ಆ ಹದಿನೆಂಟು ದಿನಗಳು

Author : ಕೆ.ಎಸ್‍. ನಾರಾಯಣಾಚಾರ್ಯ

Pages 544

₹ 700.00

Buy Now


Year of Publication: 2020
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪೀಕರ್ ಬೀದಿ, ಹುಬ್ಬಳ್ಳಿ- 580020
Phone: 0836-2367676

Synopsys

ಮಹಾಭಾರತದಲ್ಲಿ ನಡೆದ 18 ದಿನಗಳ ಯುದ್ಧದ ಅವಧಿಯನ್ನೇ ಮೂಲವಾಗಿರಿಸಿಕೊಂಡು ಬರೆದ ಕಾದಂಬರಿ-ಆ ಹದಿನೆಂಟು ದಿನಗಳು. ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ರಚಿಸಿದ್ದು, ಭಗವದ್ಗೀತೆಯ ಪಠ್ಯ ಬೋಧನೆಯೇ ಕಾದಂಬರಿಯ ಜೀವಾಳವಾಗಿದೆ. ಯುದ್ಧ ಪ್ರಸಂಗಗಳು, ಸಂಬಂಧಿಕರನ್ನು ಕೊಲ್ಲಲ್ಲು ಅರ್ಜುನನ ನಿರಾಕರಣೆ, ಇದಕ್ಕೆ ವಿರುದ್ಧವಾಗಿ ಕೃಷ್ಣನ ಸಮಜಾಯಿಷಿ, ಯುದ್ಧದಲ್ಲಿ ಅನಿವಾರ್ಯವಾಗಿ ಬಳಸಲೇಬೇಕಾದ ರಕ್ಷಣಾತ್ಮಕ ತಂತ್ರಗಳು- ಪ್ರತಿತಂತ್ರಗಳು, ಇಲ್ಲಿ ನೀತಿ-ಅನೀತಿಯ ಪ್ರಶ್ನೆಯೇ ಇಲ್ಲ. ಏಕೆಂದರೆ, ಅದು ರಣರಂಗ. ಇಲ್ಲಿ ಎಲ್ಲವೂ ಧರ್ಮವೇ! ಸ್ವಲ್ಪ ಯಾಮಾರಿದರೂ ಮೃತ್ಯು ಗೆಲ್ಲುತ್ತದೆ. ಇಂತಹ ಭೀಕರ ಹಾಗೂ ವಾಸ್ತವದ ನಿತ್ಯ ಸತ್ಯಗಳನ್ನು ಬೋಧಿಸುವ ಮಹಾಭಾರತದ ಯುದ್ಧವು ನೀತಿ ಹಾಗೂ ಬೋಧಪ್ರಧಾನವಾಗಿದೆ. ಎಲ್ಲರಿಗೂ ತಿಳಿದಿರುವ ಮಹಾಭಾರತದ ಯುದ್ಧವನ್ನು ಮತ್ತೇ ಮತ್ತೆ ಕುತೂಹಲದೊಂದಿಗೆ ಓದಿಸಿಕೊಂಡು ಹೋಗುವುದೇ ಈ ಕಾದಂಬರಿಯ ಶೈಲಿಯ ಆಕರ್ಷಣೆ. ಮೊದಲ ಮುದ್ರಣ 2012

About the Author

ಕೆ.ಎಸ್‍. ನಾರಾಯಣಾಚಾರ್ಯ
(31 October 1933 - 26 November 2021)

ಹಿರಿಯ ವಿದ್ವಾಂಸ ಹಾಗೂ ಪ್ರವಚನಕಾರರೂ ಆಗಿರುವ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಮೂಲತಃ ಬೆಂಗಳೂರು ಜಿಲ್ಲೆಯ  (ಈಗಿನ ಕನಕಪುರ) ಕನಕನಹಳ್ಳಿಯವರು. ತಂದೆ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್. ತಾಯಿ ರಂಗನಾಯಕಮ್ಮ. ವೈದಿಕ ವಿದ್ವಾಂಸರ ಕುಟುಂಬ ಇವರದು.ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್.ಸಿ. ಪದವೀಧರರು. ನಂತರ ಬಿ.ಎ. ಆನರ್ಸ್‌ ಮಾಡಿ, ಆಧುನಿಕ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್‌ ಅವರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೇದಗಳು, ರಾಮಾಯಣ, ...

READ MORE

Related Books