಸುಧಾ ಹಾಗೂ ತರಂಗ ವಾರ ಪತ್ರಿಕೆಗಳಲ್ಲಿ ಇವರ ಕಥೆಗಳು ಪ್ರಕಟಗೊಂಡು ಓದುಗರಿಗೆ ಚಿರಪರಿಚಿತರಾಗಿರುವ ಇವರು ಎಂ ಕೆ ಇಂದಿರಾ, ಅಳಸಿಂಗಾ, ದು.ನಿಂ ಬೆಳಗಲಿ ಸೇರಿ 10ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದಾರೆ. ‘ಆರದಿರಲಿ ಬೆಳಕು’ ಇದು ಇವರ ಕಥೆಗಳ ಸಂಗ್ರಹವಾಗಿದ್ದು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದನ್ನು ಒಂದೆಡೆ ಸಂಗ್ರಹಿಸಿ ಪ್ರಕಟಿಸಿದ್ದಾರೆ. ಒಂದಿಷ್ಟು ಪ್ರೀತಿ…,ಆಟಕ್ಕುಂಟು..ಲೆಕ್ಕಕ್ಕಿಲ್ಲ, ಕತೆಯಾದನು ಹುಡುಗ, ಆರದಿರಲಿ ಬೆಳಕು, ಹೊಸಬಾಳನು ತಾ ಅತಿಥಿ, ದಾಂಪತ್ಯ ಗೀತೆ ಸೇರಿದಂತೆ ಅನೇಕ ಶೀರ್ಷಿಕೆಯ ಕತೆಗಳು ಈ ಕೃತಿಯಲ್ಲಿವೆ.

About the Author

ವಸುಮತಿ ಉಡುಪ
(18 April 1948)

ಲೇಖಕಿ ವಸುಮತಿ ಉಡುಪ ಅವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕಿರಣಕೆರೆಯಲ್ಲಿ 1948 ಏಪ್ರಿಲ್ 18ರಂದು ಜನಿಸಿದರು. ತಾಯಿ ತ್ರಿಪುರಾಂಬ, ತಂದೆ ರಂಗಾಭಟ್ಟರು. ತೀರ್ಥಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಇವರು ಬರೆದ ಕಥೆಗಳು ಕರ್ನಾಟಕದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಲವು ಕಥೆಗಳು ವಿವಿಧ ಭಾಷೆಗೆ ಅನುವಾದಗೊಂಡಿವೆ.  ಪರಿವರ್ತನೆ, ಸಂಬಂಧಗಳು, ಅನವರತ, ಅವ್ಯಕ್ತ ವಸುಮತಿ ಅವರ ಪ್ರಮುಖ ಕಾದಂಬರಿಗಳು. ಬಂದನಾ ಹುಲಿರಾಯನು, ವಿಕಲ್ಪ, ಶೇಷ ಪ್ರಶ್ನೆ ಅವರ ಕತಾ ಸಂಕಲನ. ‘ಸೀತಾಳದಂಡೆ’ ಮತ್ತೊಂದು ಪ್ರಬಂಧ ಸಂಕಲನ. ಅವರ ಹಲವಾರು ಕತೆಗಳು ಹಿಂದಿ, ತೆಲುಗು ಭಾಷೆಗೆ ಅನುವಾದಗೊಂಡಿದೆ. ಅವರ ಸಾಹಿತ್ಯ ಸೇವೆಗೆ ‘ಅಳಸಿಂಗ ಪ್ರಶಸ್ತಿ, ರಾಮಕ್ಕ ಪದ್ಮಕ್ಕ ...

READ MORE

Related Books