ಹಿಂದೂ ಮುಸಲ್ಮಾನರ ಐಕ್ಯ

Author : ಭಿ.ಪ. ಕಾಳೆ

Pages 40

₹ 0.00




Year of Publication: 1952
Published by: ಭಿ.ಪ. ಕಾಳೆ
Address: ಶ್ರೀ ಶೇಷಾಚಲ ಪ್ರೆಸ್, ಮದಿಹಾಳ, ಧಾರವಾಡ

Synopsys

ಹಿಂದೂ ಮುಸಲ್ಮಾನರ ಐಕ್ಯತೆಯನ್ನು ಬಿಂಬಿಸುವ ಹಾಗೂ ಭಿ.ಪ. ಕಾಳೆ ಅವರು ಬರೆದಿರುವ ಐತಿಹಾಸಿಕ ಕಾದಂಬರಿ ಇದು. ಭಾರತವು ಧರ್ಮ ಸಾಮರಸ್ಯದ ತಾಣ. ಅದನ್ನು ಯಾರು ಎಷ್ಟೇ ಕದಡಿಸಲು ಯತ್ನಿಸಿದರೂ ಅವರ ಕೆಟ್ಟ ಆಲೋಚನೆಗಳು ಫಲ ನೀಡಲಾರವು. ಹಿಂದೂ-ಮುಸಲ್ಮಾನರಲ್ಲಿ ಭೇದ ಹುಟ್ಟಿಸುವ ಜನರು ಇರುವಂತೆಯೇ ಹಿಂದೂ ಮುಸಲ್ಮಾನರಲ್ಲೂ ಕೋಮು-ಧರ್ಮದ  ಸಾಮರಸ್ಯ ಕಾಯ್ದುಕೊಳ್ಳುವ ಒಂದು ಅಂತರ್ಗತ ಶಕ್ತಿ ಈ ದೇಶದಲ್ಲಿದೆ. ಯಾವನು ಧರ್ಮವನ್ನು ರಕ್ಷಿಸುವನೋ ಆತನನ್ನು ಧರ್ಮವು ರಕ್ಷಿಸುತ್ತದೆ ಎಂಬುದನ್ನು ಸಾರಿ ಹೇಳುವ ಕಥೆ ಇದು. ಈ ಕಾದಂಬರಿಯು 3ನೇ ಆವೃತ್ತಿ ಕಂಡಿದೆ.

About the Author

ಭಿ.ಪ. ಕಾಳೆ
(20 January 1889)

ಭಿಕಾಜಿಪಂತ ಕಾಳೆ ಎಂಬುದು  ಪೂರ್ಣ ಹೆಸರು. ಭಿ.ಪ.ಕಾಳೆ ಎಂದೇ ಖ್ಯಾತಿ. ಹೆಸರಾಂತ ಕಾದಂಬರಿಕಾರರು. ಪ್ರಕಾಶಕ-ಮುದ್ರಕರೂ ಹೌದು. ತಂದೆ ಪರಶುರಾಮ ಪಂತ ಕಾಳೆ. ಧಾರವಾಡ ಜಿಲ್ಲೆಯ ಕುಂದುಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ 1889ರ ಜನವರಿ 20ರಂದು ಹುಟ್ಟಿದರು. ಕುರಂದವಾಡ ಸಂಸ್ಥಾನಿಕರ ಅಧೀನದಲ್ಲಿದ್ದ ಈ ಪ್ರದೇಶ ಪಟವರ್ಧನ ಸಂಸ್ಥಾನಿಕರ ಆಡಳಿತಕ್ಕೆ ಒಳಪಟ್ಟಿತ್ತು. ಸಂಸ್ಥಾನಿಕರ ಮನೆ ಮಾತು ಮರಾಠಿ. ಆಡಳಿತದ ಭಾಷೆಯೂ ಮರಾಠಿ.  ಸಂಶಿ ಗ್ರಾಮವು ಮರಾಠಿಮಯವೇ ಆಗಿತ್ತು. ಮಹಾರಾಷ್ಟ್ರದಿಂದ ಪಟವರ್ಧನ ಸಂಸ್ಥಾನಕ್ಕೆ ಬಂದು ಅಲ್ಲಿಯ ಬೇರೆ ಬೇರೆ ಊರುಗಳಲ್ಲಿ ನೆಲಸಿದ ಚಿತ್ಪಾವನ (ಕೊಂಕಣಸ್ಥ) ಬ್ರಾಹ್ಮಣ ಮನೆತನಗಳಲ್ಲಿ ಕಾಳೆ ಕುಟುಂಬವೂ ಒಂದು. ಈ ಕುಂಟುಂಬ ಸಾಂಸಿಯಲ್ಲಿ ...

READ MORE

Related Books