ತೊಟ್ಟಿಕ್ಕುತ್ತಲೇ ಇದೆ ನೆತ್ತರು....

Author : ಅಗ್ನಿ ಶ್ರೀಧರ್

Pages 496

₹ 315.00




Year of Publication: 2014
Published by: ಅಂಕಿತ ಪುಸ್ತಕ
Address: #53 ಶಾಮಸಿಂಗ್ ಸಂಕೀರ್ಣ, ಗಾಂಧಿಬಜಾರ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560004
Phone: 080 2661 7100

Synopsys

ಲೇಖಕ-ಪತ್ರಕರ್ತ ಅಗ್ನಿ ಶ್ರೀಧರ ಅವರು ಬರೆದ ಕಾದಂಬರಿ-ತೊಟ್ಟಿಕ್ಕುತ್ತಲೇ ಇದೆ ನೆತ್ತರು. ಲೇಖಕರು ಹೇಳುವಂತೆ ‘ಈ ಮುನ್ನ ಅಂದರೆ ದಾಸ್ತೋವಸ್ಕಿ ಕಾಲದಲ್ಲಿ ಅಪರಾಧ ಹಾಗೂ ಶಿಕ್ಷೆಗಳು ಎರಡೂ ಇದ್ದವು. ಪಾತಕದ ಜೊತೆ ಶಿಕ್ಷೆಯೂ ಬೆಸೆದುಕೊಂಡಿತ್ತು. ಅಪರಾಧಿಯನ್ನು ಸಮಾಜ ದಂಡಿಸುತ್ತಿತ್ತು. ಪಾತಕಿ ಪಶ್ಚಾತ್ತಾಪದ ಕುಲುಮೆಯಲ್ಲಿ ಬೇಯುತ್ತಿದ್ದ. ಶತಮಾನದ ಹಿಂದೆ ದಾಸ್ತೋವಸ್ಕಿ ಸತ್ತ. ಆತನ ಹಿಂದೆಯೇ ಶಿಕ್ಷೆಯೂ ಮರೆಯಾಯಿತು. ಕೇವಲ ಪಾತಕ ಮಾತ್ರ ಉಳಿಯಿತು. ಇದು ‘ಕ್ರೈಂ ಆಂಡ್ ಕ್ರೈಂ’ ಯುಗ’ ಹೀಗೆ ಕಾದಂಬರಿಯ ವಸ್ತುವನ್ನು ಮಾರ್ಮಿಕವಾಗಿ ಹೇಳಿದ್ದಾರೆ. ಗಂಭೀರ ವಿಷಯವೊಂದರೆ ಸೂಕ್ತ ನಿರೂಪಣಾ ಶೈಲಿಯು ಓದುಗರ ಗಮನ ಸೆಳೆಯುತ್ತದೆ.

About the Author

ಅಗ್ನಿ ಶ್ರೀಧರ್

ಅಗ್ನಿ ಶ್ರೀಧರ್ ಪತ್ರಕರ್ತರು, ಲೇಖಕರು, ಚಲನಚಿತ್ರ ಸಂಭಾಷಣೆಗಾರರು ಹಾಗೂ ನಿರ್ದೇಶಕರು. ಅಗ್ನಿ ಎಂಬ ವಾರಪತ್ರಿಕೆಯನ್ನು ನಡೆಸುತ್ತಿದ್ದಾರೆ. ಅವರು ಕರುನಾಡ ಸೇನೆಯ ಸ್ಥಾಪಕರೂ ಸಹ ಆಗಿದ್ದಾರೆ. ನಂತರ ಅವರು ಸಾಪ್ತಾಹಿಕ ಕನ್ನಡ ವೃತ್ತಪತ್ರಿಕೆ, ಅಗ್ನಿಯನ್ನು ಸ್ಥಾಪಿಸಿದರು ಮತ್ತು ವೃತ್ತಿಪರ ಬರಹಗಾರರಾಗಿದ್ದಾರೆ. "ದಾದಗಿರಿಯ ದಿನಗಳು" ಎಂಬ ಪುಸ್ತಕವನ್ನು ಬರೆದಿದ್ದಾರೆ. ಅಗ್ನಿ ಅಸ್ತ್ರ ಎಂಬ ಯು- ಟ್ಯೂಬ್ ಚಾನಲ್‌ನಲ್ಲೂ ತಮ್ಮ ವಿಮರ್ಷೆಗಳನ್ನು ಪ್ರಕಟಿಸಿದ್ದಾರೆ. ಅವರ ಪುಸ್ತಕಗಳು- ಆಧುನಿಕ ಮಾಂತ್ರಿಕರ ಜಾಡಿನಲ್ಲಿ, ಕ್ವಾಂಟಂ ಜಗತ್ತು, ಟಿಬೇಟಿಯನ್ನರ ಸತ್ತವರ ಪುಸ್ತಕ, ಕಾಡುವ ಸಾಧಕರು, ಸಂಗತಿಗಳು, ತೊಟ್ಟಿಕ್ಕುತ್ತಲೇ ಇದೆ ನೆತ್ತರು, ಎದೆಗಾರಿಕೆ, ದಾದಾಗಿರಿಯ ದಿನಗಳು ಭಾಗ-1, ...

READ MORE

Related Books