ಕುಂಕುಮ ಭಾಗ್ಯ

Author : ಎಂ.ವಿ. ಸೀತಾರಾಮಯ್ಯ

Pages 357

₹ 2.00




Year of Publication: 1955
Published by: ಉಷಾ ಸಾಹಿತ್ಯ ಮಾಲೆ
Address: ಮೈಸೂರು

Synopsys

ಹಿರಿಯ ಸಾಹಿತಿ ಎಂ.ವೀ. ಸೀತಾರಾಮಯ್ಯ ಅವರು ಬರೆದ ಸಾಮಾಜಿಕ ಕಾದಂಬರಿ-ಕುಂಕುಮ ಭಾಗ್ಯ. ಬದುಕಿನ ವಿವಿಧ ಅನುಭವಗಳ ವ್ಯಾಪಕತೆಯನ್ನು ಕಾದಂಬರಿಯಲ್ಲಿ ಚಿತ್ರಿಸಲಾಗಿದೆ. ಈ ಸಮಾಜ ಗಂಡಿನ ಪಾಲಿಗೆ ಬೇರೆಯದೇ ಅರ್ಥ ನೀಡಿದರೆ ಹೆಣ್ಣಿಗೆ ಬೇರೆ ತೆರನಾದ ಅರ್ಥ ನೀಡುತ್ತದೆ. ಗಂಡಿಗಿಂತ ಹೆಣ್ಣನ್ನು ನಡೆಸಿಕೊಳ್ಳುವ ರೀತಿ ಸಮಾಜದ್ದು ಬೇರೆ ಬೇರೆಯಾಗಿದೆ. ಇಂತಹ ಸ್ಥಿತಿಯಲ್ಲಿ ಒಂದು ಹೆಣ್ಣು ತನ್ನ ಅಸ್ತಿತ್ವ ಕಾಯ್ದುಕೊಂಡು ಎದುರಿಸುವ ಪರಿ ಈ ಕಾದಂಬರಿಯ ವಸ್ತು. ಇಲ್ಲಿಯ ನಾಯಕಿ ಸೀತೆ, ಕಷ್ಟಗಳನ್ನು ಅನುಭವಿಸುವವಳೂ, ಆ ಸಮಸ್ಯೆಗಳನ್ನು ಹೇಗೆ ಎದುರಿಸಬಹುದು ಎಂದು ತಿಳಿದು ಅದರಂತೆ ವರ್ತಿಸುವವಳೂ ಆಗಿ, ಇತರರಿಗೆ ಮಾದರಿಯಾಗುತ್ತಾಳೆ. ಸಂಸಾರದಲ್ಲಿ ಹೆಣ್ಣಿಗೆ ಇಂತಹ ಮನಸ್ಥಿತಿ ಬೇಕು ಎಂಬುದು ಇಲ್ಲಿಯ ವಸ್ತು.

About the Author

ಎಂ.ವಿ. ಸೀತಾರಾಮಯ್ಯ
(09 September 1910 - 12 March 1990)

ರಾಘವ ಕಾವ್ಯನಾಮದ ಮೂಲಕ ಪರಿಚಿತರಾಗಿರುವ ಎಂ.ವಿ. ಸೀತಾರಾಮಯ್ಯ ಜನಿಸಿದ್ದು ಮೈಸೂರಿನಲ್ಲಿ.  ಮಕ್ಕಳಿಗಾಗಿ ಬರೆದ 'ಹೂವನು ಮಾರುತ ಹೂವಾಡಗಿತ್ತಿ' ಹಾಡು ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿತ್ತು. ಕನ್ನಡ ಅಧ್ಯಾಪಕರಾಗಿದ್ದ ಇವರು ಸಾಹಿತ್ಯ ಕ್ಷೇತ್ರದಲ್ಲಿಯೂ ಮನೆಮಾತಾಗಿದ್ದರು.  ಕನ್ನಡ ಸಾಹಿತ್ಯಕ್ಕೆ ಇವರ ಕೊಡುಗೆಗಳೆಂದರೆ  ಹಕ್ಕಿಹಾಡು, ರಾಗ, ಅಶೋಕ ಚಕ್ರ (ಕವನ ಸಂಗ್ರಹಗಳು), ರಾಘವ, ಕವನ ಕೋಶ, ಆ ಚಿತ್ರಗಳು, ಹಕ್ಕಿ ಹಾಡು, ರತಿದೇವಿ ಮತ್ತು ಇತರ ಕಥೆಗಳು, ಬಿಸಿಲು ಬೆಳದಿಂಗಳು, ನಿಲ್ದಾಣಗಳ ನಡುವೆ (ಕಥಾ ಸಂಕಲನಗಳು), ಭಾಗ್ಯಲಕ್ಷ್ಮಿ, ನಂಜಿನ ಸವಿ, ಜೀವನದ ಜೊತೆಗಾರ (ಕಾದಂಬರಿಗಳು), ತೆರೆಮರೆಯ ಚಿತ್ರಗಳು, ತೊಟ್ಟಿಲು ತೂಗದ ಕೈ (ನಾಟಕಗಳು), ...

READ MORE

Related Books