ಸರಸ್ವತಿ ಸಂಹಾರ

Author : ಬೀchi

Pages 130

₹ 60.00




Year of Publication: 2011
Published by: ಸಮಾಜ ಪುಸ್ತಕಾಲಯ
Address: ಸಮಾಜ ಪುಸ್ತಕಾಲಯ, ಶಿವಾಜಿ ರೋಡ್, ಧಾರವಾಡ
Phone: 8762102715

Synopsys

ಹೆಣ್ಣಿನ ಮೇಲೆ ನಡೆಯುವ ಕೌಟುಂಬಿಕ ದೌರ್ಜನ್ಯ ಮತ್ತು  ಮೇಲ್ಜಾತಿಯ ಸಮುದಾಯವೊಂದರ ಅಂಧಾನುಕರಣೆಯನ್ನು ಚಿತ್ರಿಸುತ್ತದೆ ಬೀchi ಅವರ ’ಸರಸ್ವತಿ ಸಂಹಾರ’. ವಿಡಂಬನೆಯಷ್ಟೇ ಕೃತಿಯ ಆಶಯವಲ್ಲ. ಉತ್ತಮ ಗುಣ ಇರುವವರ ವ್ಯಕ್ತಿತ್ವಗಳು ಧನಾತ್ಮಕವಾಗಿ ಚಿತ್ರಣಗೊಳ್ಳುತ್ತ ಸಮಾಜಕ್ಕೆ ಉತ್ತಮವಾದುದು ಅಗತ್ಯವಿದೆ ಎಂಬುದನ್ನು ಹೇಳುತ್ತವೆ. 

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ವಿ.ಕೃ. ಗೋಕಾಕರು ಕೃತಿಯ ಮುನ್ನುಡಿಯಲ್ಲಿ ’ಯಾವುದೋ ಒಂದು ಅಂತರಿಕ ಸಮಾಧಾನದಿಂದ ತಮ್ಮ ಯಾತನೆಯನ್ನು ಸಹಿಸಲು ಸಾತ್ವಿಕರು ಸಮರ್ಥರಾಗಿರುತ್ತಾರೆ. ಬ್ರಹ್ಮಾನಂದರ ಚಿತ್ರಣದಲ್ಲಿ ಇದರ ಬಗ್ಗೆ ಮಾತಿದೆ. ಆದರೆ ಅದು ಬರಿಮಾತು. ಆ ಶಾಂತಿಯ ವಿವರ ಹಾಗೂ ಜೀವಂತ ಚಿತ್ರಣಗಳಿಲ್ಲ, ಸರಸ್ವತಿ- ಅಚ್ಚಮ್ಮ-ಗಣಪತಿ ಯರಿಗಂತೂ ಇದರ ಅರಿವೆ ಇಲ್ಲ, ಬರಿ ಅಸಹಾಯಿತರಾಗಿ ಸಾಯುತ್ತಾರೆ. ಹೊರಗಿನಿಂದ ನೋಡುವ ಸಾಮಾಜಿಕ ದೃಷ್ಟಿಯಲ್ಲಿ ಇದು ಸತ್ಯವಾಗಿ ಕಾಣಬಹುದು. ಆದರೆ ಇಂಥವರ ಹೃದಯಗಳನ್ನು ಒಳಹೊಕ್ಕು ನೋಡಿದರೆ, ಅಲ್ಲಿ ಬೇರೆ ಮಾತು ಹೊಳೆಯಬಹುದು. ಈ ಭಾಗ ಕೃತಿಯಲ್ಲಿ ಬಂದಿಲ್ಲ ಬಂದಿದ್ದರೆ ಸಾತ್ವಿಕರ ವ್ಯವಹಾರಿಕ ಸೋಲು ಸಹ್ಯವಾಗಬಹುದಿತ್ತು'. ಎಂದು ಹೇಳಿದ್ದಾರೆ. 

About the Author

ಬೀchi
(23 April 1913 - 07 December 1980)

'ಬೀಚಿ' ಎಂಬುದು ರಾಯಸಂ ಭೀಮಸೇನರಾವ್ ಅವರ ಕಾವ್ಯನಾಮ. ಅವರು ಜನಿಸಿದ್ದು 1913ರ ಏಪ್ರಿಲ್ 23ರಂದು ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿಯಲ್ಲಿ. ತಂದೆ ರಾಯಸಂ ಶ್ರೀನಿವಾಸರಾವ್, ತಾಯಿ ಭಾರತಮ್ಮ. 'ಬೀಚಿ' ಯವರ ಹೆಸರಿನ ಹಾಗೆ ಅವರ ಸಹಿಯೂ ವಿಚಿತ್ರ- 'ಬಿ' ಕನ್ನಡವಾದರೆ 'ಚಿ' ಇಂಗ್ಲಿಷು. ಸತಿ ಸೂಳೆ, ಸರಸ್ವತಿ ಸಂಹಾರ, ಖಾದಿ ಸೀರೆ, ಹೆಂಣು ಕಾಣದ ಗಂಡ, ಸತ್ತವನು ಎದ್ದುಬಂದಾಗ, ಮೇಡಮ್ಮನ ಗಂಡ, ಏರದ ಬಳೆ, ಬಂಗಾರದ ಕತ್ತೆ, ಮೂರು ಹೆಂಣು ಐದು ಜಡೆ, ಸುನಂದೂಗ ಏನಂತೆ, ಲೇವಡಿ ಟೈಪಿಸ್ಟ್, ಆರಿದ ಚಹಾ, ಬಿತ್ತಿದ್ದೇ ಬೇವು, ಕಾಮಂಣ (ಕಾದಂಬರಿಗಳು). ತಿಂಮನ ತಲೆ, ಆರು ಏಳು ಸ್ತ್ರೀ ಸೌಖ್ಯ, ಅಮ್ಮಾವ್ರ ಕಾಲ್ಗುಣ, ...

READ MORE

Related Books