ಕಾಡಿನ ನಾಡಿ ಮಿಡಿದವರು

Author : ಕ್ಷೀರಸಾಗರ

₹ 100.00




Year of Publication: 2018
Published by: ಸಮಗ್ರ ಗ್ರಾಮೀಣ ಆಶ್ರಮ
Address: ಶಿರ್ವಾ

Synopsys

ಲೇಖಕ ಕ್ಷೀರ ಸಾಗರ ಅವರ ‘ಕಾಡಿನ ನಾಡಿ ಮಿಡಿದವರು’ ಕೃತಿಯು ಕಾದಂಬರಿಯಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಸೇತುಮಾಧವ ಜೋಡಿದಾರ್ ಅವರು, ಮೂರು ದಶಕಗಳಿಂದಲೂ ಅಧಿಕ ಸಮಯದಿಂದ ಬುಡಕಟ್ಟು ಸಮಾಜದೊಂದಿಗೆ ಅತ್ಯಂತ ನಿಕಟ ಸಂಪರ್ಕ ಹೊಂದಿರುವ ಕ್ಷೀರಸಾಗರ ಅವರ ಮೂಸೆಯಲ್ಲಿ ಮೂರನೇ ಕೃತಿಯು ಅನಾವರಣಗೊಳ್ಳುತ್ತಿರುವುದು ಸ್ವಾಗತಾರ್ಹ. ಅರಣ್ಯದೊಂದಿಗಿನ ಅವಿನಾಭವ ಸಂಬಂಧವಿರುವ ಗಿರಿಜನರ ಕರುಳ ಕುಡಿಗಳ ಸೂಕ್ಷ್ಮಾತಿಸೂಕ್ಷ್ಮ ನಾಡಿಮಿಡಿತಗಳನ್ನು ಬಲ್ಲವರು. ಅವರ ಜ್ಞಾನವನ್ನು ಇಲ್ಲಿ ಪ್ರಕಾಶಿಸಲಾಗಿದೆ. ಕ್ಷೀರಸಾಗರರ ಬರವಣಿಗೆ ಎಂದಿನಂತೆ ಸ್ಫಟಿಕದ ಹಾಗೆ, ನೇರ, ಸರಳ ಮತ್ತು ಪದಗಳ ಭಾರವಿಲ್ಲದೆ ನಾಟ್ಯ ಮಾಡುವ ಮಯೂರಿಯಂತಿದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಕ್ಷೀರಸಾಗರ

ಕ್ಷೀರಸಾಗರ ಅವರು ಸಾವಯವ ಕೃಷಿಕರಾಗಿದ್ದಾರೆ. ಎಂ.ಎ ತತ್ವಶಾಸ್ತ್ರವನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಪೂರೈಸಿರುತ್ತಾರೆ. ಸೀಯಡ್ಸ್ ಬೆಂಗಳೂರು ಪೀಪಲ್ ಟ್ರೀ ಹಾಗೂ ಹೆಗ್ಗಡದೇವನಕೋಟೆಯ ಫೆಡಿನಾ ವಿಕಾಸ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸಂಪೂರ್ಣ ಸಾಕ್ಷರತಾ ಆಂದೋಲನದ ಅಡಿಯಲ್ಲಿ ಮೈಸೂರು ಜಿಲ್ಲೆಯ ಸಾಕ್ಷರವಾಹಿನಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮೈಸೂರು ಜಿಲ್ಲೆಯ ಲಕ್ಷಾಂತರ ಜನರನ್ನು ಸಾಕ್ಷರರನ್ನಾಗಿ ರೂಪಿಸಿದ್ದಾರೆ. ಕಳೆದ ಮೂರು ದಶಕಗಳಿಂದ ಹೆಗ್ಗಡದೇವನಕೋಟೆ ತಾಲೂಕಿನ ಗಿರಿಜನರೊಂದಿಗೆ ಕೃಷಿ ಕೆಲಸ ಮಾಡುತ್ತಿದ್ದಾರೆ.   ಕೃತಿಗಳು:   ಜೇನು ಆಕಾಶದ ಅರಮನೆಯೋ(ಕಾದಂಬರಿ), ದಿಕ್ಕು ತಪ್ಪಿದ  ಕರ್ನಾಟಕ ಭೂ ಸುಧಾರಣೆ((ಸಂಶೋಧನೆ), ಕಾಡಿನ ಮಕ್ಕಳ ಒಡನಾಟದಲ್ಲಿ(ಅನುಭವ ಕಥನ), ಕಾಡಿನ ನಾಡಿ ಮಿಡಿದವರು(ಲೇಖನ ಸಂಗ್ರಹ),  ...

READ MORE

Related Books