ಕಾಂಚನ ಕಸ್ತೂರಿ

Author : ಕೃಷ್ಣಮೂರ್ತಿ ಪುರಾಣಿಕ

Pages 126

₹ 65.00




Year of Publication: 1966
Published by: ಸಾಹಿತ್ಯ ನಂದನ
Address: 9, 4ನೇ ಇ ಬ್ಲಾಕ್, 10ಎ ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು - 10

Synopsys

‘ಕಾಂಚನ ಕಸ್ತೂರಿ’ ಕೃಷ್ಣಮೂರ್ತಿ ಪುರಾಣಿಕ ಅವರ ಸಾಮಾಜಿಕ ಕಾದಂಬರಿ. ಈ ಕೃತಿಗೆ ಪರಮೇಶ್ವರ ಕೃ.ಪುರಾಣಿಕ ಅವರ ಅರಿಕೆಯಿದೆ. ಕಳೆದ ಶತಮಾನದ ಕನ್ನಡ ಬರಹಗಾರರಲ್ಲಿ ಕೆಲವು ಬರಹಗಾರರ ಹೆಸರು ಕನ್ನಡ ಸಾಹಿತ್ಯ ಇತಿಹಾಸದಲ್ಲಿ ಅಚ್ಚಳಿಯದೆ ಬೆಳಗುತ್ತಿವೆ. ಅಂಥ ಬರಹಗಾರರಲ್ಲಿ ಒಂದು ಹೆಸರು ಕೃಷ್ಣಮೂರ್ತಿ ಪುರಾಣಿಕರದು. ಕನ್ನಡ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಕೈಯಾಡಿಸಿ ತಮ್ಮದೆಯಾದ ಛಾಪು ಮೂಡಿಸಿದ್ದಾರೆ. ಮೊದಲು ಕವಿಗಳಾಗಿ ಆಮೇಲೆ ಗದ್ಯದಲ್ಲಿ ಪ್ರಭುತ್ವ ಸಾಧಿಸಿದ್ದಾರೆ. ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಇವರು ಬರೆದಿದ್ದರೀ,ಇವರ ಹೆಚ್ಚಿನ ಬರವಣಿಗೆ ಕಾದಂಬರಿ ಸಾಹಿತ್ಯ ಮಹಿಳೆಯರ ಅನೇಕ ಮುಖಗಳನ್ನು ಚಿತ್ರಿಸಿ ಅವರ ಸುಖ-ದುಃಖ, ಅಂತಃಕರಣ, ಸಿಟ್ಟು-ಸೇಡು ಮುಂತಾದವುಗಳನ್ನೆಲ್ಲಾ ಹೃದಯಂಗಮವಾಗಿ ಚಿತ್ರಿಸಿ ಕನ್ನಡ ಓದುಗರಿಗೆ ಅರ್ಪಿಸಿದ್ದಾರೆ.

ಹೆಣ್ಣು ಮಕ್ಕಳಲ್ಲಿ ಓದಿನ ಅಭಿರುಚಿಯನ್ನು ಬೆಳೆಸಿದ ಸಾಹಿತಿಗಳಲ್ಲಿ ಇವರು ಅಗ್ರಗಣ್ಯರು. ಪ್ರಸ್ತುತ ಕಾಂಚನ ಕಸ್ತೂರಿ ಕೃತಿಲ್ಲಿಯೂ ಸಂಸಾರ, ಸಮಾಜ ಮತ್ತು ರಾಷ್ಟ್ರ ಸುಸ್ಥಿತಿಯಲ್ಲಿ ಇರಬೇಕಾದರೆ ಹೆಣ್ಣಿನ ಸ್ಥಾನಮಾನ ಮನೆಯಲ್ಲಿ, ಸಮಾಜದಲ್ಲಿ ಹಾಗೂ ದೇಶದ ಆಗುಹೋಗುಗಳಲ್ಲಿ ಗೌರವಯುತವಾಗಿದ್ದರೆ ಮಾತ್ರ ಸಾಧ್ಯವೆಂದು, ಇದು ನಮ್ಮ ದೇಶದ ಸಂಸ್ಕೃತಿಯೂ ಹೌದೆಂಬುದನ್ನು ಸೃಜನಾತ್ಮಕವಾಗಿ ತಿಳಿಸಿದ್ದಾರೆ.

About the Author

ಕೃಷ್ಣಮೂರ್ತಿ ಪುರಾಣಿಕ
(05 September 1911 - 09 November 1985)

ಅಗ್ರಶ್ರೇಣಿಯ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರು ಹುಟ್ಟಿದ್ದು ಬಾಗಲಕೋಟ ಜಿಲ್ಲೆಯ ಬೀಳಗಿಯಲ್ಲಿ.1911 ಸೆಪ್ಟಂಬರ್ 5ರಂದು. 1933ರಿಂದ ಸಾಹಿತ್ಯ ಕೃಷಿ ಆರಂಭಿಸಿದ ಪುರಾಣಿಕರು 1946ರಲ್ಲಿ 'ರಾಮೂನ ಕಥೆಗಳು' ಪ್ರಕಟಿಸಿದರು. ಅವರ 'ಧರ್ಮದೇವತೆ' ಕಾದಂಬರಿ 'ಕರುಣೆಯೇ ಕುಟುಂಬದ ಕಣ್ಣು' ಎಂಬ ಚಲನಚಿತ್ರವಾಗಿದೆ. ಪುರಾಣಿಕರ 11 ಕೃತಿಗಳು  ಬೆಳ್ಳೆತೆರೆ ಕಂಡಿವೆ.  'ಸನಾದಿ ಅಪ್ಪಣ್ಣ' ಕನ್ನಡಿಗರೆಂದೂ ಮರೆಯದ ಕೃತಿ. ಮೊದಲ ಪ್ರಕಟಿತ ಗದ್ಯ ಕೃತಿ, 'ರಾಮೂನ ಕಥೆಗಳು'. ಮೊದಲ ಕವನ ಸಂಕಲನ 'ಬಾಳ ಕನಸು'. ಮೊದಲ ಕಾದಂಬರಿ 'ಮುಗಿಲಮಲ್ಲಿಗೆ'. 'ಮೌನಗೌರಿ', 'ಮುತ್ತೈದೆ', `ಮನೆ ತುಂಬಿದ ಹೆಣ್ಣು', 'ಮಣ್ಣಿನ ಮಗಳು', 'ಕುಲವಧು', 'ಮನಸೋತ ಮನದನ್ನೆ', 'ಧರ್ಮ ...

READ MORE

Related Books