ಮುಚ್ಚಿದ ಬಾಗಿಲು

Author : ತ್ರಿವೇಣಿ

Pages 177

₹ 105.00




Year of Publication: 2015
Published by: ತ್ರಿವೇಣಿ ಪಬ್ಲಿಕೇಷನ್ಸ್
Address: #1195, ಬಾಲಕೃಷ್ಣರಾವ್ ರಸ್ತೆ, ಚಾಮರಾಜಪುರಂ, ಮೈಸೂರು-570005

Synopsys

ತ್ರಿವೇಣಿ ಅವರ ಕಾದಂಬರಿ-ಮುಚ್ಚಿದ ಬಾಗಿಲು. ವಿಧವೆಯರಿಗೂ ಮರುಮದುವೆಯಾಗಿ ಗಂಡನೊಂದಿಗೆ ಬಾಳಬೇಕು ಎಂಬ ಹಂಬಲ ಇರುತ್ತದೆ. ಅದಕ್ಕೆ ಸಮಾಜ ಅವಕಾಶ ನೀಡಬೇಕು ಎಂಬುದು ಕಾದಂಬರಿಯ ಒತ್ತಾಸೆ. ಮಾನವ ಸಹಜ ಲೈಂಗಿಕ ತೃಷೆಯ ತಣಿಸುವಿಕೆಯಲ್ಲಿ ವ್ಯಕ್ತಿಗತ ಹಾಗೂ ಸಾಮಾಜಿಕ ಆರೋಗ್ಯವೂ ಅಡಗಿದೆ ಎಂಬ ಸೂಕ್ಷ್ಮತೆಯ ಸಂದೇಶವನ್ನು ಇಲ್ಲಿ ನಿರೀಕ್ಷಿಸಬಹುದು. ವಿಧವೆಯು ವಿಧುರನೊಂದಿಗೆ ಅಥವಾ ಅವಿವಾಹಿತ ತರುಣನೊಂದಿಗೆ ಮದುವೆಯಾದರೆ ತಪ್ಪಿಲ್ಲ. ಕಥಾನಾಯಕಿ ವಿಧವೆಯು ಅವಿವಾಹಿತ ತರುಣನೊಂದಿಗೆ ಮದುವೆ ಮಾಡಿಕೊಳ್ಳುವುದು ಕಾದಂಬರಿಯು ಮುಕ್ತಾಯವೂ ಆಗಿದೆ.

About the Author

ತ್ರಿವೇಣಿ
(29 July 1963 - 05 July 1963)

ತ್ರಿವೇಣಿ ಎಂಬ ಬರಹನಾಮದಿಂದ ಪ್ರಸಿದ್ದರಾದ ಅನುಸೂಯ ಶಂಕರ್ ರವರು ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರು.  ತಂದೆ ಬಿ.ಎಮ್. ಕೃಷ್ಣಸ್ವಾಮಿ, ತಾಯಿ ತಂಗಮ್ಮ ಇವರ ಮಗಳಾಗಿ 1928 ರ ಸೆಪ್ಟಂಬರ್ 1 ರಂದು ಮೈಸೂರಿನಲ್ಲಿ ಇವರು ಜನಿಸಿದರು. ಹೈಸ್ಕೂಲ್ ವರೆಗಿನ ಶಿಕ್ಷಣ ಮಂಡ್ಯದಲ್ಲಿ ಹಾಗೂ ಕಾಲೇಜು ಶಿಕ್ಷಣ ಮೈಸೂರಿನಲ್ಲಿ ಆಯಿತು. 1947ರಲ್ಲಿ ಮಹಾರಾಜಾ ಕಾಲೇಜಿನಿಂದ ಮನ:ಶಾಸ್ತ್ರದಲ್ಲಿ ಚಿನ್ನದ ಪದಕದೊಂದಿಗೆ ಬಿ.ಎ.ಪದವಿ ಪಡೆದರು. ಕನ್ನಡದ ಕಣ್ವ ಬಿ.ಎಂ.ಶ್ರೀಯವರ ಸೋದರನ ಪುತ್ರಿಯಾಗಿದ್ದ ತ್ರಿವೇಣಿಯವರು ಸ್ತ್ರೀಯರು ಹೆಚ್ಚಾಗಿ ಬರೆಯದೇ ಇದ್ದ ಕಾಲದಲ್ಲಿ ಬರವಣಿಗೆ ಪ್ರಾರಂಬಿಸಿ ಕೆಲವೇ ವರ್ಷಗಳಲ್ಲಿ ಅಸಾಧಾರಣ ಜನಪ್ರಿಯತೆಯನ್ನು ಗಳಿಸಿದರು. 1953 ರಲ್ಲಿ ತ್ರಿವೇಣಿಯವರ ಮೊದಲನೆಯ ಕಾದಂಬರಿ ಪ್ರಕಟವಾಯಿತು. ಹತ್ತು ವರ್ಷಗಳಲ್ಲಿ ...

READ MORE

Related Books