ಗೊಂಡಾರಣ್ಯ

Author : ಶಿವರಾಮ ಕಾರಂತ

Pages 248

₹ 130.00




Year of Publication: 2015
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ. ಗಾಂಧಿನಗರ, ಬೆಂಗಳೂರು, 560009
Phone: 080 4011 4455

Synopsys

ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಸಂದರ್ಭದ ರಾಜಕೀಯ, ಭಾರತವನ್ನು ಬಿಡುವ ವೇಳೆ ಬ್ರಿಟಿಷರ ರಾಜಕಾರಣ, ಕುಯುಕ್ತಿಗಳು, ದೇಶದೊಳಗಿನ ಸಮಯ ಸಾಧಕರ ಚಿತ್ರಣವನ್ನು ಕಟ್ಟಿಕೊಡುವ ಹಿರಿಯ ಲೇಖಕ ಶಿವರಾಮ ಕಾರಂತರ ಕಾದಂಬರಿ -ಗೊಂಡಾರಣ್ಯ.

ನಾಲ್ಕೂವರೆ ದಶಕಗಳ ಹಿಂದೆ ಬರೆದಿದ್ದ ಕಾದಂಬರಿಯ ಮೂಲಕ ಕಾರಂತರು - ರಾಜಕೀಯ ಭಯೋತ್ಪಾದನೆಯ ಹುಟ್ಟಿನ ಬಗ್ಗೆ ಶಕುನ ನುಡಿದಿದ್ದು , ಇಂದು ಜಾಗತಿಕ ಸತ್ಯವಾಗಿ ಪರಿಣಮಿಸಿದೆ. ಗೊಂಡಾರಣ್ಯದ ರಾಜಕೀಯ ಗೂಂಡಾರಾಜ್ಯವಾಗುವ ಸ್ಥಿತಿಗೆ ತಲುಪುವ ವಿವಿಧ ಹಂತಗಳನ್ನು ಕಾದಂಬರಿಕಾರರು ಚಿತ್ರಿಸಿದ್ದನ್ನು ಭಾರತ ದೇಶದ ಪ್ರಚಲಿತ ರಾಜಕೀಯ ವಿದ್ಯಮಾನಗಳೊಂದಿಗೆ ಹೋಲಿಸಬಹುದು.

ಭಾರತದ ಅನೇಕ ಸಣ್ಣ ಸಂಸ್ಥಾನಗಳ ಪೈಕಿ ಗೊಂಡಾರಣ್ಯವೂ ಒಂದು. ಆ ರಾಜ್ಯದ ಅರಸ-ಪ್ರತಾಪಚಂದ್ರ. ಭಾರತ ಸ್ವತಂತ್ರವಾಗುತ್ತಿದ್ದಂತೆ ಗೊಂಡಾರಣ್ಯದಲ್ಲಿ ಅರಸನ ವಿರುದ್ಧ ಘೋಷಣೆಗಳು ಕೇಳಿ ಬಂದವು. ಪ್ರಜಾಪ್ರತಿನಿಧಿಯಾಗಿದ್ದ ಹಿಂಜಿ ವಾಮನರಾವ್ ಅವರಿಗೆ ಸ್ವತಃ ಅರಸ ಪ್ರತಾಪಚಂದ್ರನೇ ಸ್ವಾಗತಿಸುವಂತಾಯಿತು. ಜನರಿಗೆ ವಾಮನರಾಯರಿಂದ ಭರವಸೆಗಳ ಮೇಲೆ ಭರವಸೆಗಳು ದೊರೆಯುತ್ತಲೇ ಹೋಯಿತು. ಒಂದು ಸಮಾರಂಭದಲ್ಲಿ ಗುಂಡಿನ ಶಬ್ದ ಕೇಳಿ ಅರಾಜಕತೆ ಸೃಷ್ಟಿಯಾಗುತ್ತದೆ. ವಿಕ್ರಮನಗರದ ಹತ್ತಿ ಗಿರಣಿಯಲ್ಲಿ ಸಂಪು ನಡೆದು ಗಿರಣಿಯನ್ನೇ ಸುಡುತ್ತಾರೆ. ವಾಮನರಾಯರ ಸಹಚರರು ತಾವು ಕಡಿಮೆಯೇನಲ್ಲ ಎಂಬ ಭಾವ ಬಲಿಯುತ್ತದೆ. ವಿರೋಧಿಗಳು ಹೆಚ್ಚುತ್ತಾರೆ. ಮುಂದೆ ಚುನಾವಣೆಯಲ್ಲಿ ಅರುಣಾಚಲಯ್ಯ ವಿರುದ್ಧ ಸ್ಪರ್ಧಿಸಿ ಸೋಲುತ್ತಾನೆ. ಅರುಣಾಚಲಯ್ಯನು ರಾಜಕಾರಣದಲ್ಲಿ ಪ್ರಾಮಾಣಿಕ ಸೇವೆ ಇರಬೇಕೆಂದು ಪ್ರತಿಪಾದಿಸುತ್ತಾನೆ. ಕಾಂಚನಮಾಲೆಯು ಈತನಿಗೆ ಸಹಕರಿಸುತ್ತಾಳೆ. ಒಂದು ಹಂತದಲ್ಲಿ, ಅರಣಾಚಲಯ್ಯನು ರಸ್ತೆ ಅಪಘಾತದಲ್ಲಿ ಸಾಯುತ್ತಾನೆ. ಇದಕ್ಕೆ ರಾಜಕೀಯ ಪಿತೂರಿಯೂ ಇರುತ್ತದೆ. ಮುಂದೊಂದು ದಿನ ಚುನಾವಣೆ ನಡೆದು ಕಾಂಚನಮಾಲೆ ಗೆಲುವು ಪಡೆಯುತ್ತಾಳೆ. ಇವರು ಕಟ್ಟಿಸಿದ್ದ ನಿರ್ಕಟ್ಟೆಯನ್ನು ಯಾರೊ ಒಬ್ಬರು ಬಾಂಬ್ ಇಟ್ಟು ಸಿಡಿಸುತ್ತಾರೆ. ಜನರು ನೀರಿನಲ್ಲಿ ತೇಲುತ್ತಾರೆ. ಉಳಿದ ಹೆಣಗಳ ಪೈಕಿ ಕಾಂಚನಮಾಲೆಯ ಶವವೂ ಸಿಗದು. ಆದರೆ, ಗೊಂಡಾರಣ್ಯವನ್ನು ಬದುಕುಳಿಸುವ ಕೆಲಸ ನಿಮ್ಮದು’ ಎಂಬ  ಅವಳ ಮರಣಪೂರ್ವ ಹೇಳಿಕೆಯನ್ನು ಈಡೇರಿಸಲು ಕಾಂಚನಮಾಲೆಯ ಆಪ್ತರಾದ ರಾಮದಾಸ ಹಾಗೂ ತಿರುಮೂರ್ತಿ ಸಂಕಲ್ಪ ತೊಡುತ್ತಾರೆ. 

ಭಯೋತ್ಪಾದಕ ಚಟುವಟಿಕೆಗಳ ಮೂಲಕ ಸರಕಾರದ ನಾಯಕಿಯನ್ನು ಆಕೆಯ ಹಿಂಬಾಲಕರನ್ನು ನಾಶಮಾಡುವ ರುದ್ರನಾಟಕೀಯ ಸನ್ನಿವೇಶದೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ.
ಬೆಂಗಳೂರಿನ ವಾಹಿನಿ ಪ್ರಕಾಶನವು 1954ರಲ್ಲಿ (ಪುಟ:256) ಈ ಕಾದಂಬರಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು. 

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books