ಘಾತುಕ ಶಿತಿಕಂಠ

Author : ಭಿ.ಪ. ಕಾಳೆ

Pages 112

₹ 0.00




Year of Publication: 1930
Published by: ಭಿ.ಪ. ಕಾಳೆ
Address: ಶ್ರೀ ಶೇಷಾಚಲ ಪ್ರೆಸ್, ಅನಂದವನ (ಅಗಡಿ) ಹಾವೇರಿ

Synopsys

ಲೇಖಕ ಭಿ.ಪ. ಕಾಳೆ ಅವರು ಬರೆದ ಕಾದಂಬರಿ-ಘಾತುಕ ಶಿತಿಕಂಠ. ಇದೊಂದು ಪ್ರೇಮ ಕಥಾ ಪ್ರಸಂಗ. ಶಿತಿಕಂಠನು ಸುಕುಮಾರಿಯನ್ನು ಪ್ರೇಮಿಸಿದ್ದು, ಮದುವೆಯಾಗುವುದು ಸುಶೀಲೆಯನ್ನು. ಏನಲ್ಲ ಘಟನೆ-ಸನ್ನಿವೇಶಗಳ ಬದಲಾವಣೆಗಳ ನಂತರ ಅಂತಿಮವಾಗಿ ಕಾದಂಬರಿ ಪೂರ್ಣಗೊಳ್ಳುವುದು ಸುಕುಮಾರಿಯ ಹೆಣ ಕೆರೆಯಲ್ಲಿ ತೇಲುವ ಮೂಲಕ. ಆಕೆ ಬರೆದ ಚೀಟಿ. ತನ್ನ ಸಾವಿಗೆ ಯಾರೂ ಕಾರಣರಲ್ಲ’ ಎಂಬುದು. ಹೀಗೆ ದುರಂತದಲ್ಲಿ ಕಾದಂಬರಿ ಕೊನೆಗೊಳ್ಳುತ್ತದೆ.

About the Author

ಭಿ.ಪ. ಕಾಳೆ
(20 January 1889)

ಭಿಕಾಜಿಪಂತ ಕಾಳೆ ಎಂಬುದು  ಪೂರ್ಣ ಹೆಸರು. ಭಿ.ಪ.ಕಾಳೆ ಎಂದೇ ಖ್ಯಾತಿ. ಹೆಸರಾಂತ ಕಾದಂಬರಿಕಾರರು. ಪ್ರಕಾಶಕ-ಮುದ್ರಕರೂ ಹೌದು. ತಂದೆ ಪರಶುರಾಮ ಪಂತ ಕಾಳೆ. ಧಾರವಾಡ ಜಿಲ್ಲೆಯ ಕುಂದುಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ 1889ರ ಜನವರಿ 20ರಂದು ಹುಟ್ಟಿದರು. ಕುರಂದವಾಡ ಸಂಸ್ಥಾನಿಕರ ಅಧೀನದಲ್ಲಿದ್ದ ಈ ಪ್ರದೇಶ ಪಟವರ್ಧನ ಸಂಸ್ಥಾನಿಕರ ಆಡಳಿತಕ್ಕೆ ಒಳಪಟ್ಟಿತ್ತು. ಸಂಸ್ಥಾನಿಕರ ಮನೆ ಮಾತು ಮರಾಠಿ. ಆಡಳಿತದ ಭಾಷೆಯೂ ಮರಾಠಿ.  ಸಂಶಿ ಗ್ರಾಮವು ಮರಾಠಿಮಯವೇ ಆಗಿತ್ತು. ಮಹಾರಾಷ್ಟ್ರದಿಂದ ಪಟವರ್ಧನ ಸಂಸ್ಥಾನಕ್ಕೆ ಬಂದು ಅಲ್ಲಿಯ ಬೇರೆ ಬೇರೆ ಊರುಗಳಲ್ಲಿ ನೆಲಸಿದ ಚಿತ್ಪಾವನ (ಕೊಂಕಣಸ್ಥ) ಬ್ರಾಹ್ಮಣ ಮನೆತನಗಳಲ್ಲಿ ಕಾಳೆ ಕುಟುಂಬವೂ ಒಂದು. ಈ ಕುಂಟುಂಬ ಸಾಂಸಿಯಲ್ಲಿ ...

READ MORE

Related Books