ಜಯ, ಗುರುದೇವ

Author : ಸಾಲಿ ರಾಮಚಂದ್ರರಾಯ

Pages 107

₹ 1.00




Year of Publication: 1952
Published by: ಉಡುಪಿ ಭಿ. ಬೀಡಿ
Address: ಸಂಸ್ಕೃತಿ ಪ್ರಕಾಶನ, ಶ್ರೀ ನಿಕೇತನ, ಧಾರವಾಡ

Synopsys

ಮಾನವನು ಉತ್ತಮವಾಗಿ ಬದುಕಬೇಕೆಂಬ ಆಶಯದ ಕಾದಂಬರಿ-ಜಯ, ಗುರುದೇವ. ಸಾಲಿ ರಾಮಚಂದ್ರರಾಯರು ಬರೆದಿದ್ದು, ಜೀವನ ವೃಕ್ಷದ ಪಕ್ಷ ಫಲವಾಗಿ ಬದುಕಬೇಕು ಎಂಬ ಸಂದೇಶ ಇಲ್ಲಿದೆ. ಕಾಲದ ಮಹಿಮೆಯನ್ನು ಅರಿತು ಬಾಳ್ವೆ ಸಾಗಿಸಬೇಕು. ತನ್ನದೇ ಅಹಂ ಸಾಧನೆಯಲ್ಲಿ ವಿನಾಶವಿದೆ. ಸಂಸಾರದಲ್ಲಿ ಪ್ರೇಮಪೂರ್ಣವಾದ ತ್ಯಾಗಮಯ ಜೀವನ ಉದಾತ್ತವಾದುದು ಎಂಬ ಎಚ್ಚರಿಕೆಯೂ ಇದೆ. ಇಲ್ಲಿಯ ಭಾಷೆ ಲಾಲಿತ್ಯವು ಗಮನ ಸೆಳೆಯುತ್ತದೆ. ಮೃದು ಪದಗಳಿಂದ ಮುದ ನೀಡುತ್ತದೆ. ಜೀವನದ ಸುಂದರ ರಹಸ್ಯವನ್ನು ಮತಿಗೆಟ್ಟ ಹಾಗೂ ಗತಿಗೆಟ್ಟ ಈ ಜಗತ್ತಿಗೆ ತಿಳಿಸುವುದು ಕಾದಂಬರಿಯ ಉದ್ದೇಶವೂ ಆಗಿದೆ. ಅಧಿಕಾರದಲ್ಲಿದ್ದವರು ಮಾತ್ರ ಸಂಚಿನಲ್ಲಿ ಯಶಸ್ವಿಯಾಗುತ್ತಾರೆ ಎಂಬುದು ತಪ್ಪು, ಬಡತನದಲ್ಲಿದ್ದವರೂ ತಾವು ಅಂದುಕೊಂಡದ್ದು ಸಾಧಿಸುತ್ತಾರೆ. ಆದ್ದರಿಂದ, ಎಚ್ಚರಿಕೆ ಹಾಗೂ ಯಾರ ಮನಸ್ಸನ್ನೂ ನೋಯಿಸದ ಜೀವನ ನಮ್ಮದಾಗಬೇಕು ಎಂದು ಸಲಹೆ ರೂಪದಲ್ಲಿ ಕಾದಂಬರಿ ಸಾಗುತ್ತದೆ.

About the Author

ಸಾಲಿ ರಾಮಚಂದ್ರರಾಯ
(10 October 1888 - 31 October 1978)

’ಕನ್ನಡ ನೆಲದ ಪುಲ್ಲೆನಗೆ ಪಾವನ ತುಳಸಿ, ಕನ್ನಡದ ಕಲ್ಲೆನಗೆ ಶಾಲಗ್ರಾಮ ಶಿಲೆ’ ಎಂದು ಹಾಡಿದ ಕವಿ ಸಾಲಿ ರಾಮಚಂದ್ರರಾಯರು ಕನ್ನಡದ ನವೋದಯದ ಪ್ರಮುಖ ಕವಿಗಳಲ್ಲಿ ಒಬ್ಬರು. ಕನ್ನಡದ ಮೊದಲ ವಿಲಾಪಗೀತೆ ರಚಿಸಿದ ಹಿರಿಮೆ ಅವರದು. ನವೋದಯದ ಆರಂಭದ ದಿನಗಳಲ್ಲಿಯೇ ರಾಮಾಯಣ ಮಹಾಕಾವ್ಯ ರಚನೆಗೆ ಮುಂದಾಗಿದ್ದ ಸಾಲಿಯವರು ಎರಡು ಕಾಂಡಗಳನ್ನು ಪ್ರಕಟಿಸಿದ್ದರು. ಅದಕ್ಕೆ ಬಂದ ’ಸಾಲಿ ರಾಮಾಯಣ’ ಎಂಬ ಟೀಕೆಯಿಂದ ಬೇಸತ್ತು ನಂತರದ ಸಂಪುಟಗಳನ್ನು ಪ್ರಕಟಿಸಲು ಹಿಂದೇಟು ಹಾಕಿದರು. ನಂತರದ ದಿನಗಳಲ್ಲಿ ಅಪ್ರಕಟಿತ ರಾಮಾಯಣದ ಹಸ್ತಪ್ರತಿಗಳು ಗೆದ್ದಲುಗಳಿಗೆ ಆಹಾರವಾದಾಗ ತೀವ್ರ ನೋವು ಅನುಭವಿಸಿದರು. ಅವರ ಸಮಗ್ರ ಕವಿತೆಗಳನ್ನು ಡಾ. ...

READ MORE

Related Books