ಮಂಗಳೆ ಬರಲಿಲ್ಲ

Author : ಬೇಲೂರು ರಾಮಮೂರ್ತಿ

Pages 150

₹ 14.00




Year of Publication: 1986
Published by: ಐಬಿಎಚ್ ಪ್ರಕಾಶನ
Address: #77, 2ನೇ ಮುಖ್ಯರಸ್ತೆ, ರಾಮರಾವ್ ಲೇಔಟ್, ಬಿಎಸ್ ಕೆ ಮೂರನೇ ಸ್ವೇಜ್, ಬೆಂಗಳೂರು- 560085.
Phone: 080 - 48371555

Synopsys

‘ಮಂಗಳೆ ಬರಲಿಲ್ಲ’ ಬೇಲೂರು ರಾಮಮೂರ್ತಿ ಅವರ ಕಾದಂಬರಿಯಾಗಿದೆ. ಮಲೆನಾಡಿನ ಒಂದು ಹಠಮಾರೀ ಕುಟುಂಬದ ಹೆಣ್ಣುಮಗಳಾದ ಮಂಗಳೆ ಅನೇಕಾನೇಕ ಸುಖದ ಕಲ್ಪನೆಗಳನ್ನು ಮಾಡಿಕೊಂಡು ಅವುಗಳು ಕೈಗೂಡದೇ ಹೋದಾಗ ಅಸಹನೆಯಿಂದ ಗಂಡನ ಸರಳ ಸ್ವಭಾವಗಳನ್ನು ಅರ್ಥ ಮಾಡಿಕೊಳ್ಳಲಾಗದೇ ಅವನನ್ನ ಷಂಡನೆಂದು ಜರಿದು ಅವನಿಂದ ದೂರವಾಗುತ್ತಾಳೆ. ಹೊಂದಾಣಿಕೆಯಿಲ್ಲದ ಬದುಕು ಯಾವ ರೀತಿ ಆಗುತ್ತದೆ ಎನ್ನುವುದಕ್ಕೆ ಕಾದಂಬರಿಯ ಮೀನಾಕ್ಷಿ, ಮಂಗಳೆ ಮುಂತಾದವರು ಉದಾಹರಣೆಯಾಗಿ ನಿಲ್ಲುತ್ತಾರೆ. ಸುಖವನ್ನು ಒಟ್ಟಿಗೇ ಅನುಭವಿಸಿಬಿಡಬೇಕೆಂದು ಹಾತೊರೆದು ವ್ಯವಸ್ಥಿತ ಬದುಕು ಕಾಣಲಾರದೇ ತೊಳಲಾಡುವ ಶಾರದೆಯ ಪಾತ್ರ, ಅತೀವ ತಾಳ್ಮೆ ಉಳಿಸಿಕೊಂಡು ಬೆಳೆಸಿಕೊಂಡು ಇಂದಲ್ಲ ನಾಳೆ ಬದುಕನ್ನು ಹಸನಾಗಿಸಿಕೊಳ್ಳುವ ಆಸೆಯಿಂದ ಇದ್ದು ಕೊನೆಗೂ ನಿರಾಶನಾಗುವ ಮಂಜುನಾಥ ಮುಂತಾದ ಪಾತ್ರಗಳು ಮಂಗಳೆ ಬರಲಿಲ್ಲ ಕಾದಂಬರಿಯಲ್ಲಿ ವಿಶೇಷವಾಗಿ ಮನ್ನಣೆ ಗಳಿಸುತ್ತವೆ.

About the Author

ಬೇಲೂರು ರಾಮಮೂರ್ತಿ
(30 June 1950)

ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು.  ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು.  ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ.  ‘ಅನರ್ಘ್ಯ ಪ್ರೇಮ, ಅಗೋಚರ, ಜೋಡಿರಾಗ, ಅಪರಾಧಿ ನಾನಲ್ಲ, ಸುಮಂಗಲೆ, ಹೀಗೊಂದು ಸಾರ್ಥಕ ಬದುಕು, ಅಮೃತಗಾನ, ಅತಿಥಿ, ಶರ್ಮಿಳ, ಅಗ್ನಿಜ್ವಾಲೆ, ಅಭಿಷೇಕ, ಅರುಂಧತಿ, ಸಂಬಂಧ ರಾಗ, ಸ್ವರಸಂಗಮ, ತೂಗುಸೇತುವೆ, ಮುತ್ತಿನ ತೆನೆ, ಸಮಾಗಮ, ಕಾಣದ ಊರಲಿ, ಎಂದೂ ನಿನ್ನವನೇ, ಪ್ರೇಮನಿವೇದನೆ, ...

READ MORE

Related Books