ಮಯೂರ

Author : ದೇವುಡು ನರಸಿಂಹಶಾಸ್ತ್ರಿಗಳು

Pages 200

₹ 150.00




Year of Publication: 2010
Published by: ದೇವುಡು ಪ್ರತಿಷ್ಠಾನ
Address: ಬೆಂಗಳೂರು.

Synopsys

ದೇವುಡು ಬರೆದ ಮಯೂರ ಕಾದಂಬರಿಯು ಈ ಮೊದಲು ಕೃಷ್ಣ ಕಂಪೆನಿ ಪ್ರಕಾಶನದಿಂದ ಪ್ರಕಟವಾಗಿತ್ತು ಮಯೂರ ಕಥೆಯು ಚರಿತ್ರೆಯಲ್ಲ; ಅದು ದಿಟಕ್ಕಿಂಲೂ ಸೆಟೆಯೇ ಹೆಚ್ಚು. ಆದರೆ, ವಸ್ತುವನ್ನು ಐತಿಹಾಸಿಕ ದಾಖಲೆಗಳನ್ನು ಆಧರಿಸಿ ಬರೆದಿದ್ದು, ಕನ್ನಡ ಜನತೆಯ ಸಂಸ್ಕೃತಿಯ ಚಿತ್ರಣ ಮೂಡಿಸಲು ಯತ್ನಿಸಿದ್ದೇವೆ. ಕರ್ಣಾಟಕ ಸಂಸ್ಕೃತಿಯು ವೈದಿಕ ಸಂಸ್ಕೃತಿಯ ಪ್ರತಿಬಿಂಬವೇ ಆಗಿದೆ. ಮಯೂರನು ತನ್ನ ಸಿಂಹಾಸನವನ್ನು ಗೆದ್ದುಕೊಂಡಂತೆ ಕನ್ನಡಿಗರು ತಮ್ಮ ಕರ್ಣಾಟಕತ್ವವನ್ನು ಗೆದ್ದುಕೊಳ್ಳಬೇಕು ಎಂಬುದರ ಆಶಯವೂ ಈ ಕಾದಂಬರಿಯದ್ದಾಗಿ ಎಂದು ಲೇಖಕರು ಹೇಳುತ್ತಾರೆ.

ಸತ್ಯಶೋಧನ ಪ್ರಕಟನ ಮಂದಿರವು 1950ರಲ್ಲಿ ಈ ಪುಸ್ತಕ ಪ್ರಕಟಿಸಿತ್ತು.

About the Author

ದೇವುಡು ನರಸಿಂಹಶಾಸ್ತ್ರಿಗಳು
(29 December 1886 - 27 October 1962)

’ಮಹಾಕಾದಂಬರಿಕಾರ’ ಎಂದು ಹೆಸರುವಾಸಿಯಾಗಿದ್ದ ದೇವುಡು ನರಸಿಂಹಶಾಸ್ತ್ರಿಗಳು ಶಿಕ್ಷಕರಾಗಿ, ಸಂಪಾದಕರಾಗಿ, ನಟರಾಗಿ, ವಿಮರ್ಶಕರಾಗಿ ತಮ್ಮ ಪ್ರತಿಭೆ- ಪಾಂಡಿತ್ಯ ಮೆರೆದಿದ್ದರು. ನರಸಿಂಹ ಶಾಸ್ತ್ರಿಗಳು ಜನಿಸಿದ್ದು ಮೈಸೂರಿನ ರಾಜಪುರೋಹಿತರ ಮನೆತನದಲ್ಲಿ.  1896ರ ಡಿಸೆಂಬರ್‌ 26ರಂದು ಜನಿಸಿದ ಅವರು ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡರು. ತಾಯಿಯ ಆಸರೆಯಲ್ಲಿ ಬೆಳೆದ ನರಸಿಂಹಶಾಸ್ತ್ರಿಗಳು ತೀಕ್ಷ್ಣ ಬುದ್ಧಿಯುಳ್ಳವರಾಗಿದ್ದರು. ಹನ್ನೆರಡನೆಯ ವಯಸ್ಸಿನಲ್ಲಿಯೇ ರಾಮಾಯಣ, ಮಹಾಭಾರತದಂತಹ ಕಾವ್ಯ ಮತ್ತುಭಾಗವತದಂತಹ ಪುರಾಣಗಳನ್ನು ಓದಿ ಅರಿತಿದ್ದರು. ಹದಿನೈದನೆಯ ವಯಸ್ಸಿನಲ್ಲಿಯೇ ಛಂದೋಬದ್ಧವಾಗಿ ಕಾವ್ಯ ರಚಿಸುವ ಹವ್ಯಾಸ ಬೆಳೆಸಿಕೊಂಡರು. ಸಾಂಪ್ರದಾಯಿಕ ವೈದಿಕ ವಿದ್ಯೆಯ ಜೊತೆಯಲ್ಲಿಯೇ ಬಿ.ಎ., ಎಂ.ಎ. ಪದವಿಯನ್ನು ಸಂಸ್ಕೃತ ಹಾಗೂ ಭಾರತೀಯ ತತ್ವಶಾಸ್ತ್ರದಲ್ಲಿ ಪಡೆದಿದ್ದರು. ಸರ್ವಪಲ್ಲಿ ...

READ MORE

Related Books