
ಎಂ. ಗೋಪಾಲಕೃಷ್ಣ ಅಡಿಗರು ಬರೆದ ಕಾದಂಬರಿ-ಅನಾಥೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಲ ತೀರ ಪ್ರದೇಶಕ್ಕೆ ಸಂಬಂಧಿಸಿದ ಕಥೆ ಇದು. ಸಂಸಾರ ಸುಖದಿಂದ ವಂಚಿತಳಾದ ಒಂದು ಹೆಣ್ಣಿನ ಕಥೆ ಇದು. ಆ ಹೆಣ್ಣಿನ ಮನಸ್ಸನ್ನು ಸೂಕ್ಷ್ಮವಾಗಿ ವಿಶ್ಲೇಷಣೆಗೆ ಗುರಿಪಡಿಸುವ ಘಟನೆ-ಸನ್ನಿವೇಶಗಳು ಅತ್ಯಂತ ಸೂಕ್ಷ್ಮವಾಗಿ ಓದುಗರನ್ನು ತಟ್ಟುತ್ತವೆ. ಇಡೀ ಕಥೆಯು ಭಾವನಾತ್ಮಕವಾಗಿ ಓದುಗರನ್ನು ಸೆಳೆಯುತ್ತದೆ.

ಕನ್ನಡದಲ್ಲಿ ನವ್ಯಕಾವ್ಯಕ್ಕೆ ನಾಂದಿ ಹಾಡಿದ ಮೊಗೇರಿ ಗೋಪಾಲಕೃಷ್ಣ ಅಡಿಗ ಅವರನ್ನು ‘ಒಂದು ಜನಾಂಗದ ಕಣ್ಣು ತೆರೆಸಿದ ಕವಿ’ ಎಂದು ಗುರುತಿಸಲಾಗುತ್ತಿತ್ತು. ಅಡಿಗರು 1918ರ ಫೆಬ್ರುವರಿ 18ರಂದು ಜನಿಸಿದರು. ತಂದೆ ರಾಮಪ್ಪ ಮತ್ತು ತಾಯಿ ಗೌರಮ್ಮ. ಬೈಂದೂರಿನಲ್ಲಿ ಶಾಲಾ ಶಿಕ್ಷಣ, ಮೈಸೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಆಯಿತು. ಬಿ.ಎ. ಆನರ್ಸ್ ಪದವಿ (1942) ಗಳಿಸಿದ ನಂತರ ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ಪ್ರೌಢಶಾಲೆಗಳಲ್ಲಿ ಅಧ್ಯಾಪಕರಾಗಿ ಕೆಲಸಮಾಡಿದ್ದರು. ಆಮೇಲೆ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದಿ ಎಂ.ಎ. ಪದವಿ (1947) ಗಳಿಸಿದರು. ಮೈಸೂರಿನ ಶಾರದಾವಿಲಾಸ್ ಕಾಲೇಜಿನಲ್ಲಿ ಉಪನ್ಯಾಸಕ (1948-52), ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ (1952-54) ...
READ MORE

ಅನಾಥೆ ಕೃತಿಯ ವಿಮರ್ಶೆ
ನಮ್ಮ ದೇಶದಲ್ಲಿನ ಬಡವರ - ಅನಾಥರ - ನಿರ್ಗತಿಕರ ಬವಣೆ ಎಂದಿಗೂ ನೀಗುವಂಥದಲ್ಲವೇನೋ. ಎಲರೂ ನೆಮ್ಮದಿಯಾಗಿದ್ದರೆ ಇಂಥ ಕತೆಗಳೇಕೆ ಸೃಷ್ಟಿಯಾಗುತ್ತವೆ? ಇದು ಹಸಿ ಸತ್ಯ ಎಷ್ಟು ದುಡಿದರೂ ನೀಗದ ಬಡತನ, ಎಂದಿಗೂ ನನಸಾಗದ ಕನಸುಗಳು, ಇಷ್ಟವಿಲ್ಲದಿದ್ದರೂ ಮಾಡಲೇ ಬೇಕಾದಂಥ ಕೆಲಸಗಳ ಒತ್ತಡ, ವಿಶ್ರಾಂತಿಯಿಲ್ಲದ ಬದುಕು ಇವು ಇಂದಿನ ಗರಿ ಡಾಲಾಗಿ ಗೋಚರಿಸುವ ಚಿತ್ರಗಳಾದರೆ ಇನ್ನೊಂದು ದಿಕ್ಕಿನತ್ತ ಕಣ್ಣು ಹಾಯಿಸಿದರೆ ಇದಕ್ಕೆ ತದ್ವಿರುದ್ಧ ಚಿತ್ರಣ. ಯಾಕೆ ಹೀಗೆಂದು ಯೋಚಿಸುತ್ತಲೇ ಏನೂ ಮಾಡಲಾಗದ ಬದುಕನ್ನು ಮುಗಿಸುವ ದುರಂತ ಸನ್ನಿವೇಶ ಇಲ್ಲಿನ ಕಥಾಪಾತ್ರಗಳದ್ದು. ಜಾತಿ - ಧರ್ಮಗಳ ಅಡ್ಡಗೋಡೆಗಳು ಎಲ್ಲರ ನೆಮ್ಮದಿ ಕೆಡಿಸುವ ಅನಿಷ್ಟಗಳು, ಇದ್ದಲ್ಲೇ ಗಿರಕಿಹೊಡೆಯುವ ಮತ್ತು ಹೆಜ್ಜೆ ಮುಂದಿಡಲಾಗದ ಅಸಹಾಯ ಸಂದರ್ಭಗಳು ಎಲ್ಲ ಕಡೆ ಗೋಚರಿಸುತ್ತವೆ. ಮಹಿಳಾ ಸಂವೇದನೆಯು ಈ ಕೃತಿಯಲ್ಲಿ ಬಹಳಷ್ಟು ಕಡೆ ಎದ್ದು ಕಾಣುವಂತೆ ನಮ್ಮ ಅರಿವಿಗೆ ಬರುತ್ತದೆ.
( ಕೃಪೆ; ಹೊಸತು)
