ಪಂಜರದ ಗಿಣಿ

Author : ಅ.ನ.ಕೃ (ಅ.ನ. ಕೃಷ್ಣರಾಯ)

Pages 218

₹ 143.00

Buy Now


Year of Publication: 2019
Published by: ಹೇಮಂತ ಸಾಹಿತ್ಯ
Address: ನಂ.972, ಸಿ, 4ನೇ ಇ ಬ್ಲಾಕ್, 10ನೇ ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು-560060
Phone: 23507170

Synopsys

ಸಾಮಾಜಿಕ ಹಾಗೂ ಕೌಟುಂಬಿಕ ವಿಷಯ ವಸ್ತುವಿನೊಂದಿಗೆ ಹತ್ತು ಹಲವು ಕಾದಂಬರಿಗಳನ್ನು ಬರೆದಿರುವ ಕಾದಂಬರಿಕಾರ ಅ.ನ.ಕೃಷ್ಣರಾಯರು, ‘ಪಂಜರದ ಗಿಣಿ’ ಕಾದಂಬರಿ ಬರೆದಿದ್ದು, ನಿರೂಪಣಾ ಶೈಲಿಯೊಂದಿಗೆ ಓದುಗರನ್ನು ಸೆಳೆಯುತ್ತದೆ. ಸ್ತ್ರೀವಿದ್ಯಾಭ್ಯಾಸ, ಸ್ತ್ರೀಸ್ವಾತಂತ್ರ್ಯ, ಸ್ತ್ರೀಪುರುಷ ಸಂಬಂಧ ಈ ಪ್ರಶ್ನೆಗಳ ಕಡೆಗೆ ಓದುಗರ ಲಕ್ಷ್ಯವೆಳೆಯುವುದೇ 'ಪಂಜರದ ಗಿಣಿ' ಯ ಉದ್ದೇಶ. ವೃಷ್ಟಿಸಮಷ್ಟಿಗಳ ಮಧ್ಯೆ ನಡೆಯುತ್ತಿರುವ ಸತತ ಹೋರಾಟದಲ್ಲಿ ಸ್ತ್ರೀಪುರುಷರು ತಳೆಯಬೇಕಾದ ಧೋರಣೆಯೇನು ಎಂದು 'ಪಂಜರದ ಗಿಣಿ' ಕೇಳುತ್ತದೆ. ಇದು ಸಿದ್ಧಾಂತ ಗ್ರಂಥವಲ್ಲ -ಒಂದು ರಾದ್ಧಾಂತದ ಚಿತ್ರ ಮಾತ್ರ. ಎಂದು ಲೇಖಕರು ತಿಳಿಸಿದ್ದಾರೆ.

About the Author

ಅ.ನ.ಕೃ (ಅ.ನ. ಕೃಷ್ಣರಾಯ)
(09 May 1908 - 04 July 1971)

‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಹೆಸರಾಂತ ಕಾದಂಬರಿಕಾರರು. ‘ಕಾದಂಬರಿ ಸಾರ್ವಭೌಮ’ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರು. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. 1908ರ ಮೇ 9ರಂದು ಜನಿಸಿದ ಅವರುಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು. ಬರಹ ಮಾಡಿಯೇ ಬದುಕಿದವರು ಅನಕೃ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ...

READ MORE

Related Books