ಮಧುಮಾಸ

Author : ಸವಿತಾ ಶ್ರೀನಿವಾಸ್

Pages 184

₹ 225.00




Year of Publication: 2021
Published by: ಅನುಸಂಶ್ರೀ ಫೌಂಡೇಶನ್
Address: ಬೆಂಗಳೂರು

Synopsys

'ಮಧುಮಾಸ' ಕೃತಿಯು ಸವಿತಾ ಶ್ರೀನಿವಾಸ್ ಅವರ ಸಾಮಾಜಿಕ ಕಾದಂಬರಿಯಾಗಿದೆ. ಲೇಖಕಿ ಕಾಲೇಜಿನಲ್ಲಿ ಅಂತಿಮ ಬಿಎಸ್ಸಿ ವ್ಯಾಸಂಗ ಮಾಡುವಾಗಲೇ 'ಮಂಗಳ' ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ 1990 ರಲ್ಲಿ ಈ ಕತೆಯು ಪ್ರಕಟವಾಯಿತು. ತದನಂತರ ಪುಸ್ತಕ ರೂಪದಲ್ಲಿ 1993ರಲ್ಲಿ ಹೊರಬಂದಿತು. ಈ ಕಾದಂಬರಿಯನ್ನು ಮುಖ್ಯ ಪಾತ್ರದಾರಿ ಸುಮ ಎಂಬ ಯುವತಿಯ ಸುತ್ತ ಕಥಾ ಹಂದರ ಹೆಣೆಯಲಾಗಿದ್ದು, ಆಕೆಯು ತನ್ನ ಬಾಳಿನಲ್ಲಿ ಎದುರಾಗುವ ಗಾಳಿ ಸುದ್ದಿಗಳಿಂದಾಗಿ ಜೀವನದಲ್ಲಿ ಆಘಾತವನ್ನೆದುರಿಸಿರುತ್ತಾಳೆ. ಈ ಅಹಿತಕರ ಘಟನೆಗಳ ನಂತರ ಅವಳನ್ನು ನಿರಾಕರಿಸಿದಾತನೇ ಮತ್ತೆ ಅವಳ ಬದುಕಲ್ಲಿ ಆಗಮಿಸಿದಾಗ ಅವಳು ಅವನನ್ನು ಸ್ವೀಕರಿಸುವಳೇ ಎಂಬುದು ಕಾದಂಬರಿಯಲ್ಲಿನ ಕುತುಹಲದ ವಿಷಯ. ಈ ಮಧ್ಯೆ ನೌಕರಿಯೊಂದನ್ನು ಹುಡುಕುತ್ತಾ ಬೇರೊಂದು ಪರಿಸರದಲ್ಲಿ ನೆಲೆ ಕಾಣಬೇಕೆಂದು ಗುಡ್ಡಗಾಡು ಪ್ರದೇಶದಲ್ಲಿನ ಟೀ ಎಸ್ಟೇಟ್‌ಗೆ ಆಗಮಿಸಿದಾಗ ಓರ್ವ ಯುವ ಪ್ಲಾಂಟರ್‌ನಲ್ಲಿ ತನ್ನ ನೆಲೆ ಕಾಣುತ್ತಾಳೆ.

About the Author

ಸವಿತಾ ಶ್ರೀನಿವಾಸ್

ಸವಿತಾ ಶ್ರೀನಿವಾಸ ಅವರು ಮೂಲತಃ ಬೆಂಗಳೂರಿನವರು.  ಸ್ನಾತಕೋತ್ತರ ಡಿಪ್ಲೊಮಾ (ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ) ಎಂ.ಎ.(ಯೋಗ) ಪದವಿ ಪಡೆದಿದ್ದಾರೆ. ತಂದೆ ಎಂ.ಸಿ. ಶ್ರೀನಿವಾಸ, ತಾಯಿ ರತ್ನಮ್ಮ. ಕೃತಿಗಳು : ಮಧುಮಾಸ (ಕಾದಂಬರಿ) ೧೯೯೩, ಈ ಮನದ ಆಕಾಶಗಂಗೆ (ಕಥಾ ಸಂಕಲನ) ೧೯೯೩, ಹಿಮಗಿರಿಯ ಹೇಮಲತೆ (ಕಾದಂಬರಿ) ೧೯೯೪, ರ‍್ಮನಿಯ ಒಡಲಲ್ಲಿ (ಪ್ರವಾಸ ಕಥನ) ೧೯೯೮, ಕನ್ನಡ ವೈಜ್ಞಾನಿಕ ಕತೆಗಳು (ಸಂಪಾದಿತ) ೨೦೦೦, ಶತಮಾನದಂಚಿನ ಮಿಂಚು (ಕಥಾ ಸಂಕಲನ) ೨೦೦೧, ಹೂಗುಚ್ಛ (ಪ್ರೌಢಮಕ್ಕಳ ಕತೆಗಳು) ೨೦೦೧, ಸಂಗೀತ ಚಿಕಿತ್ಸೆ (ವೈಜ್ಞಾನಿಕ) ೨೦೦೨, ಕಾಮನಬಿಲ್ಲ ಅರಸುವವರು (ದಶಕದ ಆಯ್ದಕತೆಗಳು) ೨೦೦೫, ...

READ MORE

Related Books