ಉಕ್ಕಿದ ನೊರೆ

Author : ಶಿವರಾಮ ಕಾರಂತ

Pages 271

₹ 140.00




Year of Publication: 2012
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ. ಗಾಂಧಿನಗರ, ಬೆಂಗಳೂರು, 560009
Phone: 080 4011 4455

Synopsys

ಉಕ್ಕಿದ ನೊರೆ-ಎಂಬುದು ಡಾ. ಶಿವರಾಮ ಕಾರಂತರ ಕಾದಂಬರಿ. ಸ್ವಾತಂತ್ಯ್ರೋತ್ತರ ಭಾರತದ ಮೊದಲ ಕೆಲ ದಶಕಗಳು ದೇಶದಲ್ಲಿ ಅನೇಕ ಬದಲಾವಣೆಗಳನ್ನು ನಿರೀಕ್ಷಿಸುತ್ತಿದ್ದ ಕಾಲ. ಸುಧಾರಣೆಯನ್ನು ಬಯಸಿದ್ದವರಿಗೆ ಕಾದಿದ್ದು ಮಾತ್ರ ಭ್ರಮನಿರಸನ. ಬ್ರಿಟಿಷರೇನೋ ಹೋದರು ಆದರೆ ಜನ ಸಾಮಾನ್ಯರಿಗೆ ನಿಜವಾಗಿಯೂ ಸ್ವಾತಂತ್ಯ್ರ ಸಿಕ್ಕಿತೆ ಎಂಬ ಪ್ರಶ್ನೆ ಎದ್ದಿತು. ರಾಜಕಾರಣಿಗಳು ಕುರ್ಚಿ ಗಿಟ್ಟಿಸಿಕೊಳ್ಳುವತ್ತಲೇ ಗಮನ ಹರಿಸಿದರು. ಜನಸೇವೆ ಎಂಬುದು ಹಾಸ್ಯಾಸ್ಪದವಾಯಿತು. ಅಧಿಕಾರಿಗಳು ಹಣದಾಸೆಗೆ ಜೋತು ಬಿದ್ದರು. ಅಂತಹ ಸಂದಿಗ್ಧ ಸ್ಥಿತಿಯನ್ನು ಕಣ್ಣಿಗೆ ಕಟ್ಟಿಕೊಡುತ್ತದೆ ಈ ಕಾದಂಬರಿ-’ಉಕ್ಕಿದ ನೊರೆ’.

1930-1955ರವರೆಗೆ (ಸು. 25 ವರ್ಷ) ದಕ್ಷಿಣ ಕನ್ನಡ ಜಿಲ್ಲೆಯನ್ನು ಆವರಿಸಿದ ಸಾಮಾಜಿಕ ಆವರಣವನ್ನು ಬ್ರಹ್ಮಾವರ ಎಂಬ ಒಂದು ಹಳ್ಳಿಗೆ ಅನ್ವಯಿಸಿಕೊಂಡು ಬರೆದ ಕಾದಂಬರಿ ಇದು. ಜೀವನದಲ್ಲಿ ತೋರಿಕೆಯ ಯಶಸ್ಸಿಗೆ, ದ್ರವ್ಯಾರ್ಜನೆಗೆ, ಅಧಿಕಾರ ಲಾಲಸೆಗೆ ಜನಸಾಮಾನ್ಯರ ಮನಸ್ಸು ಯಾವ ತೆರನಾಗಿ ಧಾವಿಸುತ್ತದೆ. ಅದರಲ್ಲಿ, ಯಶಸ್ಸು ಎಂಥವರದ್ದು, ಯಾವ ತೂಕಗಳು ಸಮಾಜದ ಸರಸ್ಸಿನ ತಳವನ್ನು ಸೇರಿ ಇದ್ದೂ ಕಾಣಿಸದಾಗುತ್ತದೆ. ಯಾವವು ನೀರ ಮೇಲಣ ಬುರುಗಿನಂತೆ ಮೇಲಕ್ಕೆ ಬರುತ್ತದೆ. ಅಂಥ ಬುರುಗೇ ಎಂಥ ಮನ್ನಣೆ ಗಳಿಸುತ್ತದೆ-ಎಂಬೆಲ್ಲ ದೃಶ್ಯಗಳು ಈ ಕತೆಯಲ್ಲದ ಕತೆಯಲ್ಲಿ ಓದುವಿರಂತೆ ಎಂಬ ಲೇಖಕರ ಮುನ್ನುಡಿಯ ಮಾತುಗಳು ಕಾದಂಬರಿಯ ವಸ್ತುವಿನ ಮೇಲೆ ಬೆಳಕು ಚೆಲ್ಲುತ್ತವೆ ಎಂಬುದು ಈ ಕಾದಂಬರಿಯ ವಿಶೇಷ.   

ಈ ಕೃತಿ ಮೊದಲು ಪ್ರಕಟವಾಗಿದ್ದು(ಪುಟ: 248)  1970ರಲ್ಲಿ. ತದನಂತರ, 2000ರಲ್ಲಿ ರಾಜ್ಯ ಸರ್ಕಾರ ಕಾರಂತರ ಸಮಗ್ರ ಸಾಹಿತ್ಯ ಶ್ರೇಣಿಯ 17ನೇ ಸಂಪುಟದಲ್ಲಿಈ ಕೃತಿಯನ್ನು ಮರುಪ್ರಕಟಿಸಿದೆ. 

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books