ಮಿಯಾ ಮಲಾರ್

Author : ಅ.ನ.ಕೃ (ಅ.ನ. ಕೃಷ್ಣರಾಯ)

Pages 143

₹ 115.00




Year of Publication: 2003
Published by: ಸಾಗರ್ ಪ್ರಕಾಶನ
Address: ಬೆಂಗಳೂರು

Synopsys

ಜನಪ್ರಗತಿ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂದ "ಮಿಯಾ ಮಲ್ಹಾರ " (ಮಲಾರ) ಕಾದಂಬರಿ ಕೂಡ ಒಬ್ಬ ಸಂಗೀತೋಪಾಸಕನ ಆಸ್ಥೆ, ಶ್ರದ್ಧೆ, ಸಾಧನೆ, ಜೀವ ಹಿಂಡುವ ಚಟಗಳು, ವಿನಯವಂತಿಕೆ, ಸೊಕ್ಕು, ಸ್ವಾರ್ಥ, ಭ್ರಮನಿರಸನ ಹೀಗೆ ಬದುಕಿನ ಎಲ್ಲಾ ಅನುಭವಗಳನ್ನು ಸಾದ್ಯಂತವಾಗಿ ಚಿತ್ರಿಸುವ ಕಥಾ ಹಂದರವುಳ್ಳದ್ದು! ವಿದುರ ಜಟಕಾವಾಲಾ ಬೆಂಗಳೂರಿನ ಮಜೀದ್ ಖಾನನ ಏಕೈಕ ಪುತ್ರ ಪೀರ್ ಜಾದಾನಿಗೆ ತಂದೆಯ ಜಟಕಾ ವಾಲಾ ಕಸುಬನ್ನು ಮುಂದುವರೆಸುವುದಕ್ಕಿಂತ ಸಂಗೀತಗಾರನಾಗುವ ಹಂಬಲ! ಪಾರ್ಸಿ ಕಂಪನಿಯ ಲೈಲಾ - ಮಜ್ನು ನಾಟಕವನ್ನು ಅಪ್ಪನಿಗೆ ಗೊತ್ತಾಗದಂತೆ ಗೆಳೆಯ ದಸ್ತಗೀರನೊಂದಿಗೆ ವೀಕ್ಷಿಸಿ ನಾಟಕದ ನಾಯಕನಂತೆ ತಾನೂ ಸಂಗೀತಗಾರನಾಗಬೇಕೆಂಬ ಹಂಬಲ ಬೆಳೆಸಿಕೊಂಡವನು.

About the Author

ಅ.ನ.ಕೃ (ಅ.ನ. ಕೃಷ್ಣರಾಯ)
(09 May 1908 - 04 July 1971)

‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಹೆಸರಾಂತ ಕಾದಂಬರಿಕಾರರು. ‘ಕಾದಂಬರಿ ಸಾರ್ವಭೌಮ’ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರು. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. 1908ರ ಮೇ 9ರಂದು ಜನಿಸಿದ ಅವರುಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು. ಬರಹ ಮಾಡಿಯೇ ಬದುಕಿದವರು ಅನಕೃ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ...

READ MORE

Related Books