ಬಂಗಾರದ ಜಿಂಕೆಯ ಹಿಂದೆ

Author : ಬಸವರಾಜ ಕಟ್ಟೀಮನಿ

Pages 296

₹ 1.00




Year of Publication: 1954
Published by: ಶಾರದಾ ಪ್ರಕಟನಾಲಯ
Address: ಅರಳೇಪೇಟೆ, ಬೆಂಗಳೂರು-2

Synopsys

ಬಸವರಾಜ ಕಟ್ಟೀಮನಿ ಅವರು ಬರೆದ ‘ಬಂಗಾರದ ಜಿಂಕೆಯ ಹಿಂದೆ’ ಕೃತಿಯು ನಾನೂ ಪೊಲೀಸನಾಗಿದ್ದೆ ಭಾಗ-2ರ ಮುಂದುವರಿಕೆಯಾಗಿದೆ. ಕಾಲವಾಡದಲ್ಲಿ, ತೊಂಡೇಬಾವಿಯಲ್ಲಿ, ಹುಂಬರೂರಿನಲ್ಲಿ ಹಾಗೂ ಉಗ್ರಪುರದಿಂದ ಮನೆಗೆ ಹೀಗೆ ನಾಲ್ಕು ಪ್ರಮುಖ ಭಾಗಗಳನ್ನಾಗಿ ಮಾಡಿ ಕಾದಂಬರಿಯನ್ನು ಹೆಣೆಯಲಾಗಿದೆ. ವಿಶೇಷತೆ ಎಂದರೆ ಸ್ವತಃ ಲೇಖಕರೇ ಇಲ್ಲಿ ಕಥಾನಾಯಕರು. ತಮ್ಮ ವೃತ್ತಿ ಜೀವನದ ಅನುಭವಗಳು ಕಾದಂಬರಿಯ ವಸ್ತುಗಳಾಗಿವೆ. 

About the Author

ಬಸವರಾಜ ಕಟ್ಟೀಮನಿ
(05 October 1919 - 23 October 1989)

ಬಸವರಾಜ ಕಟ್ಟೀಮನಿಯವರು ಬದುಕು ಹಾಗೂ ಸಾಹಿತ್ಯದಲ್ಲೂ  ಕ್ರಾಂತಿಕಾರಿಯಾಗಿದ್ದರು. 1919 ಅಕ್ಟೋಬರ್‌ 5 ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮಲಾಮರಡಿ ಗ್ರಾಮದಲ್ಲಿ ಜನಿಸಿದರು. ಅವರ ಮೊದಲ ಕಥೆ ’ಕಾರವಾನ್’, ಕಟ್ಟೀಮನಿಯವರ ಮೊದಲೆರಡು ಕಾದಂಬರಿಗಳು ಸ್ವಾತಂತ್ರ್ಯ ಹೋರಾಟವನ್ನು ಕುರಿತಾಗಿ ಬರೆದಂಥವು. ಆ ಬಳಿಕ ಅವರು ಸಮಾಜದಲ್ಲಿ ನಡೆಯುತ್ತಿರುವ ಕಾರ್ಮಿಕ ಶೋಷಣೆ, ಸ್ತ್ರೀಶೋಷಣೆ, ಬಡವರ ಶೋಷಣೆ, ದಲಿತರ ಶೋಷಣೆ—ಇವೆಲ್ಲವಗಳ ವಿರುದ್ಧ ಕಟುವಾಗಿ ಬರೆದಿದ್ದಾರೆ.  ಕಥಾ ಸಂಕಲನ - ಸೆರೆಯಿಂದ ಹೊರಗೆ, ಆಗಸ್ಟ್ ಒಂಬತ್ತು, ಗುಲಾಬಿ ಹೂ, ಜೋಳದ ಬೆಳೆಯ ನಡುವೆ, ಜೀವನ ಕಲೆ, ಸುಂಟರಗಾಳಿ, ಸೈನಿಕನ ಹೆಂಡತಿ, ಹುಲಿಯಣ್ಣನ ಮಗಳು, ಗರಡಿಯಾಳು. ನಾಟಕ ...

READ MORE

Related Books