ಚತುರ ಚಾಣಕ್ಯ

Author : ಸು. ರುದ್ರಮೂರ್ತಿ ಶಾಸ್ತ್ರಿ

Pages 166

₹ 110.00




Year of Publication: 2016
Published by: ವಸಂತ ಪ್ರಕಾಶನ
Address: ನಂ 360, 10ನೇ ಬಿ- ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಜಯನಗರ, ಬೆಂಗಳೂರು-11

Synopsys

‘ಚತುರ ಚಾಣಕ್ಯ’ ಲೇಖಕ ರುದ್ರಮೂರ್ತಿ ಶಾಸ್ತ್ರಿ ಅವರ ಕಾದಂಬರಿ. ಬುದ್ಧಿವಂತಿಕೆಗೆ ಹೆಸರಾದ ಚಾಣಕ್ಯ ಹಿಡಿದ ಕೆಲಸವನ್ನು ಬಿಡದೆ ಸಾಧಿಸುವ ಕರ್ತವ್ಯ ನಿಷ್ಠೆಗೂ ಹೆಸರಾದವರು. ಸಾರ್ಥಕ ಬದುಕಿಗಾಗಿ ಅವರು ನೀಡಿರುವ ನೀತಿಗಳು ಲೋಕ ಪ್ರಸಿದ್ಧವಾದಂತೆ ಉತ್ತಮ ಆಡಳಿತ ನೀಡುವಲ್ಲಿ ಪಾಲಿಸಬೇಕಾದ ಅಂಶಗಳ ಕುರಿತೂ ಹಲವು ಮಹತ್ವದ ಮಾರ್ಗಗಳನ್ನು ತೋರಿದ್ದಾರೆ. ಇಂತಹ ದಿಟ್ಟ ಬದುಕನ್ನು ಬದುಕಿದ ಚಾಣಕ್ಯನ ಕತೆ 19ನೇ ಶತಮಾನದ ಆರಂಭದಲ್ಲಿ ರಚಿತವಾದ ಕೆಂಪು ನಾರಾಯಣ ಅವರ ಮುದ್ರಾ ಮಂಜೂಷದಲ್ಲಿ ಒಂದು ಧೀರ್ಘ ಕಾದಂಬರಿಯಾಗಿ ಚಿತ್ರಿತವಾಗಿದೆ. ಆ ಕತೆಯನ್ನೇ ಆಧರಿಸಿ ಲೇಖಕ ಸು. ರುದ್ರಮೂರ್ತಿಶಾಸ್ತ್ರಿ ಅವರು ಅದರಲ್ಲಿ ಅಂತರ್ಗತವಾಗಿರುವ ರೋಚಕತೆಗೆ ಸಾಹಿತ್ಯಿಕ ಅಂಶಗಳನ್ನು ಅಳವಡಿಸಿ ಕಾದಂಬರಿಯಾಗಿ ರಚಿಸಿದ್ದಾರೆ.

About the Author

ಸು. ರುದ್ರಮೂರ್ತಿ ಶಾಸ್ತ್ರಿ
(11 November 1948)

ಲೇಖಕ ರುದ್ರಮೂರ್ತಿ ಶಾಸ್ತ್ರಿ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುಗ್ಗನಹಳ್ಳಿಯವರು. ತಂದೆ-ಎಸ್.ಎನ್. ಶಿವರುದ್ರಯ್ಯ, ತಾಯಿ- ಸಿದ್ಧಗಂಗಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟೂರಿನಲ್ಲಿ , ಪ್ರೌಢಶಾಲೆಯನ್ನು ರಾಮನಗರದಲ್ಲಿ ಪೂರ್ಣಗೊಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವೀಧರರು. ಬೆಂಗಳೂರಿನ ರೇಣುಕಾಚಾರ್ಯ ಸಂಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ನಂತರ ವೃತ್ತಿಗೆ ರಾಜೀನಾಮೆ ನೀಡಿ ಸಾಹಿತ್ಯ ಸೇವೆಯಲ್ಲಿ ತೋಡಗಿ, ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಭಾವ ಲಹರಿ’, ಪರಿ, ಅಂತರಂಗ-ಬಹಿರಂಗ, ಚಿತ್ರಕಲ್ಪನೆ, ರಾಗ, ನಾಡಗೀತೆಗಳು, ನಾದರೂಪಕ ಕವನ ಸಂಕಲನಗಳು. ಪ್ರಾಸ-ಪ್ರಯಾಸ, ಕೆಂಪಭಾರತಂ, ಕೆಂಪರಾಮಾಯಣಂ, ಕೆಂಪನ ವಚನಗಳು, ಅಲ್ಪಜ್ಞನ ವಚನಗಳು ಮುಂತಾದ ಹಾಸ್ಯ ಸಂಕಲನಗಳು ಸೇರಿ ಸುಮಾರು ...

READ MORE

Related Books