ಸುಬ್ರಹ್ಮಣ್ಯಪುರ

Author : ಕೌಶಿಕ್ ಕೂಡುರಸ್ತೆ

Pages 136

₹ 130.00




Year of Publication: 2022
Published by: ಸ್ನೇಹ ಬುಕ್‌ ಹೌಸ್.
Address: 165, 10ನೇ ಮುಖ್ಯ ರಸ್ತೆ, ಶ್ರೀನಗರ ಬೆಂಗಳೂರು -560050.
Phone: 9845031335

Synopsys

'ಸುಬ್ರಹ್ಮಣ್ಯಪುರ' ಪತ್ತೇದಾರಿ ಕಾದಂಬರಿಯನ್ನು ಲೇಖಕ ಕೌಶಿಕ್‌ ಕೂಡುರಸ್ತೆ ರಚಿಸಿದ್ದಾರೆ. ಈ ಪುಸ್ತಕದ ಬೆನ್ನುಡಿಯಲ್ಲಿ ‘ಸಾವಿರಾರು ಸರ್ಪಗಳು ವಾಸಿಸುವ ಸುಬ್ರಹ್ಮಣ್ಯಪುರದಲ್ಲಿ ಮೊಟ್ಟ ಮೊದಲ ಬಾರಿಗೆ ಗಂಗಮ್ಮ ಎಂಬ ಹೆಂಗಸೊಬ್ಬಳು ಹಾವು ಕಚ್ಚಿ ಸತ್ತ ಸುದ್ದಿಯಾಗುತ್ತದೆ. ಅದರ ಹಿಂದಿನ ರಹಸ್ಯವೇನು?, ಸುಬ್ರಹ್ಮಣ್ಯಪುರದಲ್ಲಿ ಭಿಕ್ಷೆ ಬೇಡಿ ಬದುಕುತ್ತಿದ್ದ ಉಚ್ಚೆಮಲ್ಲಿ ರಾತ್ರೋರಾತ್ರಿ ಕಾಣೆಯಾಗಿದ್ದೇಕೆ?, ಗೌಡರ ತೋಟದ ಮನೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಹೆಣ ಯಾವುದು?, ಗರುಡ ದೇವಾಲಯದ ಗರ್ಭಗುಡಿಯಲ್ಲಿರುವ ನಿಧಿಗೂ ಸುಬ್ರಹ್ಮಣ್ಯಪುರದಲ್ಲಿ ನಡೆಯುತ್ತಿರುವ ಘಟನೆಗಳಿಗೂ ಏನಾದರೂ ಸಂಬಂಧವಿದೆಯೇ?, ಸುಬ್ರಹ್ಮಣ್ಯಪುರದಲ್ಲಿ ನಾಗರಪಂಚಮಿಯಂದು ನಡೆದ ರಹಸ್ಯ ರಾತ್ರಿಯ ಕಥೆ!. ಎಂದು ಕಾದಂಬರಿಯ ಸ್ವರೂಪವನ್ನು ವಿವರಿಸಲಾಗಿದೆ.

About the Author

ಕೌಶಿಕ್ ಕೂಡುರಸ್ತೆ

ವೃತ್ತಿಯಿಂದ ಸಹಾಯಕ ನಿರ್ದೇಶಕರಾಗಿರುವ ಕೌಶಿಕ್ ಕೂಡುರಸ್ತೆ ಅವರು ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕೂಡುರಸ್ತೆ ಗ್ರಾಮದವರು. ತಂದೆ-ಹೆಚ್.ಎಸ್. ತಮ್ಮೇಗೌಡ, ತಾಯಿ ಭಾಗ್ಯ ಆಚಾರ್ಯ ಇನ್ಸ್ಟಿಟ್ಯೂಟಿನಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಹೃದಯದ ಮಾತು’ ಇವರ ಮೊದಲ ಪ್ರಕಟಿತ ಕವನ ಸಂಕಲನ. ‘ಇಂತಿ ನಿಮ್ಮ ಆತ್ಮೀಯ’ ಎಂಬ ಕಾದಂಬರಿಯು ಇವರ ಎರಡನೆಯ ಪ್ರಕಟಿತ ಕೃತಿಯಾಗಿದ್ದು ಎರಡನೇ ಮುದ್ರಣವನ್ನು ಕಂಡಿದೆ. ಈ ಕಾದಂಬರಿಯು ‘ಬಹ್ರೇನ್ ಕನ್ನಡ ಡಿಂಡಿಮ’ ಸಮಾರಂಭದಲ್ಲಿ ಪ್ರದರ್ಶನಗೊಂಡಿದೆ. ಗ್ರಿಫಿನ್ಸ್ ಗುರುಕುಲ ಎಂಬ ಸಂಸ್ಥೆಗೆ ಬಿಸಿನೆಸ್ ಕುರಿತಾದ ‘ಬಿಸಿನೆಸ್ ಮತ್ತು ...

READ MORE

Related Books