ಬೆಳಗಿನ ಬಿಸಿಲು

Author : ಹೆಚ್.ಜಿ. ರಾಧಾದೇವಿ

Pages 150

₹ 100.00




Published by: ಸ್ನೇಹಾ ಪ್ರಿಂಟರ್ಸ
Address: ನಂ.114,4ನೇಅಡ್ಡರಸ್ತೆ,ಬಿ.ಸಿ.ಸಿ.ಬಡಾವಣೆ,ಅತ್ತಿಗುಪ್ಪೆ,ವಿಜಯ ನಗರ,2ನೇ ಹಂತ, ಬೆಂಗಳೂರು-14

Synopsys

ಕಾದಂಬರಿಗಾರ್ತಿ ಹೆಚ್.ಜಿ.ರಾಧಾದೇವಿ ಅವರ ಸಾಮಾಜಿಕ ಕಾದಂಬರಿ ಬೆಳಗಿನ ಬಿಸಿಲು. ಒಂದು ಮಧ್ಯಮ ವರ್ಗದ ಕುಟುಂಬದ ಸುತ್ತ ಹೆಣೆದ ಕಾದಂಬರಿಯಾದರೂ ಹಲವು ಶ್ರೀಮಂತ ಕುಟುಂಬದ ಚಿತ್ರಣವನ್ನು,ಜೊತೆಗೆ ಸುಮಾರು 80ರ ದಶಕದಲ್ಲಿ ಸಮಾಜದಲ್ಲಿ ವರದಕ್ಷಿಣೆ ಪಿಡುಗು,ಯುವತಿಗಿರದ ಶಿಕ್ಷಣ ವ್ಯವಸ್ಥೆ,ಅವಕಾಶವಿದ್ದರೂ,ಓದದೆ ಇರುವ ಹೆಣ್ಣು ಮಕ್ಕಳ ಬೇಜವಾಬ್ದಾರಿ ಬಗ್ಗೆ,ಕಣ್ಣಿಗೆ ಕಟ್ಟುವಂತೆ ಬರೆದಿರುವರು. ಲಲಿತಾಳ ಕುಟುಂಬದ ಸುತ್ತ ಹೆಣೆದುಕೊಳ್ಳುವ ಈ ಕತೆ,ಅವಳು ಅನಂತನ ಜೊತೆ ಸಂಸಾರ ಹೂಡಿಕೊಂಡು,ತನ್ನ ಬದುಕಲ್ಲಿ ಬರುವ ಒಳ್ಳೆಯ ಹಾಗೂ ಕೆಟ್ಟ ಪರಿಸ್ಥಿಯನ್ನು ಎದುರಿಸುವ ರೀತಿ ಮಾತ್ರ ಸಮಾಜಕ್ಕೆ ಮಾದರಿಯಾಗುತ್ತದೆ. ಈ ಕತೆಯಲ್ಲಿ ಹಲವು ಕುಟುಂಬಗಳ ಸಮಸ್ಯೆಗಳನ್ನು ಬಿಚ್ಚಿಡುತ್ತ,ಅಲ್ಲಿ ಮಹಿಳೆಯರು,ಮಕ್ಕಳು, ಹಿರಿಯರು ಹೇಗೆ ನಡೆದುಕೊಂಡರೆ,ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂಬುದನ್ನು ತುಂಬಾ ಮಾರ್ಮಿಕವಾಗಿ ಬರೆದಿರುವರು.ಕೊನೆಯಲ್ಲಿ ಮಕ್ಕಳನ್ನು ಪಡೆದು,ಅವರಿಗೆ ಮಾಡಬೇಕಾದ ನಮ್ಮ ಕರ್ತವ್ಯವನ್ನು ಮಾಡಿ,ಒಳ್ಳೆಯ ಪ್ರಜೆಗಳನ್ನಾಗಿ ಮಾಡಿದರೂ,ಮುಪ್ಪಿನಲ್ಲಿ ಅವರ ಆಶ್ರಯ ಮಾತ್ರ ಖಂಡಿತ ಬಯಸಬಾರದು.ಒಂದು ವೇಳೆ ಆ ಸನ್ನಿವೇಶ ಬಂದರೂ,ಅವರನ್ನು ನಾವು ನಿಯಂತ್ರಿಸದೆ,ನಮ್ಮನ್ನು ಅವರು ನಿಯಂತ್ರಿಸದೆ ಬಾಳುವಂತಾಗಲಿ ಎಂದು ದೇವರಲ್ಲಿ ಬೇಡುವ ಲಲಿತಾಳ ವಿಚಾರ ಧಾರೆ ತುಂಬಾ ಆಪ್ತವಾಗುತ್ತದೆ.

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books